Featured
ಇಂಡಿಪೆಂಡೆನ್ಸ್ ಡೇ ಹಾಳು ಮಾಡಲು ಭಯೋತ್ಪಾದಕರ ಪ್ಲಾನ್- ಪಿಒಕೆ ಬಳಿ ಇದೆ ಟೆರರಿಸ್ಟ್ ಲಾಂಚ್ ಪ್ಯಾಡ್- ಭದ್ರತಾ ಪಡೆಗಳಿಗೆ ಗುಪ್ತಚರ ಇಲಾಖೆ ಇನ್ಫಾರ್ಮೆಷನ್..!

ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಭಾರತದೊಳಗೆ ಪಾಪಿ ಪಾಕಿಸ್ತಾನ ಭಯೋತ್ಪಾದಕರನ್ನು ಕಳುಹಿಸಲು ಪ್ಲಾನ್ಗಳನ್ನು ಮಾಡಿಕೊಂಡಿದೆ. ಪಾಕ್ ಅಕ್ರಮಿತ ಕಾಶ್ಮೀರ (ಪಿಓಕೆ) ಉದ್ದಕ್ಕೂ ಭಯೋತ್ಪಾದಕ ಸಂಘಟನೆಗಳನ್ನು ಚುರುಕುಗೊಳಿಸಿದ್ದು, ಹೇಗಾದರೂ ಮಾಡಿ ಭಾರತದ ಗಡಿ ನುಸುಳುವಂತೆ ಮಾಡಲು ಪ್ಲಾನ್ ಮಾಡುತ್ತಿದೆ. ಇದರ ಪರಿಣಾಮವಾಗಿ ಪಿಒಕೆ ಉದ್ದಕ್ಕೂ ಸುಮಾರು 27 ಲಾಂಚ್ ಪ್ಯಾಡ್ಗಳನ್ನು ಸಕ್ರೀಯಗೊಳಿಸಿದೆ. ಅಷ್ಟೇ ಅಲ್ಲ 320 ಭಯೋತ್ಪಾದಕರನ್ನು ಭಾರತದ ಗಡಿ ಒಳಗೆ ಯಾವ ಕ್ಷಣದಲ್ಲಾದ್ರೂ ನುಸುಳಬಹುದು ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ. ರಾ ಏಜೆಂಟ್ಗಳ ಪ್ರಕಾರ ಸ್ವಾತಂತ್ರ್ಯ ದಿನಾಚರಣೆಯ ಮುನ್ನ ಅತೀ ಹೆಚ್ಚು ಒಳನುಸುಳುವಿಕೆ ಆಗಬಹುದು ಎಂದು ಎಚ್ಚರಿಸಿದೆ.
ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಹಾಗೂ ವಾಯು ಸೇನೆಗಳು ಗಡಿಯ ಉದ್ದಕ್ಕೂ ಹದ್ದಿನ ಕಣ್ಣಿಟ್ಟಿವೆ. ದಕ್ಷಿಣ ಕಾಶ್ಮೀರದಲ್ಲಿ ದೊಡ್ಡ ಮಟ್ಟದ ಅಟ್ಯಾಕ್ ಮಾಡಲು ಭಯೋತ್ಪಾದಕ ಸಂಘಟನೆಗಳು ಯೋಜನೆ ರೂಪಿಸಿಕೊಂಡಿವೆ ಎಂದು ಗುಪ್ತಚರ ಇಲಾಖೆ ಹೇಳಿದೆ. ಭಯೋತ್ಪಾದಕರಿಗೆ ಪಾಕಿಸ್ತಾನದ ಜೊತೆಗೆ ಚೀನಾವೂ ಕುಮ್ಮಕ್ಕು ನೀಡುತ್ತಿದೆ. ಇತ್ತೀಚೆಗೆ ಎನ್ಕೌಂಟರ್ನಲ್ಲಿ ಹತರಾದ ಭಯೋತ್ಪಾದಕರ ಕೈಯಲ್ಲಿ ಚೀನಾ ಸೀಲ್ ಇದ್ದ ಗ್ರೆನೆಡ್ ಮತ್ತು ಶಸ್ತ್ರಾಸ್ತ್ರಗಳು ಸಿಕ್ಕಿದ್ದವು. ಇದನ್ನು ಆಧಾರವಾಗಿಟ್ಟುಕೊಂಡು ಪಾಕ್ ಮತ್ತು ಚೀನಾ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಭಾರತ ಆರೋಪ ಮಾಡುತ್ತಿದೆ.

ಈ ನಡುವೆ ಭಾರತದ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿರುವ ಪ್ರಕರಣಗಳ ಸಂಖ್ಯೆಯೂ ಈ ವರ್ಷ ತೀವ್ರ ಕಡಿಮೆಯಾಗಿದೆ. ಭಾರತೀಯ ಸೇನೆ ಪಾಕ್ ಮತ್ತು ಚೀನಾ ಗಡಿಯಲ್ಲಿ ಗಸ್ತು ತಿರುಗುತ್ತಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?