Featured
ರಾತ್ರಿ.. ಗಂಡಸು.. ಎಣ್ಣೆ..! : ದರ್ಶನ್ಗೇ ಟಾಂಗ್ ಕೊಟ್ಟರಾ ಕಿಚ್ಚ ಸುದೀಪ್..?

ಬೆಂಗಳೂರು : ಕಿಚ್ಚ ಸುದೀಪ್, ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿ ಇರ್ತಾರೆ. ಆದ್ರೆ, ಇತ್ತೀಚೆಗೆ ಸುದೀಪ್ ಮಾಡಿರೋ ಆ ಒಂದು ಟ್ವೀಟ್, ಇಡೀ ಚಿತ್ರರಂಗ ಚರ್ಚೆ ಮಾಡುವಂತೆ ಮಾಡಿದೆ. ಕೇವಲ ಚಿತ್ರರಂಗವೇ ಅಲ್ಲ, ಅಭಿಮಾನಿಗಳ ಮಧ್ಯೆ ವಾರ್ಗೂ ಇದು ಕಾರಣವಾಗಿದೆ. ಆ ಟ್ವೀಟ್ ಹೀಗಿದೆ ನೋಡಿ..
‘Real Men don’t need Alcohol and the sun to set to
become a man’ Found it an awesome one.. ಅಂದ್ರೆ, ಗಂಡಸು ಎನಿಸಿಕೊಳ್ಳಲು ಮದ್ಯಪಾನ ಮಾಡಬೇಕಾಗಿಲ್ಲ.
ಕತ್ತಲು ಆಗಲಿ ಎಂದು ಕಾಯಬೇಕಾಗಿಲ್ಲ, ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಎಲ್ಲೋ ಓದಿದ ಸುಂದರ
ಸಾಲುಗಳು ಈಗ ನೆನಪಾದವು ಎಂದು ಬರೆದಿರೋದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. Read a beautiful line somewhere,,
" Real MEN don't need Alcohol and the sun to set to become a man".
Found it an awesome one.. 🤗👏🏼👏🏼#PailwaanKichcha pic.twitter.com/L6x5Qd7snU— Kichcha Sudeepa (@KicchaSudeep) August 12, 2019
ರಾತ್ರಿ.. ಗಂಡಸು.. ಎಣ್ಣೆ..! : ಸುದೀಪ್ ಟಾಂಗ್ ಕೊಟ್ಟಿದ್ದು ಯಾರಿಗೆ..?
ಇಷ್ಟಕ್ಕೂ ಸುದೀಪ್ ಈ ರೀತಿ ಟ್ವೀಟ್ ಮಾಡಿದ್ದು ಯಾರಿಗೆ ಅನ್ನೋದಕ್ಕೆ ಯಾರ ಬಳಿಯೂ ಉತ್ತರವಿಲ್ಲ. ಅಭಿಮಾನಿಗಳು ಸೇರಿದಂತೆ ಇಡೀ ಚಿತ್ರರಂಗ ತಲೆಕೆಡಿಸಿಕೊಂಡಿದೆ. ಯಾರಿಗೂ ಅರ್ಥವಾಗದ ರೀತಿ ಸುದೀಪ್ ಟ್ವೀಟ್ ಮಾಡಿದ್ದು ಯಾಕೆ ಅನ್ನೋ ಮಾತುಗಳು ಕೇಳಿ ಬರ್ತಿವೆ.
ಎದುರಾಳಿ ಯೋಗ್ಯನಾದ್ರೆ ಮಾತ್ರ ಫೈಟ್ ಮಾಡುವೆ..!
ಇದೇ ಟ್ವೀಟ್ನಲ್ಲಿ ಮತ್ತೊಂದು ಫೋಟೋ ಕೂಡ ಇದೆ. ಇದರಲ್ಲೂ ಸಂದೇಶ ಇದ್ದು, ಎದುರಾಳಿ ಯೋಗ್ಯನಾದ್ರೆ ಮಾತ್ರ ಅವನೊಂದಿಗೆ ಫೈಟ್ ಮಾಡುವೆ ಎನ್ನುವ ಅರ್ಥದ ಸಾಲುಗಳಿವೆ. ಇಷ್ಟಕ್ಕೂ ಯಾರು ಆ ಎದುರಾಳಿ..? ಯಾಕೆ ಈ ರೀತಿಯ ಟ್ವೀಟ್ ಅಂತ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ದರ್ಶನ್ಗೆ ಟಾಂಗ್ ಕೊಟ್ಟರಾ ಸುದೀಪ್..?
ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದು ದರ್ಶನ್ಗೆ ಟಾಂಗ್ ಕೊಡೋಕಾ..? ಹೀಗೊಂದು ಕಾಮೆಂಟ್ಗಳು ಫ್ಯಾನ್ಸ್ಗಳು ಮಾಡ್ತಿದ್ದಾರೆ. ಡಿ ಬಾಸ್ಗೆ ಸುದೀಪ್ ಟಾಂಗ್ ಕೊಟ್ಟಿದ್ದಾರೆ ಅಂತ ಅಭಿಮಾನಿಗಳು ಹೇಳ್ತಿದ್ರೆ, ಈ ರೀತಿಯ ರಾಜಕೀಯ ಬೇಡ ಅಂತ ಕೆಲವು ಅಭಿಮಾನಿಗಳು ಹೇಳ್ತಿದ್ದಾರೆ.
ಒಟ್ಟಿನಲ್ಲಿ ಸುದೀಪ್ ಟ್ವೀಟ್ ಹಲವು ಪ್ರಶ್ನೆಗಳನ್ನ ಹಾಗೂ ಅನುಮಾನಗಳನ್ನ ಹುಟ್ಟಿಹಾಕಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಸ್ಪಷ್ಟ ಉತ್ತರ ಸಿಕ್ಕೇ ಸಿಗುತ್ತೆ ಅಂತಿದೆ ಗಾಂಧಿನಗರ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?