Featured
ಸಿಟಿ ರವಿಯನ್ನ ಸುತ್ತಿಕೊಂಡ ಕನ್ನಡ ಧ್ವಜ, ಸಿದ್ದು- ಪರಂ ಗರಂ

ಬೆಂಗಳೂರು: ದೇಶಕ್ಕೊಂದೇ ಧ್ವಜ, ಪ್ರಾದೇಶಿಕ ಧ್ವಜಕ್ಕೆ ಸಂವಿಧಾನದಲ್ಲಿ ಮಾನ್ಯತೆ ಇಲ್ಲ ಎಂದು ಹೇಳಿಕೆ ನೀಡಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿಟಿ ರವಿಗೆ ಯಾಕಾದರೂ ಹೇಳಿಕೆ ನೀಡಿದೆ ಎನ್ನುವಷ್ಟರ ಮಟ್ಟಿಗೆ ಕಾಂಗ್ರೆಸ್ ನಾಯಕರು ಜಾಡಿಸುತ್ತಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ರವಿ, ನಾಡಧ್ವಜವನ್ನ ವಿರೋಧಿಸು ವುದು ಸರಿಯಲ್ಲ, ನಾವು ಪ್ರತ್ಯೇಕ ಧ್ವಜ ಕೇಳುತ್ತಿಲ್ಲ, ರಾಜ್ಯಗಳು ತಮ್ಮದೇ ಧ್ವಜ ಹೊಂದಲು ಸಂವಿಧಾನದಲ್ಲಿ ಯಾವುದೇ ಅಡ್ಡಿಯಿಲ್ಲ, ಸರ್ಕಾರದ ಈ ನಿಲುವು ಸ್ಪಷ್ಟವಾಗಿ ಕನ್ನಡ ವಿರೋಧಿಯಾಗಿದೆ, ನಾವು ನಮಗೊಂದು ನಾಡಗೀತೆಯನ್ನ ಒಪ್ಪಿಕೊಂಡಿಲ್ಲವೇ, ಇದರಿಂದ ರಾಷ್ಟ್ರಗೀತೆಗೆ ಅವಮಾನ ಮಾಡಿದಂತಾಗತ್ತಾ, ರಾಷ್ಟ್ರಧ್ವಜದ ಕೆಳಗೆ ಯಾವುದೇ ಧ್ವಜವನ್ನ ಹಾರಿಸಬಹುದೆಂದು ಸಂಹಿತೆ ಹೇಳಿದೆ. ಅದನ್ನ ಪಾಲಿಸಬೇಕಿರುವುದು ನಮ್ಮ ಕರ್ತವ್ಯ ಬೇರೇನು ಸಮಸ್ಯೆ ಎಂದು ಸಿಟಿ ರವಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಕೂಡ ಟ್ವೀಟ್ ಮಾಡಿ, ನಾಡಧ್ವಜದಿಂದ ದೇಶಕ್ಕೆ ಯಾವ ಧಕ್ಕೆಯೂ ಬರುವುದಿಲ್ಲ, ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಸಾವಿರ ವರ್ಷಗಳ ಇತಿಹಾಸಕ್ಕೆ ಇಂಬನ್ನ ನೀಡುವ ಅನನ್ಯ ಗುರುತು ಬೇಕಾಗಿದೆ, ಇದನ್ನ ನಾಡಧ್ವಜ ನೀಡುತ್ತದೆ, ನಮ್ಮದೇ ಧ್ವಜವನ್ನ ನಿರಾಕರಿಸುವುದು ರಾಜ್ಯಕ್ಕೆ ಮಾಡುವ ಅವಮಾನ ಸಿಟಿ ರವಿ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದಿದ್ದಾರೆ.
ಈ ಬೆಳವಣಿಗೆಗಳ ನಡುವೆ ಮಾಧ್ಯಮಗಳಿಗೆ ಪುನಃ ಪ್ರತಿಕ್ರಿಯೆ ನೀಡಿರುವ ಸಚಿವ ಸಿಟಿ ರವಿ, ಕನ್ನಡ ಭಾಷೆ ಬಗ್ಗೆ ಪ್ರೀತಿ ಹೊಂದಿದ್ದವನು ನಾನು, ಪ್ರತ್ಯೇಖ ಧ್ವಜ ಹೊಂದಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಹೇಳಿದೆ ಅಷ್ಟೇ, ಅಂಬೇಡ್ಕರ್ ಹಾಗೂ ಸಂವಿಧಾನದ ಮೇಲೆ ಅಪಾರ ಪ್ರೀತಿ ಗೌರವ ಇಟ್ಟುಕೊಂಡವನು ನಾನು, ಸಾಂಸ್ಕೃತಿಕವಾಗಿ ಕನ್ನಡ ಧ್ವಜ ಹಿಂದೆಯೂ ಇತ್ತು ಮುಂದೆಯೂ ಇರತ್ತೆ ಎಂದರು.
You may like

ಬೆಂಗಳೂರು ಉತ್ತರ ಕ್ಷೇತ್ರದ ಜನರ ಮೂಡ್ ಯಾವ ಪಕ್ಷದತ್ತ?

ಮುಂದಿನ ದಿನಗಳಲ್ಲಿ ಎಲ್ಲಾ: ಹಂತ ಹಂತವಾಗಿ ಬೇಡಿಕೆ ಈಡೇರಿಕೆಯ ಪ್ರಯತ್ನ: ಸಿ.ಎಂ.ಸಿದ್ದರಾಮಯ್ಯ

ಅಲ್ಪಸಂಖ್ಯಾತರ ನಿಗಮದ ನೂತನ ಅಧ್ಯಕ್ಷನ ಮೇಲೆ ಮರ್ಡರ್ ಕೇಸ್!

ಕರ್ನಾಟಕಕ್ಕೆ ಸೆರಿಸಿಕೊಳ್ಳಿ ಎಂದು ಮಹಾರಾಷ್ಟ್ರದ ಜತ್ತ ತಾಲೂಕಿನ ಜನರು

ಮೈಸೂರು, ರಾಯಚೂರು ವಿಮಾನ ನಿಲ್ದಾಣಗಳಿಗೆ ₹57.63 ಕೋಟಿ ಮಂಜೂರು

ನಮ್ಮ ಗ್ಯಾರೆಂಟಿಗಳನ್ನ ಕದ್ದು, ಮೋದಿ ಗ್ಯಾರೆಂಟಿ ಅಂತಿದ್ದಾರೆ: ಸಿಎಂ ಸಿದ್ದರಾಮಯ್ಯ ಟಾಂಗ್






















