Featured
ಯಡಿಯೂರಪ್ಪ ಸಿಎಂ ಆಗಲು ಶ್ರಮಿಸಿದ್ದ ಯೋಗೀಶ್ವರ್ಗೇ ಸಿಗಲಿಲ್ಲ ಮಂತ್ರಿ ಸ್ಥಾನ..! ಯಾಕೆ ಗೊತ್ತಾ..?

ಬೆಂಗಳೂರು : ಸಮ್ಮಿಶ್ರ ಸರ್ಕಾರವನ್ನ ಉರುಳಿಸಿದ್ದು ಮಾಜಿ ಸಚಿವ, ಚನ್ನಪಟ್ಟಣದ ಮಾಜಿ ಶಾಸಕ ಯೋಗೀಶ್ವರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆ ಕೊಡಿಸುವಲ್ಲಿ ಯೋಗೀಶ್ವರ್ ಶ್ರಮ ಸಾಕಷ್ಟಿದೆ. ಇವತ್ತು ಯಡಿಯೂರಪ್ಪ ಸಿಎಂ ಆಗಲು ಕಾರಣ, ಇದೇ ಯೋಗೀಶ್ವರ್. ಆದ್ರೆ, ಯೋಗೀಶ್ವರ್ಗೆ ಯಾಕೆ ಸಚಿವ ಸ್ಥಾನ ಮಿಸ್ ಆಯ್ತು ಅನ್ನೋದೇ ಎಲ್ಲರಿಗೂ ಕಾಡ್ತಿರೋ ಪ್ರಶ್ನೆ.
ಮಲ್ಲೇಶ್ವರಂ ಶಾಸಕ ಡಾ. ಅಶ್ವತ್ಥನಾರಾಯಣ, ಯಲಹಂಕ ಶಾಸಕ ವಿಶ್ವನಾಥ್ ಹಾಗೂ ಮಾಜಿ ಸಚಿವ ಯೋಗೇಶ್ವರ್. ಇವರು ಮೂವರು ಆಪರೇಷನ್ ಕಮಲದ ಸೂತ್ರಧಾರರು. ಈ ಮೂವರಲ್ಲಿ ಇಬ್ಬರಿಗೆ ಮಂತ್ರಿ ಸ್ಥಾನ ಸಿಕ್ಕೇ ಸಿಗುತ್ತೆ ಅನ್ನೋ ಮಾತು ರಾತ್ರಿವರೆಗೆ ಕೇಳಿ ಬರ್ತಿತ್ತು. ಆದ್ರೆ, ಅಶ್ವತ್ಥ್ ನಾರಾಯಣ ಅವರಿಗೆ ಮಾತ್ರ ಸಿಕ್ತು. ಯೋಗೀಶ್ವರ್ಗೆ ಮಿಸ್ ಆಯ್ತು.
ಎರಡನೇ ಹಂತದಲ್ಲಿ ಯೋಗೀಶ್ವರ್ಗೆ ಮಂತ್ರಿ ಸ್ಥಾನ ಪಕ್ಕಾ
ಸದ್ಯ, ಅನರ್ಹ ಶಾಸಕರಿಗೆ ಯಾವುದೇ ಸ್ಥಾನಮಾನ ಇಲ್ಲ. ಹೀಗಾಗಿ ಯೋಗೀಶ್ವರ್ಗೆ ಮಂತ್ರಿ ಸ್ಥಾನ ಕೊಟ್ರೆ, ತಪ್ಪಾಗುತ್ತೆ. ಅನರ್ಹ ಶಾಸಕರ ಪ್ರಕರಣ ಇತ್ಯರ್ಥ ಆದ್ಮೇಲೆ, ಎರಡನೇ ಹಂತದಲ್ಲಿ ಬಹುಶಃ ಸಚಿವ ಸ್ಥಾನ ಸಿಗಬಹುದು ಅನ್ನೋ ನಿರೀಕ್ಷೆ ಇದೆ.
ಒಟ್ಟಿನಲ್ಲಿ ಯೋಗೀಶ್ವರ್ಗೆ ಸದ್ಯ ಸಚಿವ ಸ್ಥಾನ ನೀಡದೇ ಇರೋದು ಅವರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಆದ್ರೆ, ಯೋಗೀಶ್ವರ್ ಮಾತ್ರ ನೋ ವರಿ ಅಂತಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?