Featured
ವರಮಹಾಲಕ್ಷ್ಮಿ ಹಬ್ಬ.. ಬಳ್ಳಾರಿ ಮತ್ತು ರೆಡ್ಡಿ ಬ್ರದರ್ಸ್.. ಸುಷ್ಮಾ ಸ್ವರಾಜ್ಗೆ ಕರ್ನಾಟಕ ವಿಶೇಷ ನಂಟು..!

ಬಳ್ಲಾರಿ : ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಹಾಗೂ ಕರ್ನಾಟಕಕ್ಕೂ ಬಹಳ ವರ್ಷಗಳ ವಿಶೇಷ ನಂಟಿದೆ. ಹೃದಯಾಘಾತದಿಂದ ಮೃತಪಟ್ಟಿರೋ ಸುಷ್ಮಾ ಸ್ವರಾಜ್, ಕರ್ನಾಟಕದಿಂದಲೂ ಒಮ್ಮೆ ಚುನಾವಣೆ ಎದುರಿಸಿದ್ರು. 1999ರಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧೆ ಮಾಡಿ ಸೋಲನ್ನ ಅನುಭವಿಸಿದ್ರು.
1999ರಲ್ಲಿ ಸುಷ್ಮಾ ಸ್ವರಾಜ್ ಬಳ್ಳಾರಿಯಿಂದ ಸೋತರು, ಇಡೀ ಕ್ಷೇತ್ರ ತಮ್ಮದೇ ಎಂದು ಭಾವಿಸಿ, ಪ್ರತಿವರ್ಷ ಬಳ್ಳಾರಿಗೆ ಭೇಟಿ ಕೊಡ್ತಿದ್ರು. ಅದರಲ್ಲೂ ವರಮಹಾಲಕ್ಷ್ಮೀ ಹಬ್ಬದ ದಿನ ಬಳ್ಳಾರಿಗೆ ಬರ್ತಿದ್ದ ಸುಷ್ಮಾ ಸ್ವರಾಜ್, ಪೂಜೆಯಲ್ಲಿ ಪಾಲ್ಗೊಳ್ತಿದ್ರು. ಬಳ್ಳಾರಿಗೆ ಬಂದು, ವರಲಕ್ಷ್ಮೀ ಹಬ್ಬದ ದಿನ ಬಾಗಿನ ಸ್ವೀಕಾರ ಮಾಡ್ತಿದ್ರು.
ಆದ್ರೆ, ಕಾಕತಾಳೀಯವೋ ಏನೋ, ವರಮಹಾಲಕ್ಷ್ಮಿ ಹಬ್ಬ ಇನ್ನೆರಡು ದಿನ ಇರುವಾಗಲೇ ಸುಷ್ಮಾ ಸ್ವರಾಜ್ ಮೃತಪಟ್ಟಿದ್ದಾರೆ.
ಕನ್ನಡದಲ್ಲೇ ಭಾಷಣ..!
ಯೆಸ್, ಸುಷ್ಮಾ ಸ್ವರಾಜ್ ಬಳ್ಳಾರಿ ಲೋಕಸಭಾ ಚುನಾವಣೆಗೆ ನಿಂತಾಗ ಕನ್ನಡದಲ್ಲೇ ಭಾಷಣ ಮಾಡಿ ಎಲ್ಲರ ಹುಬ್ಬೇರಿಸಿದ್ರು. ಸುಷ್ಮಾ ಸ್ವರಾಜ್ ಕನ್ನಡ ಭಾಷಣಕ್ಕೆ ಜನಮನ ಸೋತಿದ್ದು ಸುಳ್ಳಲ್ಲ.
ರೆಡ್ಡಿ ಬ್ರದರ್ಸ್ಗೆ ತಾಯಿ ಸುಷ್ಮಾ..!
ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲುಗೆ ಸುಷ್ಮಾ ಸ್ವರಾಜ್ ಜೊತೆ ವಿಶೇಷ ನಂಟಿತ್ತು. ರೆಡ್ಡಿ ಹಾಗೂ ಶ್ರೀರಾಮುಲು, ಸುಷ್ಮಾ ಸ್ವರಾಜ್ ಅವರನ್ನ ತಮ್ಮ ತಾಯಿ ಎಂದೇ ಕರೆಯುತ್ತಿದ್ದರು. ವರಮಹಾಲಕ್ಷ್ಮೀ ಹಬ್ಬಕ್ಕೆ ಬಳ್ಳಾರಿಗೆ ಬಂದಾಗ ರೆಡ್ಡಿ ಮನೆಯಲ್ಲೇ ಪೂಜೆಯಲ್ಲಿ ಭಾಗಿಯಾಗ್ತಿದ್ರು. ಇದೇ ವೇಳೆ, ಶ್ರೀರಾಮುಲು ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸ್ತಿದ್ರು. ಇದರಲ್ಲೂ ಕೂಡ ಸುಷ್ಮಾ ಸ್ವರಾಜ್ ಭಾಗಿಯಾಗ್ತಿದ್ರು.

ಒಟ್ಟಿನಲ್ಲಿ ಸುಷ್ಮಾ ಸ್ವರಾಜ್ಗೂ ಕರ್ನಾಟಕಕ್ಕೂ ಅವಿಭಾವ ನಂಟಿತ್ತು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?