Featured
ವರ ಮಹಾಲಕ್ಷ್ಮೀ ಹಬ್ಬ ಆಚರಿಸುವುದು ಹೇಗೆ..? ಪೂಜೆಯ ವಿಧಿ-ವಿಧಾನಗಳೇನು.?

ವರ ಮಹಾಲಕ್ಷ್ಮಿ ಹಬ್ಬ ಆಚರಣೆ ಹೇಗೆ..? ಪೂಜಾ ವಿಧಾನ ಹೇಗಿರಬೇಕು..? ಯಾವ ರೀತಿ ಮಾಡಬೇಕು ಎಂಬುದು ಬಹಳಷ್ಟು ಜನರಿಗೆ ಗೊತ್ತಿರಲ್ಲ. ಹಲವು ರೀತಿಯ ಗೊಂದಲ ಇರುತ್ತೆ. ಇವತ್ತು ನಾವು ನಿಮಗೆ ವರ ಮಹಾಲಕ್ಷ್ಮಿ ಪೂಜೆ ಮಾಡುವ ಸಂಪೂರ್ಣ ಪ್ರಕ್ರಿಯೆಯನ್ನ ತಿಳಿಸ್ತೀವಿ..
ವರಮಹಾಲಕ್ಷ್ಮಿ ಪೂಜೆಗೆ ಏಳು ರೀತಿಯ ಪ್ರಕ್ರಿಯೆಗಳಿವೆ.
- ಪೂಜಾ ಸಮಯ
- ಪೂಜಾ ಸಿದ್ಧತೆ
- ಕಲಶ ಕೂರಿಸುವ ವಿಧಾನ
- ನೈವೇಧ್ಯ
- ತಟ್ಟೆ ಜೋಡಿಸುವುದು
- ತಾಂಬೂಲ
- ವಿಸರ್ಜನೆ
- ಪೂಜಾ ಸಮಯ : ಶ್ರಾವಣ ಮಾಸದ ಶುಕ್ಲ ಪಕ್ಷದ ಎರಡನೇ ಶುಕ್ರವಾರ ವರಮಹಾಲಕ್ಕೀ ಹಬ್ಬ ಆಚರಿಸುತ್ತೇವೆ. ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಮುಗಿಸಬೇಕು. (ಅಂದ್ರೆ, ಬೆಳಗ್ಗೆ 6 ಗಂಟೆಯೊಳಗೆ ಪೂಜೆ ಮುಗಿಸಬೇಕು.) ಹಬ್ಬದ ಹಿಂದಿನ ದಿನವೇ ಕಲಶ ಅಥವಾ ಬಿಂದಿಗೆಗೆ ಸೀರೆ ಹುಡುಸಿರಬೇಕು. ಬಳಿಕ ಪೂಜೆ ದಿನ ಮನೆಯನ್ನ ಸ್ವಚ್ಛ ಮಾಡಿ, ದೇವಿಗೆ ಪೂಜೆ ಮಾಡಬೇಕು. ಯಾವುದೇ ಕಾರಣಕ್ಕೂ ರಾಹುಕಾಲದಲ್ಲಿ ಪೂಜೆ ಮಾಡಬಾರದು.
- ಪೂಜಾ ಸಿದ್ಧತೆ : ವರಮಹಾಲಕ್ಷ್ಮೀಯನ್ನು ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಕೂರಿಸಬೇಕು. ಮೊದಲಿಗೆ ಮಣೆ ಹಾಕಿ ಅದಕ್ಕೆ ಬಿಳಿ ಬಟ್ಟೆಯನ್ನು ಹಾಸಿ,,ಅದರ ಮೇಲೆ ಬಾಳೆ ಎಲೆಯನ್ನು ಹಾಕಿ ಬಳಿಕ ಅಷ್ಠ ರಂಗೋಲಿ ಬಿಡಿಸಬೇಕು.(ಅಕ್ಕಿಹಿಟ್ಟಿನಿಂದ ಮಾತ್ರ ರಂಗೋಲಿ ಬಿಡಿಸಬೇಕು) ಅದರ ಮೇಲೆ ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿ ಕಲಶ ಇಡಬೇಕು.
- ಕಲಶ ಕೂರಿಸುವ ವಿಧಾನ : ಬಿಂದಿಗೆಗೆ ನೀರು ತುಂಬಬೇಕು . (ನೀರಿನ ಜೊತೆಗೆ ಅರಿಶಿಣ, ಕುಂಕುಮ , ಅಕ್ಷತೆ ಕಾಳು, ಕೆಂಪು ಹೂವು, ನಾಣ್ಯ ಹಾಕಬೇಕು) ಕಲಶಕ್ಕೆ ಮಾವಿನ ಎಲೆ (ಅಥವಾ) ವಿಲ್ಯದ ಎಲೆ ಇಡಬೇಕು. ಕಲಶಕ್ಕೆ ತೆಂಗಿನಕಾಯಿ ಇಡಬೇಕು. ಆ ತೆಂಗಿನಕಾಯಿಗೆ ಅರಿಶಿನ ಅಚ್ಚಬೇಕು. ತೆಂಗಿನಕಾಯಿಗೆ ಕಣ್ಣು ಕಾಣದ ಹಾಗೆ ನಾರು ತೆಗೆಯಬೇಕು. ನಂತರ ಮುಖವಾಡ ಇಡಬೇಕು. ಅಮ್ಮನಿಗೆ ಗೆಜ್ಜೆ ವಸ್ತ್ರ ಮುಖ್ಯವಾಗಿ ಹಾಕಲೇಬೇಕು. ಲಕ್ಮೀ ಪೂಜೆ ಮಾಡುವ ಮೊದಲಿಗೆ ಗಣೇಶನ ಪೂಜೆ ಮಾಡಬೇಕು. ಗಣೇಶನನ್ನು ಲಕ್ಮೀಯ ಬಲಭಾಗಕ್ಕೆ ಕುರಿಸಬೇಕು. ನಂತರ ಲಕ್ಷ್ಮೀ ಪೂಜೆ ಮಾಡಬೇಕು.
