Connect with us

Featured

ಮೋದಿ ಆಳ್ವಿಕೆಯಲ್ಲಿ ಆರ್ಥಿಕ ಸ್ಥಿತಿ ಹಾಳಾಗಿದೆಯಾ..? ಮಹಾಪತನದ ಅಪಾಯ ಕಾದಿದೆಯಾ..? ಸತ್ಯಾಂಶ ಏನು..?

ನವದೆಹಲಿ : ಇಡೀ ದೇಶ ಈಗ ಭಾರತದ ಆರ್ಥಿಕತೆ ಬಗ್ಗೆ ಮಾತ್ನಾಡುತ್ತಿದೆ. ಜಿಡಿಪಿ ಪ್ರಮಾಣ ಇಂದೆಂದಿಗಿಂತಲೂ ಕುಸಿದಿದೆ, ಕುಸಿಯುತ್ತಿದೆ. ಜಾಗತಿಕ ಮಟ್ಟದಲ್ಲಿ ಭಾರತೀಯ ಆರ್ಥಿಕತೆ ಕುಸಿಯುತ್ತಲೇ ಇದೆ.. ನೂರಾರು ಕಂಪನಿಗಳು ಮುಚ್ಚುತ್ತಿವೆ. ಸಾವಿರಾರು ಉದ್ಯೋಗಗಳು ಕಡಿತಗೊಳ್ಳುತ್ತಿವೆ. ಲಕ್ಷಾಂತರ ಉದ್ಯೋಗಿಗಳು ಕೆಲಸ ಕಳೆದುಕೊಳ್ತಿದ್ದಾರೆ. ಇಷ್ಟಾದ್ರೂ ಪ್ರಧಾನಿ ನರೇಂದ್ರ ಮೋದಿ ಮಾತ್ರ ಈ ಬಗ್ಗೆ ಈವರೆಗೆ ಮಾತ್ನಾಡಿಲ್ಲ ಯಾಕೆ ಅನ್ನೋ ಪ್ರಶ್ನೆಗಳು ಕಾಡುತ್ತಿವೆ.

ಇದೆಲ್ಲವೂ ಒಂದು ಕಡೆಯಾದ್ರೆ, ಮತ್ತೊಂದು ವರ್ಗ ಏನೂ ಆಗಿಯೇ ಇಲ್ಲ ಅಂತ ವಾದ ಮಾಡ್ತಿದೆ. ಅದಕ್ಕೆ ಅವರದ್ದೇ ಆದ ಕೆಲವು ಉದಾಹರಣೆಗಳನ್ನ ಕೊಡುತ್ತಾ ಹೋಗ್ತಾರೆ..

ಮೋದಿ ಭಕ್ತರು ಕೊಡುವ ಉತ್ತರ

  1. ಜೆಟ್​ ಏರ್​ವೇಸ್​ ಮುಚ್ಚಿದ್ದು, ಆಡಳಿತ ಮಂಡಳಿಯ ವರ್ತನೆಯಿಂದಾಗಿ
  2. ಏರ್ ಇಂಡಿಯಾ ನಷ್ಟ ಅನುಭವಿಸಿದ್ದು ಈಗಲ್ಲ. ಅದು ಹುಟ್ಟಿದ್ದೇ ನಷ್ಟದಿಂದ.
  3. ಬಿಎಸ್​ಎನ್​​ಎಲ್​ನ 54 ಸಾವಿರ ಉದ್ಯೋಗಿಗಳು ಜಿಯೋಗೆ ಬದಲಾವಣೆಯಾದರು. ಇದು ಉದ್ಯೋಗ ಬದಲಾವಣೆಯೇ ಹೊರೆತು, ನಿರುದ್ಯೋಗವಲ್ಲ
  4. ಟಯೋಟಾ ಅತೀ ಹೆಚ್ಚು ವಾಹನಗಳನ್ನ ಮಾರಾಟ ಮಾಡಿದೆ. ಎಂಜಿ, ಕಿಯಾ ಕಂಪನಿಗಳು ಭಾರತ ಪ್ರವೇಶಿಸಿವೆ. ಮಾರುತಿ, ಟಾಟಾ ನಷ್ಟ ಅನುಭವಿಸ್ತಿರೋದು ಅವರ ಗುಣಮಟ್ಟದಿಂದ. ಈಗಲೂ ಕಾರುಗಳ ವೇಯ್ಟಿಂಗ್​ ಟೈಮ್​​ 6 ರಿಂದ 8 ತಿಂಗಳು ಇದೆ.
  5. ಏರ್​​ಸೆಲ್​ 2013ರಲ್ಲಿ ಮುಚ್ಚಿತ್ತು
  6. ಜೆಪಿ ಗ್ರೂಪ್​ 2014ರಲ್ಲೇ ಕಣ್ಮರೆಯಾಯ್ತು

ಹೀಗೆ, ಮೋದಿಯನ್ನ ಹಾಗೂ ಬಿಜೆಪಿಯನ್ನು ಬೆಂಬಲಿಸುವ ಕೆಲವರು ಈ ರೀತಿಯ ವಿಶ್ಲೇಷಣೆ ಮಾಡ್ತಿದ್ದಾರೆ. ಮತ್ತೊಂದು ವರ್ಷ ಇದಕ್ಕೆ ತದ್ವಿರುದ್ಧವಾದ ಅಂಕಿ ಅಂಶಗಳನ್ನ ನೀಡ್ತಿದ್ದಾರೆ.

