Featured
ಹಿರಿಯ ವಕೀಲ ರಾಮ್ ಜೇಠ್ಮಲಾನಿ ನಿಧನ, ಗಣ್ಯರಿಂದ ಸಂತಾಪ

ನವದೆಹಲಿ: ಸುಪ್ರೀಂಕೋರ್ಟ್ನ ಖ್ಯಾತ ವಕೀಲರಾಗಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಆರು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ರಾಮ್ ಜೇಠ್ಮಲಾನಿ ನವದೆಹಲಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ ೯೫ ವರ್ಷ ವಯಸ್ಸಾಗಿತ್ತು, ಶ್ರೀಯುತರಿಗೆ ಒಬ್ಬ ಮಗ ಮಹೇಶ್ ಜೇಠ್ಮಲಾನಿ ( ಇವರು ಖ್ಯಾತ ವಕೀಲರು) ಇಬ್ಬರು ಹೆಣ್ಣುಮಕ್ಕಳು ಒಬ್ಬರು ಈಗಾಗಲೇ ದೈವಾಧೀನರಾಗಿದ್ದಾರೆ. ತನ್ನ ತಂದೆಯ ಅಂತಿಮ ಸಂಸ್ಕಾರ ಇಂದೇ ಪೂರ್ಣಗೊಳ್ಳಲಿದೆ ಎಂದು ಮಹೇಶ್ ಜೇಠ್ಮಲಾನಿ ತಿಳಿಸಿದ್ದಾರೆ.
ಇವರಿಗೆ ಕ್ರಿಮಿನಲ್ ಪ್ರಕರಣಗಳ ಕಿಂಗ್ ಎಂದೇ ಕರೆಯುತ್ತಿದ್ದರು, ಹೈ ಪ್ರೊಫೈಲ್ ಕೇಸ್ಗಳಾದ ಸ್ಟಾಕ್ಬ್ರೋಕರ್ ಹರ್ಷದ್ ಮೆಹ್ತಾ, ಪಿವಿ ನರಸಿಂಹರಾವ್, ನಾನಾವತಿ ವರ್ಸಸ್ ಮಹಾರಾಷ್ಟ್ರ ಪ್ರಕರಣ, ೨ಜಿ ಹಗರಣಗಳಲ್ಲಿ ವಕಾಲತ್ತು ವಹಿಸಿದ್ದರು. ಲಾಲ್ ಕ್ರಿಷ್ಣ ಅಡ್ವಾಣಿ, ಲಲೂ ಪ್ರಸಾದ್ ಯಾದವ್, ಜೆ.ಜಯಲಲಿತಾ, ಅರವಿಂದ್ ಕೇಜ್ರಿವಾಲ್ ಪರ ವಾದ ಮಾಡಿದ್ದವರು, ಆರು ಬಾರಿ ರಾಜ್ಯಸಭಾ ಸದಸ್ಯರಾಗಿದ್ದ ಇವರು ಎನ್ಡಿಎ ಸರ್ಕಾರದಲ್ಲಿ ಸಚಿವರಾಗಿದ್ದರು. ರಾಮ್ ಜೇಠ್ಮಲಾನಿ ನಿಧನಕ್ಕೆ ಪ್ರಧಾನಿ ಸೇರಿದಂತೆ ಅನೇಖ ಗಣ್ಯರು ಸಂತಾಪ ಸೂಚಿಸಿದ್ದಾರೆ.