Connect with us

Featured

ಕೊರೊನಾ ಗೆದ್ದ 96ರ ವೃದ್ಧೆ- ಅಜ್ಜಿಯ ಧೈರ್ಯಕ್ಕೆ ಕಾಲ್ಕಿತ್ತ ಮಹಾಮಾರಿ..!

ರೈಸಿಂಗ್​ ಕನ್ನಡ:

ಚಿತ್ರದುರ್ಗ:

ಪತಿ, ಪುತ್ರನಿಗೆ ಸೋಂಕು ಬಂದಾಗ ಸಹಜವಾಗಿಯೇ ಆತಂಕವಾಗಿತ್ತು. 96 ವರ್ಷದ ಅತ್ತೆಗೆ ಜ್ವರ ಬಾಧಿಸಿತು. ಗಂಟಲು ಮಾದರಿ ಪರೀಕ್ಷಿಸಿದಾಗ ನನಗೂ ಸೋಂಕು ಅಂಟಿದ್ದು ಖಚಿತವಾಯಿತು. ಸೋಂಕು ಎದುರಿಸಲು ಅಗತ್ಯವಿರುವ ಮಾನಸಿಕ ಸಿದ್ಧತೆ ಮಾಡಿಕೊಂಡು ಆಸ್ಪತ್ರೆ ಸೇರಿದೆ. ಧೈರ್ಯವಿದ್ದರೆ ಸೋಂಕು ಏನೂ ಮಾಡದು.
ಚಿತ್ರದುರ್ಗ ಜಿಲ್ಲೆ ಹಿರಿಯೂರಿನ 58 ವರ್ಷದ ಮಹಿಳೆಯ ಖಚಿತ ನುಡಿ ಇದು. 96 ವರ್ಷದ ಅತ್ತೆಯೊಂದಿಗೆ ಕೋವಿಡ್‌ ಆಸ್ಪತ್ರೆ ಸೇರಿದ್ದ ಇವರು, ಜುಲೈ 6ರಂದು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇಡೀ ಕುಟುಂಬಕ್ಕೆ ಕೋವಿಡ್‌ ಅಂಟಿದರೂ ಇವರ ಜೀವನಸ್ಫೂರ್ತಿಯನ್ನು ಕುಂದಿಸಲು ಕೊರೊನಾ ಸೋಂಕಿಗೆ ಸಾಧ್ಯವಾಗಿಲ್ಲ.

Advertisement


ವೈದ್ಯರೊಬ್ಬರ ಸಂಪರ್ಕದಿಂದ ಮಹಿಳೆಯ 27 ವರ್ಷದ ಪುತ್ರನಿಗೆ ಸೋಂಕು ಕಾಣಿಸಿಕೊಂಡಿತ್ತು. 64 ವರ್ಷದ ಪತಿಗೆ ಜುಲೈ 23ರಂದು ಕೋವಿಡ್‌ ಇರುವುದು ದೃಢಪಟ್ಟಿತ್ತು. ಮನೆಯಲ್ಲೇ ಇದ್ದ ತಂಗಿಯ 19 ವರ್ಷದ ಮಗನಲ್ಲೂ ಸೋಂಕು ಪತ್ತೆಯಾಗಿತ್ತು. ಧರ್ಮಪುರ ಕೋವಿಡ್‌ ಕೇರ್‌ ಸೆಂಟರ್‌ಗೆ ಇಬ್ಬರು ಪುತ್ರರು ಹಾಗೂ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ಪತಿ ದಾಖಲಾಗಿದ್ದರು.