- ನೈವೇದ್ಯ : ಲಕ್ಷ್ಮೀಗೆ ಗೋಧಿ ಪಾಯಸ ತುಂಬಾ ಇಷ್ಟ. ಹೋಳಿಗೆ, ಸಜ್ಜಿಗೆ, ಬಾಳೆಹಣ್ಣು ರಸಾವಳಿ, ಹೆಸರುಬೇಳೆ ಪಾಯಸ ಹೀಗೆ, ಯಾವುದಾದರು ಒಂದನ್ನು ಮಾಡಿ ನೈವೇದ್ಯಕ್ಕೆ ಇಡಬೇಕು.
- ತಟ್ಟೆ ಜೋಡಿಸುವುದು : ಅಮ್ಮನಿಗೆ 5 ರೀತಿಯ ಫಲಗಳನ್ನು ತಟ್ಟೆಯಲ್ಲಿ ಇಡಲೇಬೇಕು. ಮೊದಲಿಗೆ ದಾಳಿಂಬೆ (ದಾಳಿಂಬೆ ಅಮ್ಮನಿಗೆ ಲಕ್ಷ್ಮೀ ಸ್ವರೂಪ ) ಬಾಳೆಹಣ್ಣು, ಸೇಬು, ಮೊಸಂಬಿ, ಯಾವುದಾದರು 5 ರೀತಿಯ ಹಣ್ಣನ್ನು ದೇವಿಗೆ ಇಡಬೇಕು. ನಂತರ ಒಂದು ತಟ್ಟೆಯಲ್ಲಿ ತಾಂಬೂಲ, ಒಂದು ತಟ್ಟೆಯಲ್ಲಿ ಅರಿಶಿನ ಕುಂಕುಮ, ಅಕ್ಷತೆ ಕಾಳು, ಹೂವು, ಒಂದು ತಟ್ಟೆಯಲ್ಲಿ ಬಳೆಗಳನ್ನು ಜೋಡಿಸಿಕೊಳ್ಳಬೇಕು. ಒಂದು ತಟ್ಟೆಯಲ್ಲಿ ದುಡ್ಡು (ದುಡ್ಡು ಎಷ್ಠೇ ಇಟ್ಟರು ನೀವು ಒಂದು ರೂಪಾಯಿ ನಾಣ್ಯವನ್ನು 32 ರೂಪಾಯಿ ಇಡುವುದನ್ನು ಮರಿಯಬೇಡಿ.) ವ್ರತದ ದಾರವನ್ನು ಮಾಡಿಕೊಳ್ಳಿ. ನಂತರ ದೀಪವನ್ನು ಬೇಸ ಸಂಖ್ಯೆಯಲ್ಲಿ ಹಚ್ಚಬೇಕು. ತಟ್ಟೆಗಳನ್ನು ಬೆಸ ಸಂಖ್ಯೆಯಲ್ಲಿ ದೇವಿಯ ಮುಂದೆ ಇಡಬೇಕು
- ತಾಂಬೂಲ : ಅರಿಶಿಣ ಕುಂಕುಮ, ಎಲೆ ಅಡಿಕೆ, 1 ರೂಪಾಯಿ ನಾಣ್ಯ, ಹೂವು, ಬಾಳೆಹಣ್ಣು (ಯಾವುದೇ ಕಾರಣಕ್ಕೂ ಬಾಳೆಹಣ್ಣು ಒಂದು ಕೊಡಬೇಡಿ. ಬಾಳೆಹಣ್ಣು ದಂಪತಿಯ ಸಂಕೇತ) ನಿಮಗೆ ತಕ್ಕಂತೆ ನೀವು ತಾಂಬೂಲ ಕೊಡಬಹುದು.
- ವಿಸರ್ಜನೆ : ದೇವರನ್ನು ಕದಲಿಸುವ ಮುನ್ನ ನೀವು ದೇವಿಯ ಮುಂದೆ 10 ನಿಮಿಷ ಕುಳಿತು ನಿಮ್ಮ ಕೋರಿಕೆಗಳನ್ನು ಕೇಳಿಕೊಳ್ಳಬಹುದು. ಲಕ್ಷ್ಮೀಯನ್ನು ಕದಲಿಸುವ ಮುಂಚೆ ದೇವಿಗೆ ಕೆಂಪು ಆರತಿ ಮಾಡಬೇಕು. ನಂತರ ದೇವಿಯ ಬಲಭಾಗದಲ್ಲಿರುವ ಹೂವು ಸ್ವಲ್ಪ ತೆಗೆದು ಕೆಳಗೆ ಹಾಕಿ ನಂತರ ಕದಲಿಸಬೇಕು. (ಯಾವುದೇ ಕಾರಣಕ್ಕೂ ರಾಹುಕಾಲದಲ್ಲಿ ದೇವಿಯನ್ನು ಕದಲಿಸಬಾರದು.) ಕಲಶಕ್ಕೆ ಹಾಕಿದ ನೀರನ್ನು ಗಿಡದ ಮೇಲೆ ಚೆಲ್ಲಾಬೇಕು, ಬೇರೆ ಎಲ್ಲೂ ಚೆಲ್ಲಾಬಾರದು.
Continue Reading
Advertisement
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?
Click to comment