Connect with us

Featured

ಯಡಿಯೂರಪ್ಪ ಕಟ್ಟಿಹಾಕಲು ಮೂವರಿಗೆ ಡಿಸಿಎಂ ಪಟ್ಟ..! ಬಿಎಸ್​​ವೈ ವರ್ಸಸ್​​ ಸಂತೋಷ್​​ ಕಿತ್ತಾಟ ಶುರುವಾಯ್ತಾ..?

ಬೆಂಗಳೂರು/ನವದೆಹಲಿ : ಇದೊಂದು ರೀತಿ ಕೋಲು ಮುರೀಬಾರದು, ಹಾವು ಸಾಯಬಾರದು ಅನ್ನೋ ಲೆಕ್ಕಾಚಾರದಂತೆ ಕಾಣ್ತಿದೆ. ಒಂದು ಕಡೆ ಯಡಿಯೂರಪ್ಪಗೆ ಅಧಿಕಾರ ಕೊಟ್ಟಂತೆ ಇರಬೇಕು. ಮತ್ತೊಂದು ಕಡೆ ಯಡಿಯೂರಪ್ಪ ಅವರನ್ನ ಕಟ್ಟಿಹಾಕಬೇಕು. ಬಿಜೆಪಿಯ ಹೈಕಮಾಂಡ್​ ಲೆಕ್ಕಾಚಾರದಿಂದ ರಾಜ್ಯದ ಜನತೆ ಇನ್ನೂ ಏನೇನು ನೋಡಬೇಕೋ ಈ ಕಣ್ಣಲ್ಲಿ..

ಹೌದು, ಈ ರೀತಿ ಹೇಳೋದಕ್ಕೆ ಕಾರಣಗಳು ಸಾಕಷ್ಟಿವೆ. ಬಿಜೆಪಿ ಸರ್ಕಾರ ರಚನೆ ಆಗಿ ಒಂದು ತಿಂಗಳೇ ಕಳೆಯಿತು. 17 ಮಂದಿ ಸಚಿವರಾಗಿ, ಈಗ ಖಾತೆಗಳ ಹಂಚಿಕೆ ಏನೋ ಆಯ್ತು. ಆದ್ರೆ, ಉಪಮುಖ್ಯಮಂತ್ರಿ ಸ್ಥಾನ ಅಗತ್ಯ ಏನಿತ್ತು ಅನ್ನೋ ಚರ್ಚೆ ಶುರುವಾಗಿದೆ. ಬಹುತೇಕರು ಇದು ಸಾಮಾಜಿಕ ನ್ಯಾಯ ಅನ್ನೋ ಮಾತನ್ನ ಆಡ್ತಿದ್ದಾರೆ. ಒಬ್ಬ ನಾಯಕನನ್ನ ಕಟ್ಟಿ ಹಾಕಲು ಬಳಸಿದ ತಂತ್ರ, ಷಡ್ಯಂತ್ರ ಅಂದ್ರೆ ಮಾತ್ರ ಇದಕ್ಕೆ ಸೂಕ್ತವಾದ ಪದ ಆಗುತ್ತೆ.

ಯಡಿಯೂರಪ್ಪ ರಾಜ್ಯ ಬಿಜೆಪಿಯಲ್ಲಿ ಪ್ರಶ್ನಾತೀತ ನಾಯಕ ಅನ್ನೋದರಲ್ಲಿ ಎರಡು ಮಾತಿಲ್ಲ. ಆದ್ರೆ, ಅದ್ಯಾಕೋ ಏನೋ, ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರ ಮಾತನ್ನ ಕೇಳಲು ರೆಡಿಯಾಗಿಲ್ಲ. ಈ ಹಿಂದೆ ಅನಂತ್ ಕುಮಾರ್​ ವರ್ಸಸ್​ ಯಡಿಯೂರಪ್ಪ ಎಂಬಂತೆ ಬಿಜೆಪಿಯಲ್ಲಿ ವಾತಾವರಣ ಇತ್ತು. ಅನಂತ್ ಕುಮಾರ್ ದೆಹಲಿ ರಾಜಕಾರಣದಲ್ಲೇ ಇದ್ದರೂ, ರಾಜ್ಯ ರಾಜಕೀಯದಲ್ಲಿ ತನ್ನದೇ ಆದ ಪ್ರಭಾವವನ್ನ ಹೊಂದಿದ್ದರು. ಅದೇ ರೀತಿ ಈಗ ಯಡಿಯೂರಪ್ಪ ವರ್ಸಸ್ ಸಂತೋಷ್​ ಆಗಿ ಮಾರ್ಪಟ್ಟಿದೆ ಅಷ್ಟೆ..

ಯಡಿಯೂರಪ್ಪ ವರ್ಸಸ್​ ಸಂತೋಷ್​..!

