Featured
ಮಿನಿಸ್ಟರ್ ಆದ್ಮೇಲೆ ಮಾಧುಸ್ವಾಮಿಗೆ ಏನಾಗಿದೆ.? ಯಾಕಿಂಗ್ ಮಾತಾಡ್ತೀರಾ ಸ್ವಾಮಿ..?

ತುಮಕೂರು : ಸಮ್ಮಿಶ್ರ ಸರ್ಕಾರ ಇದ್ದಾಗ, ಯಡಿಯೂರಪ್ಪ ಅವರನ್ನ ಬಚಾವ್ ಮಾಡಿದ್ದೇ ಮಾಧುಸ್ವಾಮಿ ಮಾತು. ಅಷ್ಟೊಂದು ವಾಗ್ಮಿಯಾಗಿ, ಎಲ್ಲವನ್ನೂ ನಿಭಾಯಿಸಿದ್ರು. ಹೀಗಾಗಿಯೇ ಅವರಿಗೆ ಮಂತ್ರಿ ಪದವಿ ಸಿಕ್ತು ಅಂದ್ರೆ ತಪ್ಪಲ್ಲ. ಆದ್ರೆ, ಅದ್ಯಾಕೋ ಏನೋ ಮಂತ್ರಿ ಆದ್ಮೇಲೆ ಬಾಯಿಗೆ ಬಂದಂತೆ ಮಾತನಾಡ್ತಿದ್ದಾರೆ ಅನ್ನೋ ಮಾತು ಈಗ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಯಾಕಂದ್ರೆ, ಮಾಧುಸ್ವಾಮಿ, ಲಕ್ಷ್ಮಣ ಸವದಿ ಬಗ್ಗೆ ಮಾತನಾಡುತ್ತಿರೋ ರೀತಿಯೇ ಇದಕ್ಕೆ ಕಾರಣ.
ಮತ್ತೊಮ್ಮೆ ಡಿಸಿಎಂ ಲಕ್ಷ್ಮಣ ಸವದಿ ಪರವಾಗಿ ಬ್ಯಾಟ್ ಬೀಸಿದ್ದಾರೆ ಮಾಧುಸ್ವಾಮಿ. ವಿಧಾನಸೌಧದಲ್ಲಿ ವೀಡಿಯೋ ನೋಡಿದ್ದು ಆಕಸ್ಮಿಕ. ಅವರು ನೋಡಿದ್ದು ತಪ್ಪೇ, ಆದ್ರೆ ಅನರ್ಹ ಮಾಡುವಂತದ್ದು, ಮಂತ್ರಿ ಆಗಬಾರದು ಅನ್ನುವಂತದ್ದು, ದೇಶದ್ರೋಹ ಅನ್ನುವಂತದ್ದು ಸರಿಯಲ್ಲ ಎಂದಿದ್ದಾರೆ. ಆ ವಿಚಾರವಾಗಿ ಲಕ್ಷ್ಮಣ ಸವದಿಗೆ ಛಿಮಾರಿ ಆಗಿದೆ, ಎಲ್ಲಾ ಆಗಿದೆ ಅದನ್ನ ಅಲ್ಲಿಗೆ ಬಿಡ್ಬೇಕು ಎಂದಿದ್ದಾರೆ.
ಅದನ್ನೇ ಸಿದ್ದರಾಮಯ್ಯನವರು ದೊಡ್ಡದು ಮಾಡ್ಕೊಂಡೋದ್ರೆ ಹೇಗೆ. ಹಾಗಾದ್ರೆ ಸಿದ್ದರಾಮಯ್ಯನವರು ವಿಧಾನಸೌಧದ ಬಾಗಿಲು ಒದ್ದಿದ್ರು. ಆಗಿನ ಕಮಿಷನರ್ ಶಂಕರ್ ಬಿದರಿ ಅವರ ಕಾಲರ್ ಗೆ ಕೈ ಹಾಕಿದ್ರು. ಹಾಗಂತೆ ಅವ್ರು ಸಿಎಂ ಆಗ್ಲೇ ಇಲ್ವಾ. ವಿಧಾನಸೌಧದ ಡೋರ್ ಒದ್ರು. ನಾವೆಲ್ಲಾ ದೇವಸ್ಥಾನ ಅಂತ ಒಳಗೋಗ್ತಿವಿ ಅದ್ರ ಬಗ್ಗೆ ನಾವು ಟೀಕೆ ಮಾಡಿದ್ವಾ ಎಂದು ಸಿದ್ದುರನ್ನ ಪ್ರಶ್ನೆ ಮಾಡಿ, ಸವದಿಯನ್ನ ಸಮರ್ಥನೆ ಮಾಡಿಕೊಂಡಿದ್ದಾರೆ.
ಅವೆಲ್ಲಾ ಒಂದೊಂದು ಗಳಿಗೆ ಬಿಟ್ಬಿಡ್ಬೇಕು. ನಾನೂ ಯಾವುದೋ ಸಮಯದಲ್ಲಿ ಪೋಲಿಸರ ಮೇಲೆ ಬಿದ್ದಿದ್ದಿನಿ. ಹಾಗಂತ ನನ್ನನೇಕೆ ಮಂತ್ರಿ ಮಾಡಿದ್ದು ಅಂತ ಕೇಳೋದು ಸರಿಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು, ಮನಮೋನ್ ಸಿಂಗ್ ಕೂಡಾ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿರ್ಲಿಲ್ಲ. ಅವರೂ 10 ವರ್ಷ ಪ್ರೈಮ್ ಮಿನಿಸ್ಟರ್ ಆದ್ರು. ಇದಕ್ಕೆ ಸಿದ್ದರಾಮಯ್ಯನವರು ಉತ್ತರ ಹೇಳ್ಬೇಕು ಎಂದು ಸವದಿ ಸೋತರೂ ಮಿನಿಸ್ಟರ್ ಅನ್ನೋ ವಿಚಾರವಾಗಿ ಪ್ರಶ್ನೆ ಹಾಕಿದ್ರು.
ಇನ್ನು, ಮೊನ್ನೆಯಷ್ಟೇ ಸವಸಿ ಸದನದಲ್ಲಿ ವಿಡಿಯೋ ನೋಡಿದ್ದು ತಪ್ಪಲ್ಲ ಅಂತ ಮಾಧುಸ್ವಾಮಿ ಹೇಳಿದ್ದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?