Featured
ತುಮಕೂರಿನಲ್ಲಿ ಕೋವಿಡ್ಗೆ ನಾಲ್ವರ ಬಲಿ: 92 ಹೊಸ ಕೇಸ್:67 ಮಂದಿ ಡಿಸ್ಚಾರ್ಜ್
![](https://risingkannada.com/wp-content/uploads/2020/07/corona-tumkur-2.jpg)
ರೈಸಿಂಗ್ ಕನ್ನಡ:
ತುಮಕೂರು:
ಜಿಲ್ಲೆಯಲ್ಲಿ ಕೊರೊನಾ ಮರಣ ಮೃದಂಗ ಬಾರಿಸಿದ್ದು ನಾಲ್ವರನ್ನ ಬಲಿ ತೆಗೆದುಕೊಂಡಿದೆ. ಇನ್ನು ಸೋಂಕಿನಲ್ಲೂ ಅಬ್ಬರಿಸಿದೆ.
ಜಿಲ್ಲೆಯಲ್ಲಿ ಇಂದು ನಾಲ್ವರ ಸಾವು
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಇಂದು ಕೂಡ 4 ಜನ ಸೊಂಕಿತರು ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ. ತುಮಕೂರಿನ ಎಸ್ ಎಸ್ ಪುರಂ ನಲ್ಲಿ 52 ವರ್ಷದ ವ್ಯಕ್ತಿ, ಕುಣಿಗಲ್ ತಾಲ್ಲೂಕು ಹೊಸಪಾಳ್ಯ ದಲ್ಲಿ 67 ವರ್ಷದ ವೃದ್ದ, ಹಾಗೂ ತಿಪಟೂರು ತಾಲ್ಲೂಕು ಗೋವಿಂದಪುರ ಬಡಾವಣೆಯಲ್ಲಿ 55 ವರ್ಷದ ವ್ಯಕ್ತಿ, ಪಾವಗಡ ತಾಲ್ಲೂಕಿನ ವೈ ಎನ್ ಹೊಸಕೋಟೆಯಲ್ಲಿ 64 ವರ್ಷದ ವೃದ್ದೆ ಕೊರೊನಾಗೆ ಬಲಿಯಾಗಿದ್ದಾರೆ. ಉಸಿರಾಟ ಹಾಗೂ ಜ್ವರ ದಿಂದ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೇ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಜಿಲ್ಲೆಯಲ್ಲಿ ಈವರೆಗೆ ಒಟ್ಟು 96 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
![](https://risingkannada.com/wp-content/uploads/2020/07/corona-in-tumkur-2.jpg)
92 ಮಂದಿ ಹೊಸ ಸೋಂಕಿತರು
ಶುಕ್ರವಾರ 92 ಜನರಿಗೆ ಕೊವಿಡ್ 19 ಪಾಸಿಟಿವ್ ಬಂದಿದ್ದು ಸೊಂಕಿತರ ಸಂಖ್ಯೆ 3,211 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕು ವಾರು ಹೊಸ ಪ್ರಕರಣಗಳು
ತುಮಕೂರು 31 , ಚಿ ನಾ ಹಳ್ಳಿ 6, ಪಾವಗಡ 9, ತಿಪಟೂರು 8, ಮದುಗಿರಿ 10, ಕೊರಟಗೆರೆ 7, ಕುಣಿಗಲ್ 9, ತುರುವೇಕೆರೆ 5, ಶಿರಾ 3, ಗುಬ್ಬಿ 4, ಒಟ್ಟು 92 ಜನ ಸೊಂಕಿತರು ಇಂದು ಪತ್ತೆಯಾಗಿದ್ದಾರೆ.
67 ಜನ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್
ಜಿಲ್ಲೆಯಲ್ಲಿ ಇಂದು 67 ಜನ ಸೊಂಕಿತರು ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಈವರೆಗೆ 1043 ಜನರು ಗುಣಮುಖರಾಗಿದ್ದಾರೆ. . ಉಳಿದ 1040 ಮಂದಿ ಸಕ್ರಿಯ ಸೊಂಕಿತರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?