Featured
“ಸೀತಾಯಣ” ಮುನ್ನಡಿಗೆ ರೆಡಿ-ಸ್ಯಾಂಡಲ್ವುಡ್ಗೆ ಎಂಟ್ರಿಕೊಡ್ತಿದ್ದಾರೆ ಯಂಗ್ ಸುಪ್ರೀಂ ಹೀರೋ…!

ರೈಸಿಂಗ್ ಕನ್ನಡ:
ಬೆಂಗಳೂರು:
ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಯಂಗ್ ಸುಪ್ರೀಂ ಅಕ್ಷಿತ್ ಶಶಿಕುಮಾರ್ ಬೆಳ್ಳಿತೆರೆಗೆ ಕಾಲಿಡಲು ಸಜ್ಜಾಗಿದ್ದಾರೆ. ಸೀತಾಯಣ ಅನ್ನುವ ವಿಶೇಷ ಕಥಾ ಹಂದರ ಹೊಂದಿರುವ ಚಿತ್ರದ ಮೂಲಕ ಅಕ್ಷಿತ್ ಸ್ಯಾಂಡಲ್ವುಡ್ ಪ್ರವೇಶಿಸಲಿದ್ದಾರೆ. ಸೀತಾಯಣ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡಗಡೆಯಾಗಲಿದೆ.
ಈಗಾಗಲೇ ಸೀತಾಯಣ ಚಿತ್ರತಂಡ ರಿ ರೆಕಾರ್ಡಿಂಗ್, ಡಬ್ಬಿಂಗ್, ಡಿಟಿಎಸ್, ಫೈನಲ್ ಮಿಕ್ಸಿಂಗ್ ಕೆಲಸವನ್ನು ರಾಜೇಶ್ ರಾಮನಾಥ್ ಸ್ಟುಡಿಯೋದಲ್ಲಿ ಮುಗಿಸಿಕೊಳ್ಳುತ್ತಿದೆ. ಕಾಲರ್ ಕ್ಲೌಡ್ಸ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಲಲಿತಾ ರಾಜ್ಯಲಕ್ಷ್ಮೀ ಈ ಚಿತ್ರದ ನಿರ್ಮಾಪಕರು. ಕಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಸೀತಾಯಣ ಏಕಕಾಲಕ್ಕೆ ಬಿಡುಗಡೆಯಾಗಲಿದೆ.
ಸೀತಾಯಣ ಭಾವನೆಗಳಿಗೆ ಅರ್ಥವನ್ನು ಹೇಳುತ್ತಾ ಸಾಗುವ ಪಯಣದಲ್ಲಿ ಎದುರಾಗುವ ಸಮಸ್ಯೆಗಳು ಯಾವ ತಿರುವಿಗೆ ಮನುಷ್ಯನನ್ನು ಒಯ್ಯುತ್ತವೆ ಅನ್ನುವ ಕಥಾಹಂದರ ಹೊಂದಿದೆ. ನಾಯಕ ಯಾರ ಮೇಲೆ ಯಾಕೆ ಹೋರಾಟ ಮಾಡುತ್ತಾನೆ ಅನ್ನುವುದನ್ನು ಚಿತ್ರ ನೋಡಿದರೆ ತಿಳಿಯುತ್ತದೆ. ಚಿತ್ರವನ್ನು ಪ್ರಭಾಕರ್ ಅರಿಪಾಕ ನಿರ್ದೇಶಿಸುತ್ತಿದ್ದಾರೆ.
ಚಿತ್ರವನ್ನು ಎಲ್ಲಿಯೂ ಕಾಂಪ್ರಮೈಸ್ ಆಗದಂತೆ ನಿರ್ಮಾಣ ಮಾಡಿದ್ದೇವೆ. 63 ದಿನಗಳ ಕಾಲ ಬ್ಯಾಂಕಾಕ್, ಬೆಂಗಳೂರು, ಹೈದ್ರಾಬಾದ್, ಮಂಗಳೂರು, ವೈಜಾಗ್ ಮತ್ತು ಆಗುಂಬೆ ಪರಿಸರದಲ್ಲಿ ಚಿತ್ರೀಕರಣವಾಗಿದೆ. ಈ ಚಿತ್ರದ 5 ಮೆಲೋಡಿ ಸಾಂಗ್ಗಳು ಪ್ರೇಕ್ಷಕರಿಗೆ ಇಷ್ಟವಾಗಲಿದೆ. ಶ್ರೀಘ್ರದಲ್ಲಿ ಚಿತ್ರದ ಟ್ರೈಲರ್, ಟೀಸರ್ ಬಿಡುಗಡೆ ಮಾಡುತ್ತೇವೆ. ರೆಸ್ಪೆಕ್ಟ್ ವುಮನ್ ಅನ್ನೋ ಟ್ಯಾಗ್ ಲೈನ್ ಚಿತ್ರಕ್ಕಿದೆ.
- ಲಲಿತಾ ರಾಜ್ಯಲಕ್ಷ್ಮೀ, ನಿರ್ಮಾಪಕರು
ಚಿತ್ರಕ್ಕೆ ಅಕ್ಷಿತ್ ಶಶಿಕುಮಾರ್ ನಾಯಕನಾದರೆ, ಅನಹಿತ ಭೂಷಣ್ ನಾಯಕಿ. ದುರ್ಗಾಪ್ರಸಾದ್ ಕೊಲ್ಲಿಯವರ ಛಾಯಾಗ್ರಹಣವಿದೆ. ಪದ್ಮನಾಭ ಭಾರಾದ್ವಾಜ್ ಸಂಗೀತ ನೀಡಿದ್ದಾರೆ.