Connect with us

Featured

ಯಡಿಯೂರಪ್ಪ ಸಂಪುಟದಲ್ಲಿ ಲಿಂಗಾಯತರೇ ಸಿಂಹಪಾಲು : ಉಳಿದವರಿಗೆ ಮೋಸ ಮಾಡಿದ್ರಾ BSY..?

ಬೆಂಗಳೂರು : ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಲಿಂಗಾಯತರಿಗೆ ಬಹುಪಾಲು ಸಿಕ್ಕಿದೆ. 17 ಸಚಿವರ ಪೈಕಿ ಸಿಎಂ ಬಿಎಸ್​ವೈ ಸೇರಿ 8 ಮಂದಿ ಲಿಂಗಾಯತ ಸಮುದಾಯದವರೇ ಇದ್ದಾರೆ. ಅಂದ್ರೆ, ಸರಿ ಸುಮಾರು ಶೇಕಡಾ 44 ರಷ್ಟು ಮಂದಿ ಲಿಂಗಾಯತರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಯಾರೆಲ್ಲಾ ಲಿಂಗಾಯತ ಸಚಿವರಿದ್ದಾರೆ, ಯಾಕೆ ಅವರನ್ನ ಆಯ್ಕೆ ಮಾಡಲಾಗಿದೆ ಅನ್ನೋದನ್ನ ನೋಡೋಣ.

ಜಗದೀಶ್​ ಶೆಟ್ಟರ್​. ಮಾಜಿ ಮುಖ್ಯಮಂತ್ರಿಯಾಗಿದ್ದ ಶೆಟ್ಟರ್ ಈಗ ಸಚಿವರಾಗಿದ್ದಾರೆ. 6 ಬಾರಿ ಶಾಸಕರಾಗಿ ಆಯ್ಕೆಯಾದ ಶೆಟ್ಟರ್​ ಹಿರಿಯರು. ಉತ್ತರ ಕರ್ನಾಟಕದಲ್ಲಿ ಲಿಂಗಾಯತರ ಪ್ರಭಾವಿ ನಾಯಕ. ಹೀಗಾಗಿ, ಶೆಟ್ಟರ್​ ಈಗ ಮಂತ್ರಿಯಾಗಿದ್ದಾರೆ.

ಬಸವರಾಜ್​ ಬೊಮ್ಮಾಯಿ : ಹಾವೇರಿ ಜಿಲ್ಲೆಯ ಬಿಜೆಪಿ ಪ್ರಭಾವಿ ಜೊತೆಗೆ ಲಿಂಗಾಯಿತ ನಾಯಕ. ಯಡಿಯೂರಪ್ಪಗೆ ಆಪ್ತರೂ ಕೂಡ. ಸಮ್ಮಿಶ್ರ ಸರ್ಕಾರ ಬೀಳಿಸುವಾಗ, ಬಿಎಸ್​ವೈ ಜೊತೆ ನಿಂತವರು ಬೊಮ್ಮಾಯಿ. 3 ಬಾರಿ ಶಾಸಕರು ಕೂಡ. ಈ ಎಲ್ಲಾ ಅರ್ಹತೆಗಳಿಂದ ಬೊಮ್ಮಾಯಿಗೆ ಮಂತ್ರಿ ಸ್ಥಾನ ಸಿಕ್ಕಿದೆ.

ಜೆ.ಸಿ. ಮಾಧುಸ್ವಾಮಿ : ಬಹುಶಃ ಮಾಧುಸ್ವಾಮಿ ಅವರ ಮಾತುಗಾರಿಕೆ ಇಲ್ಲದೇ ಇದ್ದಿದ್ದರೆ, ಸಮ್ಮಿಶ್ರ ಸರ್ಕಾರ ಇದ್ದಾಗ ಸದನದಲ್ಲಿ ಯಡಿಯೂರಪ್ಪ ಆತುರ ಪಟ್ಟು ಸೋಲುತ್ತಿದ್ದರೇನೋ. ಅಷ್ಟು ಚೆನ್ನಾಗಿ ಮಾಧುಸ್ವಾಮಿ, ಪರಿಸ್ಥಿತಿಯನ್ನ ನೋಡಿಕೊಂಡು ಮಾತನ್ನ ಆಡಿದ್ರು. ಅದರ ಫಲವಾಗಿ ಮಾಧುಸ್ವಾಮಿ ಇವತ್ತು ಮಂತ್ರಿಯಾಗಿದ್ದಾರೆ. ಅಲ್ಲದೆ, ಬಿಎಸ್​ವೈ ಆಪ್ತರು, ಲಿಂಗಾಯತರು ಅನ್ನೋ ಕಾರಣ ಜೊತೆಗೆ ತುಮಕೂರನ್ನ ಪ್ರತಿನಿಧಿಯಾಗಿ ಮಾಧುಸ್ವಾಮಿ ಮಿನಿಸ್ಟರ್​ ಆಗಿದ್ದಾರೆ.

