Featured
ರಾಜಕಾರಣಿ ಮಗಳ ಮದ್ವೆ ಉಸ್ತುವಾರಿ, ಪೊಲೀಸ್ಗೆ ಗಟ್ಟಿ ಚಿನ್ನ: ಮನ್ಸೂರ್ ಬಿಚ್ಚಿಟ್ಟ ಸತ್ಯ

ಬೆಂಗಳೂರು: ಐಎಂಎ ಬಹುಕೋಟಿ ಹಗರಣದಲ್ಲಿ ಎಸ್ಐಟಿಯಿಂದ ಬಂಧಿತನಾಗಿ ವಿಚಾರಣೆಗೆ ಒಳಪಟ್ಟಿರುವ ಐಎಂಎ ಸ್ಥಾಪಕ ಮನ್ಸೂರ್ ಖಾನ್ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ಹೇಗೆಲ್ಲಾ ಸಹಾಯ ಮಾಡಿದ್ದ ಎಂಬುದನ್ನ ಹಂತ ಹಂತವಾಗಿ ಬಾಯಿ ಬಿಡುತ್ತಿದ್ದಾನೆ.
ಐಪಿಎಸ್ ಅಧಿಕಾರಿಯೊಬ್ಬರಿಗೆ ೨೫ ಕೋಟಿ ಹಣದ ಜೊತೆ ೨೫ಕೆಜಿ ಚಿನ್ನವನ್ನೂ ನೀಡಿದ್ದ, ಯಾರೂ ಈ ಅಧಿಕಾರಿ ಎಂದರೆ ಈ ಹಿಂದೆ ಪೂರ್ವ ವಿಭಾಗದಲ್ಲಿ ಡಿಸಿಪಿಯಾಗಿದ್ದರು. ಇದೇ ಐಪಿಎಸ್ ಮಾತು ಕೇಳಿ ಯಶವಂತಪುರದಲ್ಲಿನ ಐಷಾರಾಮಿ ಹೋಟೆಲ್ನ್ನ ಐದು ಕೋಟಿಗೆ ವರ್ಗಾವಣೆ ಮಾಡಿದ್ದಾಗಿಯೂ ಹೇಳಿದ್ದಾನೆ.
ಬಹಳ ಮುಖ್ಯವಾಗಿ ಮಾಜಿ ಗೃಹಮಂತ್ರಿಗಳ ಆಪ್ತರ ಮಗಳ ಮದುವೆ ಉಸ್ತುವಾರಿ ನೋಡಿಕೊಂಡಿದ್ದ, ಮದುವೆಗೆ ಅಗ್ಗದ ಬೆಲೆಯಲ್ಲಿ ಚಿನ್ನ ನೀಡಲೂ ಸಹ ಆ ಮಾಜಿ ಮಂತ್ರಿ ಕೇಳಿಕೊಂಡಿದ್ದರಂತೆ ಹಾಗಾಗಿ ವಿಚಾರಣೆಗೆ ಅವರನ್ನೂ ಕರೆತರಬಹುದು ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
Advertisement
Continue Reading
Advertisement
You may like
Click to comment