ಅತ್ತೆಗೆ ಮೈಬಿಸಿಯಾಗಿ ಸೋಂಕಿನ ಲಕ್ಷಣ ಕಾಣಿಸಿಕೊಂಡಿತ್ತು. ಆದರೆ, ನನ್ನಲ್ಲಿ ಯಾವುದೇ ಲಕ್ಷಣಗಳು ಗೋಚರಿಸಲೇ ಇಲ್ಲ. ಸೋಂಕು ಇದೆ ಎಂಬ ವರದಿಯನ್ನು ಆರಂಭದಲ್ಲಿ ನಂಬಲು ಸಾಧ್ಯವಾಗಲಿಲ್ಲ. ಮನಸು ದೃಢ ಮಾಡಿಕೊಂಡು ಕೋವಿಡ್‌ ಆಸ್ಪತ್ರೆ ಸೇರಿದೆ. ಅತ್ತೆ ಹಾಗೂ ನಾನು ಒಂದೇ ಕೊಠಡಿಯಲ್ಲಿ ಚಿಕಿತ್ಸೆಗೆ ದಾಖಲಾದೆವು. ಒಂದೆಡೆ ಇರುವುದು ಕಷ್ಟವಾಯಿತು. ದಿನ ಕಳೆದಂತೆ ರೂಢಿ ಆಯಿತು

  • ಕೊರೊನಾ ಗೆದ್ದವರು


ಜುಲೈ 25ರಂದು ಅತ್ತೆ–ಸೊಸೆ ಆಸ್ಪತ್ರೆಗೆ ದಾಖಲಾಗಿದ್ದರು. ನಿತ್ಯ ಬೆಳಿಗ್ಗೆ ಹಾಗೂ ರಾತ್ರಿ ಇಬ್ಬರಿಗೂ ಮಾತ್ರೆ ನೀಡಲಾಗುತ್ತಿತ್ತು. ಆಸ್ಪತ್ರೆ ಸಿಬ್ಬಂದಿ ನಿತ್ಯ ಕೊಠಡಿಗೆ ಧಾವಿಸಿ ಆರೋಗ್ಯ ಪರೀಕ್ಷಿಸುತ್ತಿದ್ದರು. ಏಳನೇ ದಿನ ಮತ್ತೊಮ್ಮೆ ಗಂಟಲು ದ್ರವದ ಮಾದರಿ ಪಡೆದು ಪರೀಕ್ಷಿಸಿದಾಗ ಸೋಂಕು ಕಾಣಿಸಿಕೊಳ್ಳಲಿಲ್ಲ. ಮತ್ತೆರಡು ದಿನ ನಿಗಾದಲ್ಲಿ ಇಟ್ಟುಕೊಂಡ ವೈದ್ಯರು, ಬಳಿಕ ಮನೆಗೆ ಕಳುಹಿಸಿದರು. 96 ವರ್ಷದ ವೃದ್ದೆ ಕೋವಿಡ್‌ ಗೆದ್ದಿರುವುದು ಆರೋಗ್ಯ ಇಲಾಖೆ ಸಿಬ್ಬಂದಿಯಲ್ಲಿ ಸ್ಫೂರ್ತಿ ತುಂಬಿದೆ.

ನಿತ್ಯ ಬೆಳಿಗ್ಗೆ ಬೇಗ ಏಳುತ್ತಿದ್ದೆವು. ಸಮಯಕ್ಕೆ ಸರಿಯಾಗಿ ಟೀ, ಕಾಫಿ, ತಿಂಡಿ ಹಾಗೂ ಊಟ ಬರುತ್ತಿತ್ತು. ಸಂಬಂಧಿಕರು, ಸ್ನೇಹಿತರು ದೂರವಾಣಿ ಕರೆ ಮಾಡಿ ವಿಚಾರಿಸುತ್ತಿದ್ದರು. ಇದರಿಂದ ಬೇಸರ, ಒಂಟಿತನ ಕಳೆಯಲು ಸಾಧ್ಯವಾಯಿತು. ಅತ್ತೆಯ ಆರೋಗ್ಯವೂ ಸುಧಾರಿಸಿತು. ರಕ್ತದೊತ್ತಡವಿದ್ದರೂ ಯಾವುದೇ ತೊಂದರೆ ಇಲ್ಲದೇ ಗುಣಮುಖರಾದರು.