Advertisement

ವಿ.ಸೋಮಣ್ಣ : ಐದು ಬಾರಿ ಶಾಸಕರಾಗಿರೋ ವಿ.ಸೋಮಣ್ಣ ಮೇಲೆ ಹೈಕಮಾಂಡ್​ ಜೊತೆಗೆ ಹಲವು ಮಠಗಳ ಪ್ರಭಾವವಿದೆ. ಇದೇ ಕಾರಣಕ್ಕೆ ವಿ.ಸೋಮಣ್ಣ ಆಯ್ಕೆ ನಡೆದಿದೆ. ಯಡಿಯೂರಪ್ಪ ಜೊತೆ ಈಗ ಅಷ್ಟಕ್ಕೆ ಅಷ್ಟೇ ಆಗಿದ್ರೂ, ಸಂತೋಷ್​ ಜೊತೆ ಚೆನ್ನಾಗಿದ್ದಾರೆ. ಮೈಸೂರು ಭಾಗದಲ್ಲಿ ಲಿಂಗಾಯತ ಲೀಡರ್​. ಹೀಗಾಗಿ ಸೋಮಣ್ಣ ಆಯ್ಕೆಯಾಗಿದ್ದಾರೆ.

ಲಕ್ಷ್ಮಣ ಸವದಿ. ಶಾಸಕರು ಅಲ್ಲದೇ ಇದ್ರೂ, ಲಕ್ಷ್ಮಣ ಸವದಿ ಮಿನಿಸ್ಟರ್ ಆಗಿದ್ದೇ ಅಚ್ಚರಿ. ಇದಕ್ಕೆ ಬೆಳಗಾವಿ ಬೇಗುದಿ ಕಾರಣ ಎನ್ನಲಾಗ್ತಿದೆ. ಲಿಂಗಾಯತ ಲೀಡರ್ ಅನ್ನೋ ಜೊತೆಗೆ ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿದ್ರು. ಉಮೇಶ್​ ಕತ್ತಿಗೆ ಸ್ಥಾನ ತಪ್ಪಿಸಿ, ಸವದಿಗೆ ನೀಡಿದ್ದಾರೆ.

ಸಿ.ಸಿ.ಪಾಟೀಲ್​. ಇವರು ಕೂಡ ಲಿಂಗಾಯತ ಲೀಡರ್. ಯಡಿಯೂರಪ್ಪ ಆಪ್ತ. ಸವದಿಗೂ ಆಪ್ತರು. ಕೊನೇ ಕ್ಷಣದವರೆಗೆ ಇವರೇ ಹೆಸರೇ ಪಟ್ಟಿಯಲ್ಲಿ ಇರಲಿಲ್ಲ. ಆದ್ರೂ, ಮಿನಿಸ್ಟರ್ ಆಗಿದ್ದು ಎಲ್ಲರಿಗೂ ಶಾಕ್​ ಕೊಡ್ತು.

ಶಶಿಕಲಾ ಜೊಲ್ಲೆ : ಹಿರಿಯೂರು ಶಾಸಕಿ, ಪೂರ್ಣಿಮಾಗೆ ಯಾದವ ಸಮುದಾಯದ ಪ್ರತಿನಿಧಿಯಾಗಿ ಮಿನಿಸ್ಟರ್​ ಆಗೋ ಚಾನ್ಸ್​ ಇತ್ತು. ಆದ್ರೆ, ಜೊಲ್ಲೆ ಮೂರು ಬಾರಿ ಶಾಸಕಿಯಾಗಿರೋದ್ರಿಂದ ಸಚಿವ ಸ್ಥಾನ ಒಲಿದಿದೆ.

ಒಟ್ಟಿನಲ್ಲಿ ಯಡಿಯೂರಪ್ಪ ಸಂಪುಟದಲ್ಲಿ ಒಟ್ಟು, ಬಿಎಸ್​ವೈ ಸೇರಿ 18 ಮಂದಿ ಇದ್ದಾರೆ. ಇದ್ರಲ್ಲಿ 8 ಮಂದಿ ಲಿಂಗಾಯತರೇ ಇರೋದು ಹಲವು ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ನ್ಯಾಯ ಸಿಕ್ಕಿಲ್ಲ ಅನ್ನೋ ಅಸಮಾಧಾನ ಸದ್ಯ ಪಕ್ಷದಲ್ಲಿ ಶುರುವಾಗಿದೆ.

Advertisement

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