Advertisement

ನಾವ್ ಹೇಳ್ತಿರೋದು ಅಕ್ಷರಶಃ ನಿಜ.. ಇಲ್ಲಿ ಸ್ವಪ್ರತಿಷ್ಠೆಯಿಂದಾಗಿ ರಾಜ್ಯದ ಹಿತ ಹಾಗೂ ಪಕ್ಷದ ಹಿತ ಎರಡೂ ಹಾಳಾಗೋದ್ರಲ್ಲಿ ಸಂಶಯವೇ ಇಲ್ಲ. ಯಾಕಪ್ಪ ಅಂದ್ರೆ, ಸಂತೋಷ್​​ ರಾಷ್ಟ್ರೀಯ ಸ್ಥಾನಮಾನ ಹೊಂದಿದ್ದರೂ, ರಾಜ್ಯ ರಾಜಕೀಯಕ್ಕೆ ಬರಲು ಸೂಕ್ತ ಸಮಯದ ಹುಡುಕಾಟದಲ್ಲಿ ಇದ್ದಾರೆ. ಇದಕ್ಕೆ ಆರ್​ಎಸ್​ಎಸ್​ ಕೂಡ ಬೆಂಬಲವಾಗಿ ನಿಂತಿದೆ. ಆದ್ರೆ, ಸಂತೋಷ್​ಗೆ ಅಡ್ಡಿಯಾಗಿರೋದು ಯಡಿಯೂರಪ್ಪ ಅಂಡ್ ಟೀಮ್​.. ಹೀಗಾಗಿಯೇ ಒಬ್ಬೊಬ್ಬರನ್ನೇ ಮಟ್ಟ ಹಾಕಬೇಕು ಅಂತ ನಿರ್ಧರಿಸಿರೋ ಸಂತೋಷ್​, ಒಬ್ಬೊಬ್ಬರನ್ನೇ ಕಟ್ಟಿ ಹಾಕಿಕೊಂಡು ಬರ್ತಿದ್ದಾರೆ.

ಮೂವರು ಡಿಸಿಎಂ ಬೇಕಿತ್ತಾ..?

ಗೋವಿಂದ ಕಾರಜೋಳ, ಡಾ.ಅಶ್ವತ್ಥ ನಾರಾಯಣ ಹಾಗೂ ಲಕ್ಷ್ಮಣ ಸವದಿ.. ಮೂವರನ್ನೂ ಉಪ ಮುಖ್ಯಮಂತ್ರಿಯಾಗಿ ಘೋಷಣೆ ಮಾಡಲಾಗಿದೆ. ಆದ್ರೆ, ಇದರ ಅವಶ್ಯಕತೆ ಏನಿತ್ತು ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ. ಇದರಿಂದ ಸಮಸ್ಯೆ ಉದ್ಭವವಾಗುತ್ತೋ ವಿನಾಃ, ಸಮಸ್ಯೆ ಪರಿಹಾರ ಆಗೋದಿಲ್ಲ. ಅಲ್ಲದೆ, ಹಿರಿಯ ನಾಯಕರನ್ನ ನಿರ್ಲಕ್ಷ್ಯ ಮಾಡಿದ ಆರೋಪ ಈಗಾಗಲೇ ಕೇಳಿ ಬರ್ತಿದೆ. ಆರ್.ಅಶೋಕ್​, ಜಗದೀಶ್​ ಶೆಟ್ಟರ್, ಈಶ್ವರಪ್ಪ, ಶ್ರೀರಾಮುಲು ಸೇರಿದಂತೆ ಹಲವರು ಡಿಸಿಎಂ ಆಗೋ ಕನಸು ಕಾಣ್ತಿದ್ರು. ಆದ್ರೆ, ಇವರ ಆಸೆಗೆ ತಣ್ಣೀರು ಹಾಕಲಾಗಿದೆ.

ಸದ್ಯ ಆಯ್ಕೆ ಮಾಡಿರೋ ಮೂವರು ಡಿಸಿಎಂಗಳು ಕೂಡ ಸಂತೋಷ್​ ಗ್ಯಾಂಗ್​​ನವರೇ ಆಗಿದ್ದಾರೆ. ಮೂವರು ಡಿಸಿಎಂ ಮಾಡಲು ಯಡಿಯೂರಪ್ಪ ಒಪ್ಪಿಗೆ ನೀಡಿಲ್ಲ. ಆದ್ರೆ, ಹೈಕಮಾಂಡ್ ಮಾತನ್ನ ಕೇಳಲೇಬೇಕಾದ ಅನಿವಾರ್ಯತೆಗೆ ಬಿಎಸ್​ವೈ ಸಿಲುಕಿದ್ದರಿಂದ, ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ಕೊಟ್ಟಿದ್ದಾರೆ. ಹೀಗೆ ಮುಂದುವರಿದ್ರೆ, ಯಡಿಯೂರಪ್ಪ ಸರ್ಕಾರ ಆರು ತಿಂಗಳು ಇರೋದು ಡೌಟು..

Advertisement
ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