Featured
ರಾಜಕಾರಣಿ ಹಾಕಿಸಿದ ಅಕ್ರಮ ಬ್ಯಾನರ್ಗೆ ಯುವತಿ ಬಲಿ : ಪ್ರಕರಣ ದಾಖಲಿಸಲು ಮೀನಾಮೇಷ

ತಮಿಳುನಾಡು: ರಾಜಕಾರಣಿಯ ಖಾಸಗಿ ಸಮಾರಂಭಕ್ಕೆ ಹಾಕಲಾಗಿದ್ದ ಬ್ಯಾನರ್ ಹರಿದು ಬೈಕ್ನಲ್ಲಿ ತೆರಳುತ್ತಿದ್ದ ಯವತಿ ನೆಲಕ್ಕೊರಗಿದ್ದಳು, ದುರಾದೃಷ್ಟ ಹಿಂಬದಿಯಿಂದ ಬಂದ ಲಾರಿ ಆಕೆಯ ಮೇಲೆ ಹರಿದು ಸಾವನ್ನಪ್ಪಿ ಬಿಟ್ಟಳು. ಘಟನೆ ನಡೆದು ಒಂದು ದಿನ ಆದರೂ ಪೊಲೀಸರು ಮಾತ್ರ ಗಪ್ಚುಪ್ ಆಗಿ ಕುಳಿತಿದ್ದಾರೆ.
ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ೨೩ವರ್ಷದ ಸಾಫ್ಟ್ವೇರ್ ಎಂಜಿನಿಯರ್ ಯುವತಿ ಶುಭಶ್ರೀ ಬೈಕ್ನಲ್ಲಿ ತೆರಳುವಾಗ ಅನಧಿಕೃತ ಬ್ಯಾನರ್ ಹರಿದು ಬಿದ್ದಿದೆ, ಬೈಕ್ನಿಂದ ಆಯತಪ್ಪಿ ಕೆಳಗೆ ಬಿದ್ದ ಶುಭಶ್ರೀ ಮೇಲೆ ಲಾರಿ ಹರಿದು ಆಕೆ ಮೃತಳಾದಳು.
ಎಲ್ಲಾ ಮಹಾನಗರ ಪಾಲಿಕೆಯಲ್ಲೂ ಅನಧಿಕೃತ ಫ್ಲೆಕ್ಸ್ ಹಾಗೂ ಬ್ಯಾನರ್ ಹಾಕಲು ಅವಕಾಶವಿಲ್ಲ, ಇಷ್ಟಾದರೂ ಇಲ್ಲಿನ ಮಾಜಿ ಕೌನ್ಸಿಲರ್ ಹಾಗೂ ಆಡಳಿತರೂಢ ಎಐಎಡಿಎಂಕೆ ಪಕ್ಷದ ಮುಖಂಡ ಸಿ.ಜಯಗೋಪಾಲ್ ಪಲ್ಲಾವರಂ-ತೊರೈಪಾಕಂ ನಲ್ಲಿ ತಮ್ಮ ಕುಟುಂಬದ ಖಾಸಗಿ ಕಾರ್ಯಕ್ರಮಕ್ಕೆ ಶುಭಕೋರುವಂತೆ ಮುಖ್ಯಮಂತ್ರಿ ಪಳನಿಸಾಮಿ ಫೋಟೊ, ಉಪಮುಖ್ಯಮಂತ್ರಿ ಪನ್ನೀರಸೆಲ್ವಂ ಹಾಗೂ ಪಕ್ಷದ ಮುಖ್ಯಸ್ಥೆ ಜೆ.ಜಯಲಲಿತಾ ಫೋಟೋ ಬಳಸಿಕೊಂಡಿದ್ದ.
ಘಟನೆ ನಡೆದು ದಿನ ಕಳೆದರೂ ಪೊಲೀಸರು ಯಾರ ಮೇಲೂ ಕೇಸ್ ದಾಖಲಿಸಿಲ್ಲ, ಕೊನೆಗೆ ಮಾಧ್ಯಮ ಮುಗಿಬಿದ್ದ ಮೇಲೆ ಲಾರಿ ಚಾಲಕನ ಮೇಲೆ ತರಾತುರಿಯಲ್ಲೊಂದು ಪ್ರಕರಣ ದಾಖಲಿಸಿದ್ದಾರೆ. ಸದ್ಯ ಈ ಪ್ರಕರಣ ತಮಿಳುನಾಡಿನಲ್ಲಿ ರಾಜಕೀಯ ಸ್ವರೂಪ ಪಡೆಯುತ್ತಿದೆ.
You may like
ಚೆನ್ನೈ ಮಾದರಿಯಲ್ಲಿ ಬೆಂಗಳೂರು ಲಾಕ್ಡೌನ್..? ವಿಶೇಷ ಸಭೆಯಲ್ಲಿ ನಿರ್ಧಾರವಾಗಲಿದೆ ಸಿಲಿಕಾನ್ ಸಿಟಿ ಭವಿಷ್ಯ..!
ದೇವ ಮಾನವ ಕಲ್ಕಿ ಭಗವಾನ್ ಆಶ್ರಮದಲ್ಲಿ ಸಿಕ್ಕಿದ್ದು ಬರೋಬ್ಬರಿ 490 ಕೋಟಿ ಅಕ್ರಮ ಕ್ಯಾಶ್..!
ಐದು ತಿಂಗಳ ಬಳಿಕ ಅಣ್ಣಾಮಲೈ ರಾಜೀನಾಮೆ ಅಂಗೀಕಾರ. ರಾಜಕೀಯ ಸೇರ್ತಾರಾ..?
ರಶ್ಮಿಕಾ ಮಂದಣ್ಣ ಮುಡಿಗೆ ಸೆನ್ಸೇಷನ್ ಆಫ್ ದಿ ಇಯರ್ ಪ್ರಶಸ್ತಿ : ಸಖತ್ ಹಾಟ್ ಮಗಾ..