ಯಾವುದನ್ನ ನಂಬಬೇಕು..? ಮಹಾಪತನದ ಅಪಾಯ ಇದೆಯಾ..?

Advertisement

ಯಾರು ಏನೇ ಹೇಳಿದರೂ, ಆರ್ಥಿಕ ತಜ್ಞರ ಮಾತುಗಳನ್ನ ನಂಬಲೇ ಬೇಕು. ಬಹಳಷ್ಟು ಆರ್ಥಿಕ ವಿಶ್ಲೇಷಕರು ಸದ್ಯದ ಆರ್ಥಿಕತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮೋದಿ ಅಭಿಮಾನಿಗಳು ಅಥವಾ ಭಕ್ತರು ತಮಗೆ ಹೇಗೆ ಬೇಕೋ ಹಾಗೇ, ವಾದ ಹಾಗೂ ಚಿಂತನೆಗಳನ್ನ ಮಂಡಿಸ್ತಾರೆ. ಇದರಲ್ಲಿ ಹೊಸದೇನೂ ಇಲ್ಲ. ಆದ್ರೆ, ವಾಸ್ತವದ ಅರಿವು ಎಲ್ಲರಿಗೂ ಆಗಬೇಕಿದೆ.

ಒಂದೆಡೆ ಜಾಗತೀಕ ಮಟ್ಟದಲ್ಲಿ ಭಾರತದ ಆರ್ಥಿಕತೆ ಕುಸಿಯುತ್ತಿದೆ. ಮತ್ತೊಂದೆಡೆ ಕೆಲವು ಕಂಪನಿಗಳು ವಿದೇಶಿ ಬಂಡವಾಳವನ್ನೇ ಹಿಂದಕ್ಕೆ ಪಡೆದಿದ್ದಾರೆ. ನಿರುದ್ಯೋಗ ಹೆಚ್ಚಾಗುತ್ತಿದ್ದು, ಉತ್ಪಾದನೆ ವಲಯ ಕೂಡ ಸಾಕಷ್ಟು ತೊಂದರೆ ಅನುಭವಿಸಿದೆ. ಕೃಷಿ ಚಟುವಟಿಕೆಯಲ್ಲಿ ಉತ್ಪಾದನೆ ಕಡಿಮೆ ಆಗ್ತಿರೋದು ಕೂಡ ಕಳವಳಕ್ಕೆ ಕಾರಣವಾಗಿದೆ.

ಆರ್​ಬಿಐ ಕಳೆದ ಒಂದು ವರ್ಷದಲ್ಲೇ ನಾಲ್ಕು ಬಾರಿ ರೆಪೋ ದರವನ್ನ ಕಡಿತ ಮಾಡಿದೆ. ಬಹುಶಃ ಆರ್​ಬಿಐ ಇತಿಹಾಸದಲ್ಲೇ ಇದು ದಾಖಲೆ ಅಂದ್ರೆ, ತಪ್ಪಲ್ಲ. ಬ್ಯಾಂಕ್​ಗಳು ಕೂಡ ಬಡ್ಡಿ ದರವನ್ನ ಕಡಿತ ಮಾಡಿವೆ. ಆದ್ರೆ, ಉತ್ಪಾದನೆ ವಲಯ ಮಾತ್ರ ಚೇತರಿಕೆ ಕಾಣ್ತಿಲ್ಲ. ಹೀಗಾಗಿ, ಮುಂಬರುವ ದಿನಗಳು ಕಷ್ಟದಿಂದ ಕೂಡಿವೆ ಅನ್ನೋದು ಬಹುತೇಕ ಆರ್ಥಿಕ ತಜ್ಞರ ವಾದ.

ಎನ್​ಡಿಎ ಸರ್ಕಾರ ಎರಡನೇ ಅವಧಿಗೆ ಬಂದು ಇನ್ನೂ ಮೂರು ತಿಂಗಳಷ್ಟೇ ಆಗಿದೆ. ನೋಡೋಣ, ಮುಂಬರುವ ದಿನಗಳಲ್ಲಿ ಮೋದಿ ಸರ್ಕಾರ ಯಾವೆಲ್ಲಾ ಕ್ರಮಗಳನ್ನ ಕೈಗೊಳ್ಳುತ್ತೆ.? ಆರ್ಥಿಕ ಮಹಾಪತನದಿಂದ ಭಾರತವನ್ನ ಹೇಗೆ ಕಾಪಾಡ್ತಾರೆ ಅನ್ನೋದನ್ನ ಕಾದುನೋಡೋಣ.

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