Connect with us

Featured

ವೆಂಕಟರಮಣ ಹುಚ್ಚ ವೆಂಕಟ್‌ ಹೇಗಾದ..? ಓದಲೇ ಬೇಕು ಈ ಸ್ಟೋರಿ

ವೆಂಕಟರಮಣ ಲಕ್ಷ್ಮಣ್‌ ಎಷ್ಟು ಚೆಂದದ ಹೆಸರು..! ಹೇಗೆ ಬದಲಾಯ್ತು ಹುಚ್ಚ ವೆಂಕಟ್‌ ಎಂದು..? ಇದೊಂದು ಕರುಣಾಜನಕ ಸ್ಟೋರಿ ಇದೆ. ಕೆಲವು ವರ್ಷಗಳ ಹಿಂದೆ ವೆಂಕಟ್‌ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ, ಟಿವಿ ನೋಡದಿರುವವರಿಗೆ ಈತ ಯಾರೆಂದು ಈಗಲೂ ತಿಳಿದಿಲ್ಲ, ಆತ ಒಬ್ಬ ನಟ, ನಿರ್ದೇಶಕ. ನೆನಪಿರಲಿ. ಈತ ಹುಚ್ಚ ಆಗದಿದ್ದರೆ ಸ್ಯಾಂಡಲ್‌ ವುಡ್‌ನಲ್ಲಿ ಒಳ್ಳೆ ಪ್ರತಿಭೆಯಾಗುತ್ತಿದ್ದ .

ತುಂಬು ಕುಟುಂಬದ ಪ್ರೀತಿಯ ಮಗ: ಹುಚ್ಚ ವೆಂಕಟ್‌ ಆ ಕಾಲಕ್ಕೆ ಫೇಮಸ್‌ ಪಿಡಬ್ಲ್ಯೂ ಡಿ ಕಾಂಟ್ರಾಕ್ಟರ್‌ ಆಗಿದ್ದ ಲಕ್ಷ್ಮಣ್‌ ಹಾಗೂ ಗೌರಮ್ಮ ಅವರ ಮಗ. ಏಳು ಮಕ್ಕಳಲ್ಲಿ ಈತ ಕೊನೆಯವನಾದ್ದರಿಂದ ಮನೆಯಲ್ಲೆಲ್ಲಾ ಸಿಕ್ಕಾಪಟ್ಟೆ ಪ್ರೀತಿ. ಇವರಿಗೆ ಬೆಂಗಳೂರಿನ ಇಂದಿರಾನಗರ, ಕನಕಪುರ ರಸ್ತೆಯಲ್ಲಿ ಮನೆಗಳಿವೆ ಹಾಗೂ ದೇವನಹಳ್ಳಿಯಲ್ಲಿ ಎಸ್ಟೇಟ್‌ ಕೂಡ ಇದೆ ಎಂದರೆ ಅವರ ಶ್ರೀಮಂತಿಕೆ ಎಷ್ಟು ಎಂಬುದು ಗೊತ್ತಾಗತ್ತೆ.

ಹುಟ್ಟುತ್ತಲೇ ತುಂಬಾ ಚುರುಕಾಗಿದ್ದ ವೆಂಕಟರಮಣ ಶಾಲಾ ದಿನಗಳಲ್ಲಿ ರ್ಯಾಂಕ್‌ ಸ್ಟೂಡೆಂಟ್‌, ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಓದಿದ ಈತ ಸಿವಿಲ್‌ ಎಂಜಿನಿಯರ್.‌ ಎಂಜಿನಿಯರಿಂಗ್‌ ಮುಗಿದ ನಂತರ ಲೈಫ್‌ ಸ್ಟೈಲ್‌ ಶೋರೂಂನ ಮ್ಯಾನೇಜರ್‌ ಆಗಿದ್ದಾತ ಒಂದು ಇವೆಂಟ್‌ ಮ್ಯಾನೇಜ್ಮೆಂಟ್‌ ಕಂಪನಿಯನ್ನೂ ತೆರೆದಿದ್ದ. ಆದರೆ ತನ್ನ ಅಣ್ಣ ಕುಶಾಲ್‌ ಬಾಬು ಕನ್ನಡ ಸಿನಿಮಾದಲ್ಲಿ ನಟನಾಗಿದ್ದರಿಂದ ಆತನ ಗೀಳು ಇವರಿಗೂ ದಾಟುತ್ತೆ. ನಂತರ ಬಣ್ಣ ಹಚ್ಚಲು ಅಡಿ ಇಡುತ್ತಾರೆ, ಗಾಂಧಿ ನಗರದ ಕದ ತಟ್ಟುತ್ತಾರೆ. ಎಲ್ಲಾ ಬಿಟ್ಟು ಸ್ವತಂತ್ರ್ಯ ಪಾಳ್ಯ ಅಂತ ಒಂದು ಸಿನಿಮಾ ಮಾಡ್ತಾರೆ. ಅದರಲ್ಲಿ ಇವರೇ ಆಲ್‌ ರೌಂಡರ್.‌ ಸಿನಿಮಾ ನೆಲಕಚ್ಚುತ್ತಿದ್ದಂತೆ ಇವರ ಜೀವನವೂ ಬೀದಿ ಪಾಲಾಗುವ ಲಕ್ಷಣಗಳು ಕಂಡಿತು. ಆಗಲೇ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಅಲ್ಲಿಂದ ಸಿನಿಮಾ ಕಡೆ ತಲೆ ಹಾಕದ ಈತ ಮುಂದೆ ಮೆಂಟಲ್‌ ಮಂಜ ಸಿನಿಮಾಕ್ಕೆ ನಿರ್ಮಾಪಕ ಆಗ್ತಾರೆ, ಒಂದು ಪುಟ್ಟ ಪಾತ್ರನೂ ಮಾಡ್ತಾರೆ. ಸಿನಿಮಾ ತಕ್ಕಮಟ್ಟಿಗೆ ಹಿಟ್‌ ಆಯ್ತು, ಈ ಸಿನಿಮಾ ಇವರನ್ನ ಮತ್ತಷ್ಟು ಅಧೋಗತಿಗೆ ತೆಗೆದುಕೊಂಡು ಹೋಗುವ ಮುನ್ಸೂಚನೆ ಆಯ್ತು ಎನಿಸುತ್ತೆ.

