Featured
ಸಿಸಿಬಿ ಕಚೇರಿಯಲ್ಲಿ ರಾಧಿಕಾ ಕುಮಾರಸ್ವಾಮಿ ವಿಚಾರಣೆ : ಸ್ವೀಟಿಗೆ ಸಂಕಷ್ಟ..!

ರೈಸಿಂಗ್ ಕನ್ನಡ :- ವಂಚಕ ಯುವರಾಜ ಸ್ವಾಮಿ ಪ್ರಕರಣದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿಗೆ ಸಂಕಷ್ಟ ಎದುರಾಗಿದೆ. ಸಿಸಿಬಿ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ, ವಿಚಾರಣೆಗೆ ಹಾಜರಾಗಿದ್ದಾರೆ. ಬೆಳಗ್ಗೆ ಡಾಲರ್ಸ್ ಕಾಲೋನಿ ಮನೆಯಿಂದ ಹೊರಟ, ರಾಧಿಕಾ , 11 ಗಂಟೆ ಸುಮಾರಿಗೆ ಸಿಸಿಬಿ ಕಚೇರಿಗೆ ಆಗಮಿಸಿದ್ರು.
ಸಿಸಿಬಿ ಎಸಿಪಿ ನಾಗರಾಜ್ ನೇತೃತ್ವದಲ್ಲಿ ರಾಧಿಕಾ ಕುಮಾರಸ್ವಾಮಿ ವಿಚಾರಣೆ ನಡೀತು. ಸಿಸಿಬಿಯವರ ಸಾಲು ಸಾಲು ಪ್ರಶ್ನೆಗಳಿಗೆ ರಾಧಿಕ ಕುಮಾರಸ್ವಾಮಿ ಉತ್ತರ ನೀಡಿದ್ರು. ಸುಮಾರು 20ಕ್ಕೂ ಹೆಚ್ಚು ಪ್ರಶ್ನೆಗಳನ್ನ ಸಿಸಿಬಿ ಅಧಿಕಾರಿಗಳು, ರಾಧಿಕ ಮುಂದಿಟ್ರು. ಸ್ವಾಮಿಯಿಂದ 75 ಲಕ್ಷ ಹಣ ಪಡೆದಿರೋದಾಗಿ ಸ್ವತಃ ರಾಧಿಕಾ ಸುದ್ದಿಗೋಷ್ಠಿಯಲ್ಲಿ ಹೇಳಿದ್ರು. ಅದನ್ನೇ ಸಿಸಿಬಿ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ.
ರಾಧಿಕಾ ವಿಚಾರಣೆಯಲ್ಲಿ ಯುವರಾಜ ನೀಡಿರೋ ಮಾಹಿತಿ ಆಧರಿಸಿ ಸಿಸಿಬಿ ವಿಚಾರಣೆ ನಡೆಸಿದೆ. ರಾಧಿಕಾ ಕುಮಾರಸ್ವಾಮಿಗೆ 2 ಕೋಟಿಗೂ ಹೆಚ್ಚಿನ ಹಣ ನೀಡಿರೋದಾಗಿ ವಂಚಕ ಸ್ವಾಮಿ ಹೇಳಿದ್ದ. ಆದ್ರೆ, ತನಗೆ 75 ಲಕ್ಷ ಪಡೆದಿರೋದಾಗಿ ರಾಧಿಕಾ ಹೇಳಿದ್ರು. ನಾಟ್ಯರಾಣಿ ಶಾಂತಲೆ ಸಿನಿಮಾಗಾಗಿ ಅಡ್ವಾನ್ಸ್ ಪಡೆದಿದ್ದಾಗಿ ರಾಧಿಕಾ ಹೇಳಿದ್ರು. ಹೀಗಾಗಿ ಸ್ವಾಮಿ ನಿಜವಾಗ್ಲೂ ಸಿನಿಮಾಗಾಗಿಯೇ ಹಣ ನೀಡಿದ್ನಾ ಅನ್ನೋದನ್ನೇ ಮುಂದಿಟ್ಟುಕೊಂಡು ಸಿಸಿಬಿ ಪ್ರಶ್ನೆ ಮಾಡಿದೆ.
ಅಲ್ಲದೆ, ಯಾವುದೇ ಅಗ್ರಿಮೆಂಟ್ ಇಲ್ಲದೇ ಲಕ್ಷಾಂತರ ರೂ. ಹಣ ಪಡೆಯಲು ಹೇಗೆ ಸಾಧ್ಯ.? ನಾಟ್ಯರಾಣಿ ಸಿನಿಮಾ ಬಗ್ಗೆ ಒಂದು ವರ್ಷದಿಂದ ಯಾವುದೇ ಮಾಹಿತಿಯೇ ಇಲ್ಲ ಏಕೆ ಎಂದು ಸಿಸಿಬಿ ಪ್ರಶ್ನೆ ಜೊತೆ ಅನುಮಾನ ಮುಂದಿಟ್ಟಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?