Connect with us

Featured

ಹನುಮಂತುಗೆ ಬೆಂಗಳೂರಿನಲ್ಲಿ ಫ್ಲಾಟ್​ ನೀಡಿದ ಕಾನ್ಫಿಡೆಂಟ್​ ಗ್ರೂಪ್​ : ಹನುಮಂತು ಹೇಳಿದ್ದೇನು ಗೊತ್ತಾ..?

ಬೆಂಗಳೂರು : ಕುರಿಗಾಯಿ ಹನುಮಂತು, ಗಾಯಕನಾಗಿ ಬದಲಾದ ಕಥೆ ಬಹುತೇಕ ಕನ್ನಡಿಗರಿಗೆ ಗೊತ್ತಿದೆ. ಅಷ್ಟರ ಮಟ್ಟಿಗೆ ಹನುಮಂತು ಕನ್ನಡಿಗರ ಮನೆ ಮಾತಾಗಿದ್ದಾರೆ. ಝಿ ಕನ್ನಡ ವಾಹಿನಿಯ ಫೇಮಸ್​ ರಿಯಾಲಿಟಿ ಶೋ ಆಗಿದ್ದ ಸರಿಗಮಪ ಶೋನಲ್ಲಿ ಹನುಮಂತು ಗಾಯಕರಾಗಿ ಭಾಗಿಯಾಗಿದ್ರು. ತಮ್ಮ ಅಮೋಘ ಪ್ರದರ್ಶನದಿಂದ ಎಲ್ಲರ ಮನ ಗೆದ್ದಿದ್ರು. ಆದ್ರೆ, ಸರಿಗಮಪ ಶೋನಲ್ಲಿ ರನ್ನರ್​ ಅಪ್​ ಆಗಿದ್ರು.

ಹನುಮಂತು ರನ್ನರ್​ ಅಪ್​ ಆಗಿದ್ದರೂ, ಶೋನ ಪ್ರಯೋಜಕರು ಹನುಮಂತುಗೆ 15 ಲಕ್ಷ ರೂ. ಮೌಲ್ಯದ ಸೈಟ್​ ನೀಡೋದಾಗಿ ಸ್ಪೆಷಲ್​​ ಗಿಫ್ಟ್​ ಘೋಷಣೆ ಮಾಡಿದ್ರು. ಆದ್ರೀಗ, 15 ಲಕ್ಷದ ಸೈಟ್​ ಬದಲಿಗೆ, ಹನುಮಂತುಗೆ ಫ್ಲಾಟ್​ ನೀಡಿದೆ ಕಾನ್ಫಿಡೆಂಟ್​ ಗ್ರೂಪ್​. ಸದ್ಯ, ಝಿ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಶೋದಲ್ಲೂ ಹನುಮಂತು ಸ್ಪರ್ಧಿ ಆಗಿದ್ದಾರೆ. ಈ ಶೋಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾನ್ಫಿಡೆಂಟ್​ ಗ್ರೂಪ್​​ನ ಚೇರ್ಮೆನ್​​ ಸಿ.ಜೆ. ರಾಯ್​​, ಹನುಮಂತುಗೆ ಫ್ಲಾಟ್​ ನೀಡೋದಾಗಿ ಘೋಷಿಸಿದರು. ಅದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನೂ ಹಸ್ತಾಂತರಿಸಿದ್ರು.

ಫ್ಲಾಟ್​ ಸಿಕ್ಕ ಖುಷಿಯಲ್ಲಿ ಹನುಮಂತುಗೆ ಮಾತುಗಳೇ ಹೊರಡಲಿಲ್ಲ. ನನ್ನ ಜೀವನ ಇರೋವರೆಗೆ ತಮಗೆ ಚಿರಋಣಿ ಎಂದ ಹನುಮಂತು, ತಮ್ಮನ್ನು ಎಂದೆಂದಿಗೂ ಮರೆಯಲ್ಲ ಎಂದು ಕಾನ್ಫಿಡೆಂಟ್​ ಗ್ರೂಪ್​ ಚೇರ್ಮನ್​​ ರಾಯ್​ಗೆ ತಿಳಿಸಿದ್ರು. ಇದೇ ವೇಳೆ, ಮಾತ್ನಾಡಿದ ರಾಯ್​, ಹನುಮಂತು ಮುಗ್ದತೆ ನನಗೆ ಇಷ್ಟವಾಯ್ತು. ಮೊದಲು ಹೇಗಿದ್ದರೋ ಈಗಲೂ ಹಾಗೇ ಇದ್ದಾರೆ. ನಾನೂ ಸೈಟ್​ ಕೊಟ್ರೆ, ಮನೆ ಕಟ್ಟಲು ಎಷ್ಟು ವರ್ಷ ಬೇಕಾಗುತ್ತೋ ಗೊತ್ತಿಲ್ಲ. ಹೀಗಾಗಿ, ನಾನೇ ಫ್ಲಾಟ್​ ನೀಡ್ತಿದ್ದೇನೆ ಎಂದು ಫ್ಲಾಟ್​​ನ ದಾಖಲು ಪತ್ರಗಳನ್ನ ನೀಡಿದ್ರು.

ಝಿ ಕನ್ನಡ ವಾಹಿನಿ ಹಾಗೂ ಕಾನ್ಫಿಡೆಂಟ್​ ಗ್ರೂಪ್​​ಗೆ ನಾನು ಆಭಾರಿ ಎಂದು ಹನುಮಂತು ಹೇಳಿದ್ರು. ಅದೇನೇ ಆಗ್ಲಿ, ಹಾವೇರಿಯ ಕುರಿಗಾಯಿ ಆಗಿದ್ದ ಹನುಮಂತು ಈಗ ಬೆಂಗಳೂರಿನಲ್ಲಿ ಫ್ಲಾಟ್​ನ ಒಡೆಯ. ಸರಿಗಮಪ ಶೋ ಮೂಲಕ ಜರ್ನಿ ಶುರು ಮಾಡಿರೋ ಹನುಮಂತು, ಸಿನಿಮಾಗೂ ಕೂಡ ಹಾಡುಗಳನ್ನ ಹಾಡ್ತಿದ್ದಾರೆ. ಹಿನ್ನೆಲೆ ಗಾಯಕರಾಗ್ತಿದ್ದಾರೆ. ಇದರ ಜೊತೆ ಡ್ಯಾನ್ಸ್​ ಶೋನಲ್ಲೂ ಭಾಗಿಯಾಗಿದ್ದಾರೆ. ಹೀಗೇ, ಹನುಮಂತು ಜರ್ನಿ ಸಕ್ಸಸ್​ ಫುಲ್​ ಆಗಿ ನಡೆಯಲಿ ಎಂದು ಹಾರೈಸೋಣ.

Advertisement

ಬೆಂಗಳೂರು1 year ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು1 year ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು1 year ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು1 year ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು1 year ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು1 year ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು1 year ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು1 year ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured6 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured6 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured1 year ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured6 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