Featured
ಹೈದ್ರಾಬಾದ್ ಕರ್ನಾಟಕ ಇನ್ಮುಂದೆ ಕಲ್ಯಾಣ ಕರ್ನಾಟಕ – ಸಿಎಂ. ಹೆಸರು ಬದಲಾದರೆ ಸಾಕೇ..?

ಕಲಬುರಗಿ: ಹೈದ್ರಾಬಾದ್ ಕರ್ನಾಟಕದ ಆರು ಜಿಲ್ಲೆಗಳಾದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ ಹಾಗೂ ಬಳ್ಳಾರಿ ಇನ್ಮುಂದೆ ಸಮಗ್ರವಾಗಿ ಕಲ್ಯಾಣ ಕರ್ನಾಟಕ ಎಂದು ಕರೆಸಿಕೊಳ್ಳಲಿವೆ. ಇದಕ್ಕೆ ಮುನ್ನುಡಿ ಎಂಬಂತೆ ಸಿಎಂ ಯಡಿಯೂರಪ್ಪ ಇಂದು ಕಲ್ಯಾಣ ಕರ್ನಾಟಕದ ಉತ್ಸವಕ್ಕೆ ಚಾಲನೆ ನೀಡಿದರು.
ಇಪ್ಪತ್ತು ವರ್ಷಗಳಿಂದಿದ ಇಲ್ಲಿನ ಜನ ಪ್ರತಿನಿಧಿಗಳು ಹೈದ್ರಾಬಾದ್ ಕರ್ನಾಟಕವನ್ನ ಕಲ್ಯಾಣ ಕರ್ನಾಟಕ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದರು, ಬಹುಕಾಲದ ಬೇಡಿಕೆ ಇಂದು ಅಧಿಕೃತವಾಗಿ ಈಡೇರಿದೆ. ಕಲಬುರಗಿಗೆ ಆಗಮಿಸಿದ ಸಿಎಂ ಯಡಿಯೂರಪ್ಪ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನವಾದ ಇಂದು ಧ್ವಜಾರೋಹಣ ಮಾಡಿ ಇಂದಿನಿಂದ ಇದು ಕಲ್ಯಾಣ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಉತ್ಸವ ಎಂದು ಘೋಷಣೆ ಮಾಡಿದರು. ಈ ವೇಳೇ ಹಾಜರಿದ್ದ ಮಠಾಧೀಶರು ಹಾಗೂ ಜನಪ್ರತಿನಿಧಿಗಳು ಸಿಎಂ ಯಡಿಯೂರಪ್ಪಗೆ ಅಭಿನಂದನೆ ಸಲ್ಲಿಸಿದರು.
ಕಲ್ಯಾಣ ಕರ್ನಾಟಕ ಎಂದು ಕರೆದರೆ ಸಾಲದು, ಹಿಂದುಳಿದ ಕರ್ನಾಟಕವಾಗಿರುವ ಈ ಪ್ರದೇಶದಗಳಲ್ಲಿ ರಚನಾತ್ಮಕ ಬದಲಾವಣೆಗಳನ್ನ ಮಾಡಬೇಕು ಅದರಲ್ಲೂ ಈಗಾಗಲೇ ಇರುವ ವಿಶೇಷ ಪ್ರಾತಿನಿಧ್ಯದಿಂದಲೂ ಸಹ ಯಾವುದೇ ಬದಲಾವಣೆಯಾಗಿಲ್ಲ ಎಂದು ಹಲವರು ವಿರೋಧ ವ್ಯಕ್ತಪಡಿಸಿದರು.