  • ಕೊರೊನಾ ಗೆದ್ದವರು

TV ನೋಡಿ ಭಯವಾಗಿತ್ತು..!

ಕೊರೊನಾ ಸೋಂಕಿನ ಬಗ್ಗೆ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿದ್ದ ವರದಿ, ವಿಶ್ಲೇಷಣೆ ನೋಡಿ ನಿಜಕ್ಕೂ ದಿಗಿಲಾಗಿತ್ತು. ಆದರೆ, ದಿನ ಕಳೆದಂತೆ ಆಸ್ಪತ್ರೆಯಲ್ಲಿ ನೀಡಿದ ಚಿಕಿತ್ಸೆ ಭೀತಿಯನ್ನು ಹೋಗಲಾಡಿಸಿತು ಎನ್ನುತ್ತಾರೆ ವೃದ್ದೆಯ 64 ವರ್ಷದ ಪುತ್ರ. ಹಿರಿಯೂರಿನಲ್ಲಿ ಪ್ರಾವಿಜನ್‌ ಸ್ಟೋರ್‌ ಹೊಂದಿರುವ ಇವರು, ಪುತ್ರನ ಪ್ರಾಥಮಿಕ ಸಂಪರ್ಕಿತರು. ಟೈಫಡ್‌ ಜ್ವರದ ಚಿಕಿತ್ಸೆಗೆ ಆಸ್ಪತ್ರೆಗೆ ತೆರಳಿದ್ದ ಪುತ್ರನೊಂದಿಗೆ ಇವರೂ ಇದ್ದರು. ವೈದ್ಯರಿಂದ ಪುತ್ರನಿಗೆ ಸೋಂಕು ಬಂದಿತ್ತು.

ಸೋಂಕು ಬಂದರೆ ಬದುಕು ಮುಗಿದೇ ಹೋಯಿತು ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ, ಇದೊಂದು ಸಾಮಾನ್ಯ ಕಾಯಿಲೆ. ಸೋಂಕು ಕಾಣಿಸಿಕೊಂಡವರು ಖಂಡಿತ ಹೆದರುವ ಅಗತ್ಯವಿಲ್ಲ. ಸಕಾಲಕ್ಕೆ ಚಿಕಿತ್ಸೆ ಪಡೆದರೆ ಗುಣಮುಖರಾಗಿ ಮನೆಗೆ ಮರಳಬಹುದು. ಆಸ್ಪತ್ರೆಯಲ್ಲಿ ಭಯ ಆಗಲಿಲ್ಲ. ನಿತ್ಯ ಆರೇಳು ಮಾತ್ರೆ ಕೊಡುತ್ತಿದ್ದರು. ಹತ್ತು ದಿನ ಅವನ್ನೇ ಸೇವಿಸಿದೆ. ಕೋವಿಡ್‌ಗೆ ಯಾರೂ ಹೆದರು ಅಗತ್ಯವಿಲ್ಲ

  • ಕೊರೊನಾ ಗೆದ್ದ 96 ವರ್ಷದ ವೃದ್ದೆ

ಒಟ್ಟಿನಲ್ಲಿ ಕೊರೊನಾ ಮಹಾಮಾರಿ ಹೌದು. ಆದರೆ ಧೈರ್ಯವಿದ್ದರೆ ಏನೂ ಬೇಕಾದರೂ ಸಾಧಿಸಬಹುದು ಅನ್ನುವುದನ್ನು ಈ ವೃದ್ಧಿ ಹಾಗೂ ಅವರ ಕುಟುಂಬಸ್ಥರು ತೋರಿಸಿಕೊಟ್ಟಿದ್ದಾರೆ.

Advertisement
ಬೆಂಗಳೂರು8 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್8 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು8 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು8 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು8 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು8 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು8 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು8 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು8 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured11 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