ರೈಸಿಂಗ್ ಕನ್ನಡ ಸಿನಿಮಾ : ಬಾಹುಬಲಿ ನಿರ್ದೇಶಕ ಎಸ್.ಎಸ್. ರಾಜಮೌಳಿ ಹಾಗೂ ಪ್ರಭಾಸ್ ಮಧ್ಯೆ ಒಳ್ಳೇ ಸಂಬಂಧವಿದೆ. ಪ್ರಭಾಸ್ರನ್ನ ಪ್ಯಾನ್ ಇಂಡಿಯಾ ಸೂಪರ್ಸ್ಟಾರ್ ಮಾಡಿದ್ದೇ ಬಾಹುಬಲಿ ಸಿನಿಮಾ. ಸಿನಿಮಾ ಹೊರತುಪಡಿಸಿಯೂ ಪ್ರಭಾಸ್ ಮತ್ತು ರಾಜಮೌಳಿ ಉತ್ತಮ ಸ್ನೇಹಿತರು. ಹೀಗಾಗಿಯೇ, ಪ್ರಭಾಸ್ ಏನೇ ಮಾಡಿದ್ರೂ ರಾಜಮೌಳಿಗೆ ಹೇಳ್ತಾರೆ. ಅದರಂತೆ ಸಾಹೋ ಸಿನಿಮಾ ಪೂರ್ತಿಯಾದಾಗ ಪ್ರಭಾಸ್, ಮೊದಲು ಸಿನಿಮಾವನ್ನ ರಾಜಮೌಳಿಗೆ ತೋರಿಸ್ತಾರೆ.
ಸಾಹೋ ಸಿನಿಮಾ ನೋಡಿದ ರಾಜಮೌಳಿ, ಪ್ರಭಾಸ್ಗೆ ಕೆಲವು ಸಲಹೆಗಳನ್ನ ನೀಡ್ತಾರೆ. ಆಕ್ಷನ್ ಎಪಿಸೋಡ್ ಇರೋ ಸಿನಿಮಾ ಇದು. ಬಾಹುಬಲಿ ನಂಬರ ಬರ್ತಿರೋದ್ರಿಂದ ಎಕ್ಸ್ಪೆಕ್ಟೇಷನ್ಸ್ ಜಾಸ್ತಿನೇ ಇರುತ್ತೆ. ಆದ್ರೆ, ಸಿನಿಮಾ ಲೆಂತ್ ತುಂಬಾನೇ ಆಯ್ತು. ಕೆಲವೊಂದು ಸೀನ್ಗಳನ್ನ ಕಟ್ ಮಾಡಿದ್ರೆ ಒಳ್ಳೇದು ಅಂತ ಪ್ರಭಾಸ್ಗೆ, ರಾಜಮೌಳಿ ಸಲಹೆ ನೀಡದ್ರಂತೆ. ಆದ್ರೆ, ಅದ್ಯಾಕೋ ಏನೋ, ರಾಜಮೌಳಿ ಸಲಹೆಯನ್ನ ಸ್ವೀಕರಿಸದೇ ಸಾಹೋ ಸಿನಿಮಾ ರಿಲೀಸ್ ಮಾಡಿದ್ರು.
ಆದ್ರೆ, ಸಾಹೋ ಸಿನಿಮಾ ರಿಲೀಸ್ ಆದ್ಮೇಲೆ ಪ್ರಭಾಸ್ ಸೇರಿದಂತೆ ನಿರ್ದೇಶಕ ಸುಜೀತ್ಗೂ ರಾಜಮೌಳಿ ಹೇಳಿದ್ದು ನಿಜ ಅನ್ಸಿತ್ತು. ಆದ್ರೆ, ಅಷ್ಟೊತ್ತಿಗಾಗ್ಲೇ ಸಮಯ ಮೀರಿ ಹೋಗಿತ್ತು. ಎಲ್ಲೆಡೆ ನೆಗೆಟಿವ್ ಕಾಮೆಂಟ್, ಸಿನಿಮಾ ಫ್ಲಾಫ್, ಫೇಲ್ಯೂರ್ ಅನ್ನೋ ಮಾತುಗಳು ಕೇಳಿ ಬಂದ್ವು.
ಹೊಸ ನಿರ್ದೇಶಕ ಸುಜೀತ್ ಮೇಲೆ ನಂಬಿಕೆ ಇಟ್ಟಿದ್ದ ಪ್ರಭಾಸ್, ರಾಜಮೌಳಿ ಮಾತು ಕೇಳಲಿಲ್ಲ. ಅಲ್ಲದೆ, ರಾಜಮೌಳಿ ಇಲ್ಲದೆಯೂ ತಾನು ಪ್ಯಾನ್ ಇಂಡಿಯನ್ ಸೂಪರ್ಸ್ಟಾರ್. ರಾಜಮೌಳಿ ಇಲ್ಲದೆಯೂ ಸಿನಿಮಾ ಗೆದ್ದೇ ಗೆಲ್ಲುತ್ತೆ ಅನ್ನೋ ಭ್ರಮೆಯಲ್ಲಿ ಪ್ರಭಾಸ್ ಇದ್ದರು ಎನ್ನಲಾಗಿದೆ. ಆದ್ರೆ, ರಾಜಮೌಳಿ ಇಲ್ಲದೇ ಪ್ರಭಾಸ್ ಪ್ಯಾನ್ ಇಂಡಿಯಾ ಹೀರೋ ಆಗಲಾರ, ಸಕ್ಸಸ್ ಸಿಗಲ್ಲ ಅನ್ನೋದು ಸಾಹೋ ಸಿನಿಮಾದಿಂದ ಗೊತ್ತಾಗಿದೆ.
ಇದೆಲ್ಲವನ್ನ ಪಕ್ಕಕ್ಕೆ ಇಟ್ರೆ, ರಾಜಮೌಳಿ-ಪ್ರಭಾಸ್ ಸಂಬಂಧ ಮುಂದೆಯೂ ಚೆನ್ನಾಗಿ ಇರುತ್ತಾ..? ಕಾದುನೋಡೋಣ..
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?