ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
“ಪ್ರತಿಯೊಬ್ಬರಿಗೂ ಸಮಾನ ಅವಕಾಶ ಮತ್ತು ಸಾಧ್ಯತೆಯನ್ನು ಒದಗಿಸುವ ಹಾಗೂ ದೇಶದಲ್ಲಿ ಅವರ ಜೀವನಕ್ಕೆ ಪೂರ್ಣ ಅಭಿವ್ಯಕ್ತಿ ಕಂಡುಕೊಳ್ಳುವ ಸಾಧ್ಯತೆಯನ್ನು ಒದಗಿಸುವ ನಿಟ್ಟಿನಲ್ಲಿ ನಾವು ರಾಷ್ಟ್ರವನ್ನು ಕರೆದೊಯ್ಯಬೇಕು. ಭವ್ಯ ಭಾರತದ ನಿರ್ಮಾಣದಲ್ಲಿ, ಪ್ರತಿಯೊಬ್ಬರಿಗೂ ತನ್ನದೇ ಅದ ಒಂದು ಪಾತ್ರವಿದೆ, ವಿಶೇಷವಾಗಿ ಈ ರಾಷ್ಟ್ರದ ಯುವಕರಿಗೆ – ನೀವು ಎದ್ದುನಿಂತು ಸರಿಯಾದ ಕೆಲಸಗಳನ್ನು ಮಾಡಬೇಕೆಂದು ನಾನು ನಿಮ್ಮನ್ನು ಕೋರುತ್ತೇನೆ” ಎಂದು ಈಶಾ ಫೌಂಡೇಶನ್ನ ಸ್ಥಾಪಕರಾದ ಸದ್ಗುರುಗಳು ಹೇಳಿದರು. ನಮ್ಮ ವೈವಿಧ್ಯತೆಗಳನ್ನು ಆಚರಿಸುವ ಜೊತೆಗೆ ಭಾರತದ ಅನ್ಯೋನ್ಯತೆಯನ್ನು ಉಳಿಸಿಕೊಳ್ಳಬೇಕು ಎಂದು ಸ್ವಾತಂತ್ರ್ಯ ದಿನದ ವಿಡಿಯೋದಲ್ಲಿ ಸ್ಪೂರ್ತಿದಾಯಕ ಸಂದೇಶವನ್ನು ನೀಡಿದರು. “ನಾವು ಈ ರಾಷ್ಟ್ರವನ್ನು ಏಕತೆಯ ಆಧಾರದ ಮೇಲೆ ರಚನೆ ಮಾಡಿಲ್ಲ, ಬದಲಾಗಿ ನಮ್ಮದೇ ಆದ ವಿವಿಧ ಜೀವನಶೈಲಿಯ ಆಧಾರದ ಮೇಲೆ ರಚಿಸಿದ್ದೇವೆ. ಎಲ್ಲ ರೀತಿಯಲ್ಲೂ, ನಾವು ಅತ್ಯಂತ ವರ್ಣರಂಜಿತ ರಾಷ್ಟ್ರವಾಗಿದ್ದೇವೆ. ಈ ರೀತಿಯ ಜೀವನಶೈಲಿಯನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ,” ಎಂದು ಅವರು ಪ್ರತಿಪಾದಿಸಿದರು.
ಸಾಂಕ್ರಾಮಿಕ ಪಿಡುಗಿನ ನಂತರದ ದಿನಗಳಲ್ಲಿ, ಭಾರತಕ್ಕೆ ದೊರೆತಿರುವ ಅವಕಾಶಗಳ ಬಗ್ಗೆ ಮಾತನಾಡುತ್ತಾ ಅವರು, ಏಷ್ಯಾದ ಇತರ ದೇಶಗಳಿಗೆ ಹೋಲಿಸಿದರೆ ಭಾರತವು, ಅಭಿವೃದ್ಧಿಯಿಂದ ಕನಿಷ್ಠ 25 ವರ್ಷ ಹಿಂದೆ ಉಳಿದಿದೆ ಹಾಗು ಈಗ ಆ ನ್ಯೂನತೆಗಳನ್ನು ಸರಿದೂಗಿಸುವ ಉತ್ತಮವಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು. ಆದಾಗ್ಯೂ, ಹಿಂದಿನ ತಪ್ಪುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಈ ಸಮಯದ “ಪ್ರಚಂಡ ಸಾಧ್ಯತೆಯ” ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸಬೇಕೆಂದು ಅವರು ಜನರನ್ನು ಕೇಳಿಕೊಂಡರು.
ನಮ್ಮ ದೇಶದಲ್ಲಿರುವ ಚಾಣಾಕ್ಷತೆ, ಜ್ಞಾನ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಶಕ್ತಿಯ ಹೊರತೂ ಬೇರೆ ಬೇರೆ ದೇಶಗಳಲ್ಲಿ ನಾವು ಛಾಪು ಮೂಡಿಸಲು ಸಾಧ್ಯವಾಗಿಲ್ಲ. ಇದು ಅಭಿವೃದ್ಧಿ ಮತ್ತು ಯೋಗಕ್ಷೇಮದ ಕಡೆಗೆ ನಮ್ಮ ಶಕ್ತಿಮೀರಿ ಮುನ್ನುಗ್ಗುವ ನಿಟ್ಟಿನಲ್ಲಿ ಸರಿಯಾದ ಸಮಯ ಎಂದು ಅವರು ಒತ್ತಿ ಹೇಳಿದರು.
