ರೈಸಿಂಗ್ ಕನ್ನಡ:- ಸಂಕ್ರಾಂತಿಗೆ ರಾಜ್ಯದಲ್ಲಿ ರಾಜಕೀಯ ಕ್ರಾಂತಿ ಆಗುತ್ತೆ. ಅದರಲ್ಲೂ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ, ಸಿಎಂ ಯಡಿಯೂರಪ್ಪ ಬದಲಾವಣೆ ಆಗ್ತಾರೆ ಅನ್ನೋ ಮಾತು ಜೋರಾಗಿಯೇ ಇದೆ. ಜೊತೆಗೆ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಯಾಗುತ್ತೆ ಅಥವಾ ವಿಲೀನ ಆಗುತ್ತೆ ಅನ್ನೋ ಚರ್ಚೆ, ಗುಸುಗುಸು ನಡೆಯುತ್ತಲೇ ಇದೆ. ಇದಕ್ಕೆಲ್ಲಾ ಮತ್ತಷ್ಟು ಪುಷ್ಠಿ ಅನ್ನುವಂತೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಿದ್ದಾರೆ. ಇದರಿಂದಾಗಿ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನದ ಜೊತೆ ಹಲವರಲ್ಲಿ ತಲ್ಲಣ ಕೂಡ ಶುರುವಾಗಿದೆ.
ಯೆಸ್, ಶಿವಮೊಗ್ಗದಲ್ಲಿ ಶನಿವಾರ ಹಾಗು ಭಾನುವಾರ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಈಗಾಗಲೇ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೀತಿದೆ. ಹೀಗಿರುವಾ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಂದಿದ್ದಾರೆ. ಅಲ್ಲದೆ, ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಾಗಿ ಗೆದ್ದು ಬೀಗಿದ್ದಾರೆ. ಇದರಿಂದ ಯಡಿಯೂರಪ್ಪಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ. ಆದ್ರೆ, ನಾಯಕತ್ವ ಬದಲಾವಣೆ ವಿಚಾರ ಮಾತ್ರ ಕಾಣೆಯಾಗಿಲ್ಲ.
ಯತ್ನಾಳ್ ಸೇರಿ ಹಲವು ಶಾಸಕರ ಅಸಮಾಧಾನ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮೊದಲಿನಿಂದಲೂ ಯಡಿಯೂರಪ್ಪ ವಿರುದ್ಧ ಆಕ್ರೋಶ, ಬೇಸರ, ಅಸಮಾಧಾನವನ್ನ ವ್ಯಕ್ತಪಡಿಸುತ್ತಲೇ ಇದ್ದಾರೆ. ಇತ್ತೀಚೆಗಷ್ಟೇ ಯತ್ನಾಳ್ , ಸಿಎಂ ಬಿಎಸ್ವೈ ಹಾಗೂ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ಗೆ ಬಹಿರಂಗ ಪತ್ರ ಬರೆದಿದ್ರು. ಶಾಸಕರಿಗೆ ಸಿಎಂ ಯಡಿಯೂರಪ್ಪ ವಿರುದ್ಧ ಬೇಸರ ಇದೆ. ವಿಭಾಗವಾರು ಶಾಸಕರ ಸಭೆ ಕರೆಯೋದು ಬೇಡ, ಜನವರಿ 4 ಅಥವಾ 5 ರಂದು ಒಟ್ಟಾಗಿ ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಎಂದು ಒತ್ತಾಯ ಮಾಡಿದ್ರು.
ಯಡಿಯೂರಪ್ಪ ಅನಾರೋಗ್ಯ ಮತ್ತು ವಯಸ್ಸು..!
ಇದು ಕೂಡ ಸಾಕಷ್ಟು ಚರ್ಚೆ ಆಗ್ತಿರೋ ವಿಷಯ. ಸ್ವತಃ ಬಿಜೆಪಿ ಶಾಸಕ ಯತ್ನಾಳ್, ಯಡಿಯೂರಪ್ಪ ಅವರ ವಯಸ್ಸು ಹಾಗೂ ಅನಾರೋಗ್ಯದ ಬಗ್ಗೆ ವ್ಯಂಗ್ಯವಾಡಿದ್ರು. ಯಡಿಯೂರಪ್ಪನವರ ಅನಾರೋಗ್ಯದ ಸಮಸ್ಯೆಯಿಂದಲೇ ಏನೋ, ಶಾಸಕರಿಗೆ ಸಿಎಂ ಸಿಗುತ್ತಲೇ ಇಲ್ಲ ಅಂತ ಪತ್ರ ಬರೆದು ಬೇಸರವನ್ನ ಹೊರ ಹಾಕಿದ್ರು.
ಈ ಎಲ್ಲಾ ವಿಚಾರಗಳು ಬಹುಶಃ ಶಿವಮೊಗ್ಗದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಆಗೋ ಸಾಧ್ಯತೆಗಳಿವೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?