Featured
ಮೊಳಕೆ ಹುರಳಿಕಾಳು ಮತ್ತು ದಂಟುಸೊಪ್ಪಿನ ಬಸ್ಸಾರು ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು
ಮೊಳಕೆ ಕಟ್ಟಿದ ಹುರಳಿಕಾಳು – 1ಕಪ್
ದಂಟಿನ ಸೊಪ್ಪು – 2 ಕಟ್ಟು
ಜೀರಿಗೆ – 1 ಚಮಚ
ಒಣ ಮೆಣಸಿನಕಾಯಿ – ¼ ಗಿಟುಕು
ಕೆಂಪು ಮೆಣಸಿನಕಾಯಿ – 6
ಟೊಮೊಟೋ – 1
ಹುಣಸೆ ರಸ – 1 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಸಾರಿನ ಪುಡಿ – 2 ವಮವ
ಎಣ್ಣೆ – 4 ಚಮಚ
ಸಾಸಿವೆ – 1 ಚಮಚ
ಕರಿಬೇವು – 2 ಎಸಳು
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ : ಮೊದಲು ಸೊಪ್ಪನ್ನು ಬಿಡಿಸಿ ಚೆನ್ನಾಗಿ ತೊಳೆದು ಚಿಕ್ಕದಾಗಿ ಕತ್ತರಿಸಿಕೊಳ್ಳಿ . ಕುಕ್ಕರಿನಲ್ಲಿ ಮೊಳಕೆ ಬಂದ ಹುರಳಿಕಾಳು, ನೀರು ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಅನಂತರ ಒಂದು ಪಾತ್ರೆಯಲ್ಲಿ ಚಿಕ್ಕದಾಗಿ ಕತ್ತರಿಸಿದ ದಂಟಿನ ಸೊಪ್ಪನ್ನು ಹಾಕಿ ಬೇಯಿಸಿ. ಬೆಂದ ಹುರಳಿಕಾಳು ಮತ್ತು ಸೊಪ್ಪನ್ನು ಒಂದು ಜಾರಿಗೆ ಹಾಕಿ ಸೋದಿಸಿಕೊಳ್ಳಿ.
ಸಾರಿಗೆ ರುಬ್ಬಿಕೊಳ್ಳಲು : ಒಂದು ಚಿಕ್ಕ ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ಅದಕ್ಕೆ ಜೀರಿಗೆ, ತೆಂಗಿನಕಾಯಿ ತುರಿ, ಟೊಮೊಟೋ, ಕೊತ್ತಂಬರಿ ಸೊಪ್ಪು, ಹುಣಸೆ ರಸ, ಸಾರಿನ ಪುಡಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಅದನ್ನು ಸಾರು ಬಸಿದ ನೀರಿಗೆ ಹಾಕಿ ಚೆನ್ನಾಗಿ ಕಲಸಿ, ಅದಕ್ಕೆ ಸಾಸಿವೆ, ಕರಿಬೇವಿನ ಒಗ್ಗರಣೆಯನ್ನು ಹಾಕಿ ಇಳಿಸಿ .
ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿಮಾಡಿ. ಅದಕ್ಕೆ ಸಾಸಿವೆ, ಕರಿಬೇವು, ಕೆಂಪು ಮೆನಸಿನಕಾಯಿ ಹಾಕಿ ಬಾಡಿಸಿ. ಅನಂತರ ಬೇಯಿಸಿದ ಕಾಳು ಮತ್ತು ಸೊಪ್ಪನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಬೆರೆಸಿ ಬೇಯಿಸಿ. ಅದಕ್ಕೆ ತುರಿದಿರುವ ಹಸಿ ತೆಂಗಿನಕಾಯಿ ತುರಿ ಹಾಕಿ ಇಳಿಸಿ. ಇದು ರಾಗಿ ಮುದ್ದೆ ಮತ್ತು ಅನ್ನಕ್ಕೆ ಚೆನ್ನಾಗಿ ಹೊಂದುತ್ತದೆ .
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?