ರೈಸಿಂಗ್ ಕನ್ನಡ:
ನಾಗರಾಜ್. ವೈ. ಕೊಪ್ಪಳ:
ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಬೆಳ್ಳಿ ಇಟ್ಟಿಗೆಯನ್ನು ಅಯೋಧ್ಯೆಯಲ್ಲಿ ಇಡುವ ಮೂಲಕ ಶ್ರೀ ರಾಮ ದೇಗುಲದ ಕಾರ್ಯ ಆರಂಭವಾಗಲಿದೆ. ಅತ್ತ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದಂತೆ, ಇತ್ತ ಕೊಪ್ಪಳದ ಅಂಜನಾದ್ರಿಯಲ್ಲಿ ರಾಮಾಯಣ ಪಠಣ, ಹೋಮ ಹವನ ನಡೆಯುತ್ತಿದೆ. ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ರಾಮನ ಭಕ್ತ ಹನುಮ ಉದಯಿಸಿದ ಸ್ಥಳ ಎಂದು ಹೇಳಲಾಗುತ್ತಿದೆ.ಯುವ ಬಿ ಗ್ರೇಡ್ ನೇತೃತ್ವದಲ್ಲಿ, ಖ್ಯಾತಿ ವಾಗ್ಮಿ ಚಕ್ರವರ್ತಿ ಸೂಲಿ ಬೆಲೆ ಅವರಿಂದ ಹೋಮ-ಹವನ, ವಿಜಯನಗರ ಸಾಮ್ರಾಜ್ಯ ಮನೆತನದ ವಂಶಜರಿಂದಲೂ ಪೂಜೆ ನಡೆಯುತ್ತಿದೆ. ಪತಂಜಲಿ ಯೋಗ ಸಮಿತಿಯ ಮುಖಂಡ ಭವರ್ಲಾಲ ಆರ್ಯ ಅವರಿಂದಲೂ ಹೋಮ ನಡೆಯುತ್ತಿದೆ. ಸುಮಾರು ಮೂರು ಗಂಟೆಗಳ ಕಾಲ ಹೋಮ ಕಾರ್ಯನಡೆಯಲಿದೆ. ರಾಮನ ಭಕ್ತ ಹನುಮನ ನಾಡಿನಲ್ಲಿ ಭಕ್ತರ ಪೂಜಾ ಸಂಭ್ರಮ ಮನೆ ಮಾಡಿದೆ. ಅಂಜನಾದ್ರಿ ಬೆಟ್ಟ ಸಂಪೂರ್ಣ ಕೇಸರಿಮಯವಾಗಿದೆ.
ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ 21 ಕುರಿಗಳ ಬಲಿ
ಅಗ್ನಿಗೆ 5 ಬಣವಿಗಳು ಆಹುತಿ, ರೈತರಿಗೆ ಪರಿಹಾರ ನೀಡುವುದೇ ಸರಕಾರ
ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಯಾಕಾಯ್ತು ಗೊತ್ತಾ?
ಕೊಪ್ಪಳದಲ್ಲಿ ನೀರಿನ ಬರ : ಶಾಲೆ ಬಿಟ್ಟರೂ ಕೊಡ ಹಿಡಿದು ನಿಂತರು
ಅಯೋಧ್ಯೆ ಮಾದರಿಯಲ್ಲಿ ಅಂಜನಾದ್ರಿ ಬೆಟ್ಟ ಅಭಿವೃದ್ಧಿ, ಪ್ರಧಾನಿ ಮೋದಿ ಉದ್ಘಾಟನೆ
ಅಕ್ರಮ ಮರಳು ಅಡ್ಡೆ ಮೇಲೆ ತಹಶೀಲ್ದಾರ್ ದಾಳಿ: ಲಕ್ಷಾಂತರ ರೂ. ಮರಳು ವಶ