ಬೆಂಗಳೂರು: ಇತ್ತೀಚೆಗೆ ನಕಲಿ ಫೇಸ್ಬುಕ್ ಅಕೌಂಟ್ ಗಳ ಕಾಟಕ್ಕೆ ನಟರು, ರಾಜಕಾರಣಿಗಳು ಹಾಗೂ ಪತ್ರಕರ್ತರೂ ಹೈರಾಣಾಗಿದ್ದಾರೆ. ದಿನೇ ದಿನೇ ನಕಲಿ ಫೇಸ್ಬುಕ್ ಅಕೌಂಟ್ ಬಳಸಿ ತೇಜೋವಧೆ ಮಾಡುವ ಪ್ರಕರಣಗಳೂ ಕೇಳಿ ಬರುತ್ತಿವೆ.
ಈ ಪ್ರಕರಣಗಳ ಸಾಲಿಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಹೆಸರೂ ಸೇರ್ಪಡೆಯಾಗಿದೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸುಮಲತಾ, ಫೇಸ್ಬುಕ್ ಲ್ಲಿ ಬರೆದುಕೊಂಡಿದ್ದಾರೆ. ಸ್ನೇಹಿತರೇ, ನನ್ನ ಹೆಸರಲ್ಲಿ ಸಾಕಷ್ಟು ನಕಲಿ ಅಕೌಂಟ್ ಗಳನ್ನ ತೆರೆದಿರುವುದು ಗಮನಕ್ಕೆ ಬಂದಿದ್ದು ಅದರಲ್ಲಿ ಅನವಶ್ಯ ಪೋಸ್ಟ್ ಗಳನ್ನ ಮಾಡಲಾಗುತ್ತಿದೆ. ಇದರ ಬಗ್ಗೆ ಸೈಬರ್ ಪೊಲೀಸ್ ಗೆ ದೂರು ನೀಡಲಿದ್ದೇನೆ, ಈ ಅಕೌಂಟ್ ಮಾತ್ರ ನನ್ನದಾಗಿದ್ದು ಇದನ್ನ ನನ್ನ ಕ್ಷೇತ್ರದ ಜನಸ್ಪಂದನೆಗೆ ಬಳಸುತ್ತಿದ್ದೇನೆ ಎಂದು ಹೇಳಿದ್ದಾರೆ.
ನಕಲಿಗಳ ಹಾವಳಿಗೆ ಪೊಲೀಸ್ ಇಲಾಖೆಯೇ ತತ್ತರ..! : ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ನಕಲಿಗಳ ಹಾವಳಿ ಹೆಚ್ಚಾಗಿದ್ದು ಅನೇಕ ನಟರು, ಕಾರ್ಟೂನಿಸ್ಟ್ ಗಳು, ಪತ್ರಕರ್ತರನ್ನೂ ಕೂಡ ಚಿಂತೆಗೀಡು ಮಾಡಿದೆ. ತನ್ನ ಫೋಟೋ ಬಳಸಿ ನಕಲಿ ಅಕೌಂಟ್ ತೆರೆಯಲಾಗಿದೆ ಎಂದು ನಟ ವಶಿಷ್ಠ ಸಿಂಹ ಇತ್ತೀಚೆಗಷ್ಟೇ ಹೇಳಿಕೊಂಡಿದ್ದರು, ಪ್ರಸಿದ್ಧ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ತನ್ನ ಖಾಸಗಿ ಫೋಟೋಗಳನ್ನ ಬಳಸಿ ಟ್ರೋಲ್ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು. ದರ್ಶನ್ ಸಿನಿಮಾ ಕುರುಕ್ಷೇತ್ರ ಬಿಡುಗಡೆಯಾದಾಗಿನಿಂದ ನಕಲಿಗಳ ಹಾವಳಿ ಮಿತಿಮೀರಿದೆ, ಸಿನಿಮಾ ವಿರುದ್ಧ ವಿಮರ್ಶೆ ಬರೆದರೆ ಅಸಹ್ಯಕರವಾಗಿ ಕಮೆಂಟ್ ಗಳು ಹಾಗೂ ಫ್ಯಾಮಿಲಿ ಫೋಟೋಗಳನ್ನ ಟ್ರೋಲ್ ಮಾಡಲಾಗುತ್ತಿದೆ. ಒಂದು ವಾರದಲ್ಲಿ ಮೂರ್ನಾಲ್ಕು ಪತ್ರಕರ್ತರು ಫೇಸ್ಬುಕ್ ಗೆ ತಾತ್ಕಾಲಿಕ ವಿರಾಮ ಹೇಳಿದ್ದಾರೆ.
ಖಾಸಗೀತನಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಫೇಸ್ಬುಕ್ ತನ್ನ ಬಳಕೆದಾರರಿಗೆ ಆಧಾರ್ ಕಾರ್ಡ್ ಬಳಸಿ ಅಪ್ಡೇಟ್ ಮಾಡಿಸುವ ಕೆಲಸಕ್ಕೆ ಶೀಘ್ರವೇ ಚಾಲನೆ ನೀಡಲಿದೆ, ಈ ಕುರಿತು ಮದ್ರಾಸ್, ಭೋಪಾಲ್, ಮುಂಬೈ ಹೈಕೋರ್ಟ್ ಗಳು ಅಭಿಪ್ರಾಯ ತಿಳಿಸಿದ್ದು ಕೇಂದ್ರ ಗೃಹ ಇಲಾಖೆಯೂ ಭದ್ರತೆ ದೃಷ್ಟಿಯಿಂದ ಕ್ರಮಕ್ಕೆ ಮುಂದಾಗಬಹುದು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?