Featured
ಸಂಜೆಯೊಳಗೆ ಸಚಿವರಿಗೆ ಖಾತೆಗಳ ಹಂಚಿಕೆ ಪಕ್ಕಾ : CM ಯಡಿಯೂರಪ್ಪ ಮೇಲೆ ಮುಗಿಬಿದ್ದರಾ ಅನರ್ಹರು..?

ಬೆಂಗಳೂರು/ನವದೆಹಲಿ : ಅನರ್ಹ ಶಾಸಕರ ಮನವೊಲಿಗೆ ಹಾಗೂ ಬಿಜೆಪಿ ಹೈಕಮಾಂಡ್ ಭೇಟಿಗೆ ದೆಹಲಿಗೆ ಹೋಗಿದ್ದ ಸಿಎಂ ಯಡಿಯೂರಪ್ಪ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ತಡರಾತ್ರಿ ಬೆಂಗಳೂರಿಗೆ ಬಂದ ಯಡಿಯೂರಪ್ಪ, ಸಚಿವರ ಖಾತೆಗಳ ಹಂಚಿಕೆ ಕುರಿತು ಸ್ಪಷ್ಟನೆ ನೀಡಿದ್ರು. ಇಂದು ಸಂಜೆ ವೇಳೆಗೆ ಯಾವ ಸಚಿವರಿಗೆ ಯಾವ ಖಾತೆ ಅನ್ನೋದು ಫೈನಲ್ ಆಗಲಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಆಗಿದೆ ಎಂದ ಯಡಿಯೂರಪ್ಪ, ಸುಮಾರು ಒಂದೂವರೆ ಗಂಟೆಗಳ ಕಾಲ ಅಮಿತ್ ಶಾ ಜೊತೆ ಚರ್ಚೆ ನಡೆಸಿದ್ದಾಗಿ ಹೇಳಿದ್ರು. ಆದ್ರೆ, ಅನರ್ಹ ಶಾಸಕರ ಮುಂದಿನ ನಡೆ ಕುರಿತು ಮಾತ್ರ ಬಿಎಸ್ವೈ ಬಾಯಿ ಬಿಡಲಿಲ್ಲ.
ಈ ನಡುವೆ, ದೆಹಲಿಯಲ್ಲೇ ಬೀಡು ಬಿಟ್ಟಿರೋ ಅನರ್ಹ ಶಾಸಕರು, ಯಡಿಯೂರಪ್ಪ ಮೇಲೆ ಕೆಂಡಾಮಂಡಲರಾಗಿದ್ದಾರೆ ಎನ್ನಲಾಗಿದೆ. ಈವರೆಗೆ ತಮ್ಮ ಬಗ್ಗೆ ಯಾವುದೇ ರೀತಿಯ ಕಾಳಜಿ ತೋರಿಸುತ್ತಿಲ್ಲ. ದೆಹಲಿಗೆ ಬಂದರೂ ಹೈಕಮಾಂಡ್ ಮಟ್ಟದ ನಾಯಕರು ಯಾರು ನಮ್ಮನ್ನ ಮಾತಾಡಿಸುತ್ತಿಲ್ಲ. ನಮ್ಮಿಂದಾಗಿ ಸರ್ಕಾರ ರಚಿಸಿ, ನಮ್ಮನ್ನೇ ಅತಂತ್ರ ಮಾಡಿದ್ದೀರಿ ಎಂದು ಯಡಿಯೂರಪ್ಪ ಮೇಲೆ ಅನರ್ಹ ಶಾಸಕರು ಗರಂ ಆಗಿದ್ದರು ಎನ್ನಲಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?