Featured
ಪ್ರತಿಮೆ ಮೇಲೆ ಎಸ್ಡಿಪಿಐ ಬಾವುಟ: ಬೆಂಗಳೂರಿನ ರಾಮಕೃಷ್ಣ ಆಶ್ರಮದಲ್ಲಿ ಪ್ರತಿಭಟನೆ

ರೈಸಿಂಗ್ ಕನ್ನಡ :
ಬೆಂಗಳೂರು:
ಶೃಂಗೇರಿಯ ಶಂಕರಾಚಾರ್ಯರ ವೃತ್ತದಲ್ಲಿ ಶಂಕರಾಚಾರ್ಯರ ಪ್ರತಿಮೆ ಮೇಲೆ ಎಸ್.ಡಿ.ಪಿ.ಐ. ಬಾವುಟ ಹಾರಿಸಿರುವ ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿ ಶುಕ್ರವಾರ ಬೆಂಗಳೂರು ಬಸವನಗುಡಿ ಯಲ್ಲಿರುವ ರಾಮಕೃಷ್ಣ ಆಶ್ರಮದ ಬಳಿ ಪ್ರತಿಭಟನೆ ಮಾಡಲಾಯಿತು.
ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ರಾದ ಹೆಚ್.ಎಸ್.ಸಚ್ಚಿದಾನಂದ ಮೂರ್ತಿ ಅವರು ಪ್ರತಿಭಟನೆ ಯಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ.
ಬೆಂಗಳೂರು ನಗರದಲ್ಲಿ ನಡೆದ ಘಟನೆ ಹಾಗೂ ಶೃಂಗೇರಿ ಯಲ್ಲಿ ನಡೆದ ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿದರು, ತಕ್ಷಣವೇ ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಮತೀಯ ಸಂಘಟನೆಗಳಾದ SDPI ಹಾಗೂ PFI ಗಳನ್ನು ನಿಷೇದಿಸಬೇಕು ಎಂದು ಒತ್ತಾಯಿಸಿದರು, ಪ್ರತಿಭಟನೆ ಯಲ್ಲಿ ಮತೀಯ ಸಂಘಟನೆಯ ವಿರುದ್ದ ಘೋಷಣೆ ಕೂಗಲಾಯಿತು.
ನಿರ್ದೇಶಕರಾದ ಕೆ.ಎನ್.ಛಾಯಾಪತಿ, ಡಿ.ವಿ.ರಾಜೇಂದ್ರ ಪ್ರಸಾದ್, ರಾಘವೇಂದ್ರ ಭಟ್, ಮಹಾಸಭೆಯ ಮಾಜಿ ಖಜಾಂಚಿ ತಾರಾನಾಥ್, ಬಸವನಗುಡಿ ಕ್ಷೇತ್ರ ಬ್ರಾಹ್ಮಣ ಸಂಘದ ಪದಾಧಿಕಾರಿಗಳಾದ ಟಿ.ಎಲ್.ಎಸ್.ಕುಮಾರ್, ಎಸ್.ವಿಜಯಕುಮಾರ್, ಶಂಕರ ಪ್ರಸಾದ್, ನರಸಿಂಹ ಹೆಗಡೆ, ಸತೀಶ್, NCB ಯ ಉಪಾಧ್ಯಕ್ಷ ಸತ್ಯನಾರಾಯಣ, ಬ್ರಾಹ್ಮಣ ಸಂಘಗಳ ಪದಾಧಿಕಾರಿಗಳು ರಥಯಾತ್ರೆ ಸುರೇಶ್, ಬಸವನಗುಡಿ ಕ್ಷೇತ್ರ ಬ್ರಾಹ್ಮಣ ಸಂಘ ಹಾಗೂ ಮಟದ ಭಕ್ತರು ಭಾಗವಹಿಸಿದ್ದರು,
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?