ತಮಿಳುನಾಡು: ಖ್ಯಾತ ನಟ ಕಮಲ್ ಹಾಸನ್ ಹಿಂದಿ ಹೇರಿಕೆ ವಿರುದ್ಧ ಕಿಡಿಕಾರಿದ್ದು, ಯಾವ ಶಾ, ಸಾಮ್ರಾಟ, ಸುಲ್ತಾನ ವಿವಿಧತೆಗೆ ಧಕ್ಕೆ ತರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಹಿಂದಿಯಿಂದ ಮಾತ್ರ ಒಗ್ಗಟ್ಟು ಸಾಧ್ಯ ಎಂದು ಟ್ವೀಟ್ ಮಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಿಂದಿಯೇತರ ರಾಜ್ಯಗಳಲ್ಲಿ ಪ್ರತಿಭಟನೆಗೆ ನಾಂದಿ ಹಾಡಿದ್ದರು, ಇದಾದ ಮೇಲೆ ಆಯಾ ರಾಜ್ಯದ ಹಾಲಿ ಹಾಗೂ ಮಾಜಿ ಸಿಎಂಗಳೂ ಸಹ ವಿರೋಧ ವ್ಯಕ್ತಪಡಿಸಿದ್ದರು. ಈಗ ಸಿನಿಮಾ ನಟ ನಟಿಯರ ಸರದಿ.
ಅಮಿತ್ ಶಾ ಹಿಂದಿ ಹೇರಿಕೆ ವಿರುದ್ಧ ಒನ್ ನೇಷನ್ ಮೆನಿ ಲಾಂಗ್ವೇಜಸ್ ಎಂಬ ಶೀರ್ಷಿಕೆಯಡಿ ವಿಡಿಯೋ ಮಾಡಿ ಟ್ವೀಟ್ ಮಾಡಿರುವ ಕಮಲ್ ಹಾಸನ್ ಅಮಿತ್ ಶಾ ಮಾತಿನ ಮರ್ಮವನ್ನ ಕೆದುಕಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಜಲ್ಲಿಕಟ್ಟು ಕೇವಲ ಒಂದು ಪ್ರತಿಭಟನೆಯಾಗಿತ್ತು, ಭಾಷೆ ವಿಚಾರಕ್ಕೆ ಬಂದರೆ ಅದರ ಸಂಘರ್ಷ ಊಹಿಸಲು ಸಾಧ್ಯವಿಲ್ಲ, ನಾವೆಲ್ಲಾ ಜನಗಣಮನ ಒಪ್ಪಿಕೊಂಡಿದ್ದೇವೆ ಏಕೆಂದರೆ ಅದರಲ್ಲಿ ಎಲ್ಲಾ ಭಾಷೆಯ ಉಲ್ಲೇಖವಿದೆ, ಅದು ಬೆಂಗಾಲಿಯಾದರೂ ಒಪ್ಪಿಕೊಂಡಿರೋದು ಏಕೆ ಎಂದರೆ ಅದು ಎಲ್ಲರನ್ನ ಗೌರವಿಸುತ್ತದೆ ಎಂಬ ಅರ್ಥದಲ್ಲಿ ಚಾಟಿ ಬೀಸಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?