ತಾವು ಬಹಳ ಜನಪ್ರಿಯತೆ ಹೊಂದಿರುವ ಭಾರತೀಯ ಯುವಜನತೆಗೆ ವಿಶೇಷ ಸಂದೇಶವನ್ನು ನೀಡುತ್ತಾ ಸದ್ಗುರುಗಳು ಅವರನ್ನು ಉದ್ದೇಶಿಸಿ, “ಈ ರಾಷ್ಟ್ರದ ಭವಿಷ್ಯವು ಅಡಕವಾಗಿರುವುದು – ನಿಮ್ಮ ಕೌಶಲ್ಯಗಳ ಮೇಲೆ, ನಿಮ್ಮ ಸಾಮರ್ಥ್ಯದ ಮೇಲೆ, ನಿಮ್ಮ ಛಲದ ಮೇಲೆ ಮತ್ತು ಈ ದೇಶದಲ್ಲಿ ಪ್ರೇರಿತ ರೀತಿಯಲ್ಲಿ ಹೇಗೆ ಕಾರ್ಯನಿರ್ವಹಿಸುತ್ತೀರಿ ಎಂಬುದರ ಮೇಲೆ ಎಂದು ನೀವು ಅರ್ಥಮಾಡಿಕೊಳ್ಳಬೇಕು” ಎಂದು ತಿಳಿ ಹೇಳಿದರು.
ಹೆಚ್ಚುತ್ತಿರುವ ಸಾಂಕ್ರಾಮಿಕ ಪಿಡುಗಿನ ನಡುವೆ ಭಾರತ ತನ್ನ 74 ನೇ ಸ್ವಾತಂತ್ರ್ಯ ದಿನವನ್ನು ತಗ್ಗಿದ ಪ್ರಮಾಣದಲ್ಲಿ ಆಚರಿಸುತ್ತಿದೆ. ಈ ಬಾರಿ ಕೆಂಪು ಕೋಟೆಯಲ್ಲಿನ ಸಾಂಪ್ರದಾಯಿಕ ಆಚರಣೆಗಳು ಸಾಮಾನ್ಯವಾಗಿ ಸಾಕ್ಷಿಯಾಗುವ ಕಾಲು ಭಾಗದಷ್ಟು ಜನರಿಗೆ ಮಾತ್ರ ತೆರೆದಿರುತ್ತವೆ. ಶಾಲೆಗಳು ಸಹ ಈ ಸಂದರ್ಭದಲ್ಲಿ ಆಚರಿಸುವಂತಿಲ್ಲ. ಸ್ವಾತಂತ್ರ್ಯ ದಿನವನ್ನು ಮನೆಯಲ್ಲಿಯೇ ಆಚರಿಸುವಂತೆ ಹಾಗು ದೊಡ್ಡ ಕೂಟಗಳನ್ನು ಸೇರದಿರುವಂತೆ ಸರ್ಕಾರವು ಜನರಿಗೆ ವಿನಂತಿಸಿದೆ.
ಗ್ಯಾನವಾಪಿಯಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ನೀಡಿದ್ದೇಕೆ ಹೈಕೋರ್ಟ್..?
ವಿಜಯಪುರದಲ್ಲಿ ಸ್ವಾತಂತ್ರ್ಯ ದಿನಾಚರಣೆ :ಸಚಿವೆ ಶಶಿಕಲಾ ಜೊಲ್ಲೆ ಜೊತೆ ದಲಿತ ಸಂಘಟನೆ ವಾಗ್ವಾದ
ಲಡಾಖ್ನಲ್ಲಿ 74ನೇ ಸ್ವಾತಂತ್ರ್ಯೋತ್ಸವ: 17 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ತ್ರಿವರ್ಣ ಧ್ವಜ ಹಾರಿಸಿ ಯೋಧರ ಸಂಭ್ರಮ
ಬಾಗಲಕೋಟೆಯಲ್ಲಿ ಡಿಸಿಎಂ ಕಾರಜೋಳ ಧ್ವಜಾರೋಹಣ
ಕೆಂಪುಕೋಟೆಯಲ್ಲಿ ಸರಳ ಸ್ವಾತಂತ್ರ್ಯೋತ್ಸವದ ಕಂಪು- ಆತ್ಮನಿರ್ಭರ ಭಾರತಕ್ಕೆ ಪ್ರಧಾನಿ ಮೋದಿ ಒತ್ತು- ನ್ಯಾಷನಲ್ ಹೆಲ್ತ್ ಮಿಷನ್, ಡಿಜಿಟಲ್ ಇಂಡಿಯಾ ಕಡೆ ಸರ್ಕಾರದ ನಡೆ
4 ಸಾವಿರ ಅಡಿ ರಂಗೋಲಿಯಲ್ಲಿ ರಾಷ್ಟ್ರೀಯ ಧ್ವಜ ಅನಾವರಣ: ವಿದ್ಯಾರ್ಥಿಗಳಿಂದ ದೇಶ ಪ್ರೇಮದ ಪಾರಮ್ಯ