ನಂತರ ಹುಚ್ಚ ವೆಂಕಟ್‌ ಅನ್ನುವ ಸಿನಿಮಾ ಮಾಡಿದರು, ಸಿನಿಮಾ ನೋಡಲು ಯಾರೂ ಬರಲಿಲ್ಲ, ಮಾಧ್ಯಮವೊಂದರ ಎದುರು ನನ್ನ ಎಕ್ಕಡ, ಥೂ ಅಂತ ಉಗಿದರು. ಸಿನಿಮಾ ಹೆಸರನ್ನೇ ತನಗೆ ಇಟ್ಟುಕೊಂಡರು. ನಂತರ ಚಿತ್ರನಟಿ ರಮ್ಯಾ ನನ್ನ ಹೆಂಡ್ತಿ ಅಂತ ಓಡಾಡಿಕೊಂಡಿದ್ದವರನ್ನ ಮಾಧ್ಯಮಗಳು ಇನ್ನಷ್ಟು ಇಂಬು ನೀಡಿ ಪೋಷಿಸಿದವು. ನಂತರ ಒಂದಾ ಎರಡಾ..? ಆತ ಎಲ್ಲೇ ಹೋದರೂ ಸುದ್ದಿ, ಸಾಲದು ಎಂಬಂತೆ ಯೋಗ್‌ ರಾಜ್‌ ಭಟ್ಟರು ಅವರನ್ನ ಸಿಂಗರ್‌ ಕೂಡ ಮಾಡಿಬಿಟ್ರು,

ಆಗಲೇ ಟಿಆರ್‌ ಪಿ ಪೀಸ್‌ ಆಗಿದ್ದ ಈತ ಬಿಗ್‌ ಬಾಸ್‌ ಗೂ ಎಂಟ್ರಿ ನೀಡಿ ಅಲ್ಲಿದ್ದವರ ಮೇಲೂ ಹಲ್ಲೆ ಮಾಡಿ ಹೊರಬಂದ. ಕೆಲವು ದಿನಗಳ ಹಿಂದೆ ಚೆನ್ನೈನಲ್ಲಿ ಬಿಕಾರಿ ತರಹ ಅಲೆಯುತ್ತಿದ್ದವನನ್ನ ಪುನಃ ಮನೆಗೆ ಸೇರಿಸಲಾಗಿತ್ತು. ಆದರೆ ಈಗ ಮತ್ತೆ ರಾಜ್ಯದೆಲ್ಲೆಡೆ ಅಲೆಯುತ್ತಿದ್ದು ಮಂಡ್ಯದಿಂದ ಕೊಡಗಿಗೆ ತೆರಳಿ ಅಲ್ಲಿ ಕಾರ್‌ ಗ್ಲಾಸ್‌ ಒಡೆದು ರಂಪಾಟ ಮಾಡಿದ್ದಾನೆ. ಟಿವಿ ಮಾಧ್ಯಮದವರ ಕ್ಯಾಮೆರಾ ಮುಂದೆಯೇ ಬಡಿತ ತಿಂದಿದ್ದಾನೆ.

Advertisement

Continue Reading
Advertisement
Click to comment

Leave a Reply

Your email address will not be published. Required fields are marked *

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