Featured
ವಾಹನ ಸವಾರರೇ ಎಚ್ಚರ ಎಚ್ಚರ..! ಪೊಲೀಸ್ ಕಮೀಷನರ್ ಕೊಟ್ಟ ವಾರ್ನಿಂಗ್ ಏನು..?

ಬೆಂಗಳೂರು : ಸೆಪ್ಟೆಂಬರ್ 3ರಿಂದ ರಾಜ್ಯದಲ್ಲಿ ಹೊಸ ಟ್ರಾಫಿಕ್ ರೂಲ್ಸ್ ಜಾರಿಯಾಗಿದೆ. ಏನಾದ್ರೂ ಸಂಚಾರಿ ನಿಯಮ ಉಲ್ಲಂಘಿಸಿದ್ರೆ, ಸಾವಿರಾರು ರೂಪಾಯಿ ಫೈನ್ ಕಟ್ಟಲೇಬೇಕಾಗುತ್ತೆ. ಇದು ಆದಾಯ ಹೆಚ್ಚಿಸಿಕೊಳ್ಳಲು ಮಾಡ್ತಿರೋ ಉಪಾಯವಲ್ಲ. ಬದಲಿಗೆ ಪ್ರಾಣಹಾನಿ ತಡೆಗಟ್ಟಲು, ಪ್ರಾಣ ಉಳಿಸಲು ಮಾಡ್ತಿರೋ ವಿಧಾನ ಎಂದು ಬೆಂಗಳೂರು ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತ್ನಾಡಿದ ಕಮೀಷನರ್ ಭಾಸ್ಕರ್ ರಾವ್, ದಂಡ ಹೆಚ್ಚಳದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಒಟ್ಟು 24 ಸಂಚಾಋ ನಿಯಮಗಳ ಉಲ್ಲಂಘನೆಗಳ ಬಗ್ಗೆ ದಂಡ ಹೆಚ್ಚು ಮಾಡಲಾಗಿದೆ ಎಂದ್ರು. ಕೆಲವು ನಿಯಮಗಳಿಗೆ ದಂಡದ ಜೊತೆ ಜೈಲು ಶಿಕ್ಷಿಯೂ ಇದೆ ಎಂದು ಎಚ್ಚರಿಕೆ ನೀಡಿದ್ರು. ಬೆಂಗಳೂರಿನಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ಇದರಿಂದ ಸಾವರ್ಜನಿಕರು ಸಾವನ್ನಪ್ಪುತ್ತಿದ್ದಾರೆ. ಉಲ್ಲಂಘಟನೆಗಳು ಜಾಸ್ತಿ ಆಗ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ರು.
ರಿಂಗ್ ರೋಡ್ನಲ್ಲಿ ವಾಹನಗಳು ಹೆಚ್ಚು ವೇಗವಾಗಿ ಬರುತ್ವೆ. ಅಪಘಾತವಾಗಿ ಪಾದಚಾರಿಗಳು ಮೃತಪಟ್ರೆ, ಕೇಸು ದಾಖಲು ಮಾಡ್ತೇವೆ. ಅಪಘಾತ ಆದ್ಮೇಲೆ ಸಾರಿ, ಕ್ಷಮಿಸಿ ಅಂದ್ರೆ ಆಗಲ್ಲ. ಇಲ್ಲಿ ವ್ಯಕ್ತಿಗಳ ಪ್ರಾಣ ಮುಖ್ಯ ಎಂದು ಭಾಸ್ಕರ್ ರಾವ್ ಹೇಳಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?