Featured
ರಾಧಿಕಾ ತಾನಾಡಿದ ಮಾತೇ ಸಂಕಷ್ಟಕ್ಕೆ ಕಾರಣವಾಯ್ತಾ..? : ಸ್ವೀಟಿಗೆ ಸ್ವಾಮಿ ಕಂಟಕ..!

ರೈಸಿಂಗ್ ಕನ್ನಡ :- ವಂಚಕ ಯುವರಾಜ ಸ್ವಾಮಿ ಹಲವರಿಗೆ ಮೋಸ, ದ್ರೋಹ ಮಾಡಿರೋದು ಈಗಾಗಲೇ ಗೊತ್ತಾಗಿದೆ. ಇದ್ರಲ್ಲಿ ಹಲವರು ನಟಿಯರು, ರಾಜಕಾರಣಿಗಳು, ಉದ್ಯಮಿಗಳು ಸೇರಿದ್ದಾರೆ. ಆದ್ರೆ, ವಂಚಕ ಯುವರಾಜ ಸ್ವಾಮಿ ಜೊತೆ ನಟಿ ರಾಧಿಕಾ ಕುಮಾರಸ್ವಾಮಿಗೆ ಇರೋ ನಂಟೇನು.? ಸ್ವಾಮಿ ಅಕೌಂಟ್ನಿಂದ ರಾಧಿಕಾಗೆ ಹಣ ಹೋಗಿದ್ದು ಯಾಕೆ..? ಅನ್ನೋ ಪ್ರಶ್ನೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಮಾಧ್ಯಮಗಳಲ್ಲಿ ರಾಧಿಕಾ ಕುಮಾರಸ್ವಾಮಿ ವಿಚಾರ ಬಿಸಿಬಿಸಿ ಕೇಕ್ನಂತೆ ಜೋರು ಸುದ್ದಿಯಾಯ್ತು.
ಇದೆಲ್ಲಕ್ಕೂ ಸ್ಪಷ್ಟನೆ ನೀಡಲು ಸ್ವತಃ ರಾಧಿಕಾ ಕುಮಾರಸ್ವಾಮಿಯೇ ಬುಧವಾರ ಸುದ್ದಿಗೋಷ್ಠಿ ಕರೆದು, ಮಾಹಿತಿ ನೀಡಿದ್ರು. ಆದ್ರೆ, ಇದೀಗ ಸಿಸಿಬಿ ವಿಚಾರಣೆ ಎದುರಿಸ್ತಿರೋ ರಾಧಿಕಾಗೆ, ತಾನು ನಡೆಸಿದ ಸುದ್ದಿಗೋಷ್ಠಿಯೇ ಮುಳುವಾಯ್ತಾ ಅನ್ನೋ ಪ್ರಶ್ನೆ ಕಾಡ್ತಿದೆ.

ಯಾಕಂದ್ರೆ, ಸ್ವಾಮಿ ಜೊತೆ ನಮ್ಮ ಫ್ಯಾಮಿಲಿಗೆ ನಂಟಿತ್ತು. ಆದ್ರೆ, ಆತ ವಂಚಕ ಎಂದು ಗೊತ್ತೇ ಇರಲಿಲ್ಲ ಎಂದು ಸ್ವೀಟಿ ರಾಧಿಕಾ ಸುದ್ದಿಗೋಷ್ಠಿಯಲ್ಲಿ ಹೇಳಿದ್ರು. ಜೊತೆಗೆ ಸ್ವಾಮಿ ಅಕೌಂಟ್ನಿಂದ 15 ಲಕ್ಷ ಹಾಗೂ ಅವರ ಬಾವನ ಅಕೌಂಟ್ನಿಂದ 60 ಲಕ್ಷ ಸೇರಿ ಒಟ್ಟು 75 ಲಕ್ಷ ಹಣ ನನ್ನ ಅಕೌಂಟ್ಗೆ ಬಂದಿದೆ ಅಂತ ರಾಧಿಕಾ ಕುಮಾರಸ್ವಾಮಿಯೇ ಒಪ್ಪಿಕೊಂಡ್ರು.
ಇಷ್ಟೇ ಅಲ್ಲದೆ, ಸುದ್ದಿಗೋಷ್ಠಿಯಲ್ಲಿ ಹಲವು ಗೊಂದಲದ ಹೇಳಿಕೆಗಳನ್ನ ರಾಧಿಕಾ ನೀಡಿದ್ರು. ಮೊದಲು ನನಗೆ ಹಣ ಬಂದಿಲ್ಲ ಅಂದಿದ್ರು. ಬಳಿಕ 15 ಲಕ್ಷ ಬಂತು. ಆಮೇಲೆ 60 ಲಕ್ಷ ಬಂತು.. ಸಿನಿಮಾ ಮಾಡೋಕೆ ಹಣ ಅಡ್ವಾನ್ಸ್ ಆಗಿ ಕೊಟ್ಟಿದ್ರು. ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರಿಸೋ ವೇಳೆ, ಹಲವು ಅನುಮಾನಗಳಿಗೂ ಕಾರಣವಾಗಿತ್ತು.
ಇದೇ ಕಾರಣಕ್ಕಾಗಿ ಸಿಸಿಬಿ ರಾಧಿಕಾ ಕುಮಾರಸ್ವಾಮಿಯನ್ನ ವಿಚಾರಣೆಗೆ ಕರೆದಿದೆ. ಹಲವು ಸ್ಪಷ್ಟನೆಗಳಿಗೆ ರಾಧಿಕಾ ಅವರ ವಿಚಾರಣೆ ನಡೆಸ್ತಿದೆ. ಒಂದ್ವೇಳೆ, ರಾಧಿಕಾ ಸುದ್ದಿಗೋಷ್ಠಿ ನಡೆಸದೇ ಇದ್ದಿದ್ರೆ, ಇಷ್ಟೊಂದು ದೊಡ್ಡ ಮಟ್ಟದ ಸುದ್ದಿ ಆಗ್ತಾ ಇರಲಿಲ್ವೇನೋ..?
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?