Featured
ಮೋದಿ ಬರ್ತಾರೆ, ವರದಿ ನೀಡ್ತೀನಿ, ಪರಿಹಾರದ ಹಣ ಬಿಡುಗಡೆಗೆ ಆಗುತ್ತೆ ತಡೀರಿ : ಸಿಎಂ

ಶಿವಮೊಗ್ಗ: ಕಾರವಾರಕ್ಕೆ ಹೊರಟಿದ್ದ ಸಿಎಂ ಯಡಿಯೂರಪ್ಪ ಹಾಗೂ ಸಚಿವ ಆರ್ ಅಶೋಕ್ ಮಾರ್ಗ ಮಧ್ಯದಲ್ಲಿ ಶಿವಮೊಗ್ಗ ಹೆಲಿಪ್ಯಾಡ್ ಲ್ಲಿ ಇಳಿದರು. ಹೆಲಿಕಾಪ್ಟರ್ ರಿಪ್ಯೂಯೆಲ್ಲಿಂಗ್ ( ತಾಂತ್ರಿಕ ನಿಲುಗಡೆ) ಮಾಡುವ ಸಮಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್ ಯಡಿಯೂರಪ್ಪ ಶಿವಮೊಗ್ಗದ ಸಮಗ್ರ ಅಭಿವೃದ್ಧಿಯ ಚಿತ್ರಣವನ್ನ ವಿವರಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣದಕ್ಕೆ ಮೂವತ್ತೊಂಬತ್ತು ಕೋಟಿ ಬಿಡುಗಡೆ ಮಾಡಿದ್ದೇನೆ, ಶೀಘ್ರದಲ್ಲಿ ಕೆಲಸ ಆರಂಭವಾಗಲಿದೆ, ಅತೀ ಹೆಚ್ಚು ಕೈಗಾರಿಕೆಗಳು ಇಲ್ಲಿಗೆ ಬರಲಿವೆ, ಹಳೇ ಜೈಲ್ ಆವರಣ ಸುಂದರ ಪಾರ್ಕ್ ಆಗಲಿದ್ದು, ಶಿವಮೊಗ್ಗ ಹೊರ ವರ್ತುಲ ರಸ್ತೆ ಅಭಿವೃದ್ಧಿಯಾಗಲಿದೆ ಎಂದರು. ಶಿವಮೊಗ್ಗದ ನೆರೆಹಾವಳಿ ಪ್ರದೇಶದಲ್ಲಿ ಅಧಿಕಾರಿಗಳು ಭೇಟಿ ನೀಡಿದ್ದು ಶೀಘ್ರದಲ್ಲೇ ವರದಿ ಸಲ್ಲಿಸಲಿದ್ದಾರೆ ಎಂದರು.
ಮೋದಿ ಬರ್ತಾರೆ ವರದಿ ಒಪ್ಪಿಸ್ತೀನಿ : ಸೆ.೮ ಹಾಗೂ ೯ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಲಿದ್ದು ವರದಿ ಸಿದ್ಧಪಡಿಸುತ್ತಿದ್ದೇವೆ, ರಾಜಭವನದಲ್ಲಿ ಒಂದು ಕಾರ್ಯಕ್ರಮ ಮಾಡಿ ವರದಿ ನೀಡಲು ತೀರ್ಮಾನಿಸಿದ್ದೇನೆ ಎಂದರು. ಯಾವುದೇ ಪರಿಹಾರದ ವಿಳಂಬ ಆಗಿಲ್ಲ, ಕೇಂದ್ರ ಸಮಿತಿ ವರದಿ ತೆಗೆದುಕೊಂಡು ಹೋಗಿದೆ, ಇದನ್ನ ಪರಿಶೀಲಿಸಿ ಹಣ ಬಿಡುಗಡೆ ಮಾಡಲಾಗುತ್ತೆ, ಸಾಕಷ್ಟು ರಾಜ್ಯದಲ್ಲಿ ನೆರೆ ಹಾವಳಿ ಇದೆ, ಆದರೂ ನಮಗೆ ಆಧ್ಯತೆ ನೀಡಿದ್ದಾರೆ ಎಂದರು.
ಈಶ್ವರಪ್ಪ ಜಿಲ್ಲಾ ಉಸ್ತುವಾರಿ ಸಚಿವ: ಕಾರವಾರ ಪ್ರವಾಸ ರದ್ದುಮಾಡಿದ ಸಿಎಂ, ಶಿವಮೊಗ್ಗದ ಜಿಪಂ ನಲ್ಲಿ ನಡೆಯುತ್ತಿದ್ದ ಸಭೆಗೆ ಭಾಗವಹಿಸಿ ಅಲ್ಲೇ ಇದ್ದ ಈಶ್ವರಪ್ಪನವರನ್ನ ಉಸ್ತುವಾರಿ ಸಚಿವ ಎಂದು ಘೋಷಣೆ ಮಾಡಿದರು. ಸಭೆ ಮುಗಿಸಿ ಹಾವೇರಿಗೆ ತೆರಳಿದರು.
You may like
ಬಿಜೆಪಿ-ಜೆಡಿಎಸ್ ಬೇರೆ ಅಲ್ಲ: ಬಿ.ಎಸ್.ಯಡಿಯೂರಪ್ಪ
ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದ ಲಕ್ಷ್ಮಣ ಸವದಿ
ಬಿಜೆಪಿಗೆ ‘ಒಬಿಸಿ’ ಶಾಕ್ : ಫಸ್ಟ್ ಲಿಸ್ಟ್ ಬೆನ್ನಲ್ಲೇ ಬಂಡಾಯ ಸ್ಫೋಟ!
BSY ಪುತ್ರನ ವಿರುದ್ಧ ಸ್ವತಃ ಈಶ್ವರಪ್ಪ ಸ್ಪರ್ಧೆಗೆ ಪ್ಲಾನ್…!
ನಾನು ಫೈಟರ್,ಯಾವುದೇ ಕ್ಷೇತ್ರ ಕೊಟ್ರು ಸ್ಫರ್ಧೆ ಮಾಡ್ತೀನಿ: ಶೋಭಾ ಕರಂದ್ಲಾಜೆ
ಶೋಭಾಗೆ ಟಿಕೆಟ್: ಬಿಎಸ್ ವೈ ಬೆಂಬಲ-ವಿ-ರಾಘಿಗಳ ಅಡ್ಡಗಾಲು