Featured
250 ವರ್ಷ ಇತಿಹಾಸವಿರುವ ಮಠದ ಶ್ರೀಗಳ ಕಾಮಪುರಾಣ: ಖುಲ್ಲಂಖುಲ್ಲಾ ಆದಮೇಲೆ ಪೀಠತ್ಯಾಗ ಅಂದರು ಶ್ರೀಗಳು.

ಯಾದಗಿರಿ: ಇಂದು ಮುಂಜಾನೆ ಸುದ್ದಿಮಾಧ್ಯಮಗಳಿಗೆ ಆಹಾರವಾಗಿದ್ದು ಯಾದಗಿರಿಯ ಸುರಪುರದಲ್ಲಿರುವ ಹುಣಸಿಹೊಳೆ ಗ್ರಾಮದ ಕಣ್ವ ಮಠ, ಅಲ್ಲಿನ ಪೀಠಾಧಿಪತಿ ವಿದ್ಯಾವಾರಧಿ ತೀರ್ಥ ಮಹಿಳೆಯೊಬ್ಬಳ ಜೊತೆ ವಾಟ್ಸ್ಆಪ್ನಲ್ಲಿ ವಿಡಿಯೋ ಕಾಲ್ ಮಾಡಿ ಅಶ್ಲೀಲವಾಗಿ ಮಾತನಾಡಿದ್ದು ಆಕೆ ಜೊತೆ ಸಂಭಾಷಣೆ ಕೂಡ ನಡೆಸಿದ್ದ. ಈ ವಿಡಿಯೋ ಇಂದು ಮುಂಜಾನೆಯಿಂದಲೇ ಮಾಧ್ಯಮಗಳಿಗೆ ಆಹಾರವಾಯ್ತು. ಈ ಸುದ್ದಿ ನೋಡಿ ಶ್ರೀಮಠದ ಸ್ವಾಮೀಜಿ ಭಕ್ತರೂ ಕೂಡ ಕಂಗಾಲಾಗಿದ್ದಾರೆ.
ಇಡೀ ವಿಡಿಯೋದಲ್ಲಿ ಮಹಿಳೆಗೆ ಸೆಕ್ಸ್ ಗೆ ಆಹ್ವಾನ ನೀಡಿರುವ ಶ್ರೀಗಳು ಆಕೆಯ ಜೊತೆ ತುಂಬಾ ಅನ್ಯೋನ್ಯವಾಗಿ ಖುಲ್ಲಂಖುಲ್ಲ ಎಲ್ಲಾ ಮಾತನಾಡಿದ್ದಾರೆ, ಸಾಲದು ಅಂತ ಒಂದು ಅಶ್ಲೀಲ ಫೋಟೋ ಕೂಡ ಕಳಿಸಿದ್ದಾರೆ. ಇದನ್ನೆಲ್ಲಾ ಆ ಮಹಿಳೆ ಬಹಿರಂಗಪಡಿಸಿದ್ದು ೨೫೦ ವರ್ಷ ಇತಿಹಾಸವಿದ್ದ ಶ್ರೀಮಠ ಒಂದೇ ದಿನ ಭಕ್ತರ ನಂಬಿಕೆ ಕಳೆದುಕೊಂಡಿದೆ.
ಸುದ್ದಿವಾಹಿನಿಗಳ ಜೊತೆ ಮಾತನಾಡಿರುವ ಶ್ರೀಗಳು, ನನ್ನ ಮೇಲೆ ಸುಳ್ಳು ಆರೋಪ ಹೊರಿಸಿದ್ದಾರೆ, ಆಡಿಯೋದಲ್ಲಿರುವುದು ನನ್ನ ದನಿಯಲ್ಲ, ಕಣ್ವ ಮಠಕ್ಕೆ ಕಪ್ಪು ಚುಕ್ಕಿ ತರಲಾರೆ, ಆರೋಪ ಹೊತ್ತು ಪೀಠಾರೂಢನಾಗಿರಲಾರೆ, ನಾನು ಶೀಘ್ರದಲ್ಲೇ ಪೀಠ ತ್ಯಜಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
You may like
ಅಯೋಧ್ಯೆ ರಾಮಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ – ಯಾದಗಿರಿಯಲ್ಲಿ ಕರಸೇವಕರ ಹರ್ಷೋದ್ಘಾರ..!
ಮಳೆ ಅಬ್ಬರಕ್ಕೆ ತತ್ತರಿಸಿದ ಜನತೆ- ಕರ್ನಾಟಕದಾದ್ಯಂತ ಜನ ಜೀವನ ಅಸ್ತವ್ಯಸ್ತ
ಯಾದಗಿರಿ ಜಿಲ್ಲಾಧಿಕಾರಿಯಿಂದ ಸ್ಟ್ರಿಕ್ಟ್ ಆ್ಯಕ್ಷನ್- ಪರವೂರಿನಿಂದ ಬಂದ್ರೆ ಟೆಸ್ಟ್ ಕಡ್ಡಾಯ..!
ಜಿಲ್ಲಾ ಪಂಚಾಯತ್ ಸದಸ್ಯನ ಮೇಲೆ ಕೊಲೆ ಯತ್ನದ ಕೇಸ್ಗೆ ಟ್ವಿಸ್ಟ್- ಸುಪಾರಿ ಕಿಲ್ಲರ್ಗಳಿಗೆ ತಲಾಷ್
ಮೊಸಳೆ ದಾಳಿಗೆ ಸಿಲುಕಿ ಎಮ್ಮೆಯ ಕಾಲು ಕಟ್ – ಪಶುವೈದ್ಯರಿಗೆ ಇನ್ನೂ ಕೇಳಿಸದ ಮೂಕರೋಧನೆ..!
ಕೃಷ್ಣಾ ನದಿಯಲ್ಲಿ ನಾಪತ್ತೆಯಾದ ರೈತನಿಗಾಗಿ ತೀವ್ರ ಹುಡುಕಾಟ- ಮೊಸಳೆ ದಾಳಿಗೆ ಬಲಿಯಾಗಿರುವ ಶಂಕೆ