Featured
ಮಳೆ ಅಬ್ಬರಕ್ಕೆ ಚಾರ್ಮಾಡಿ ಮತ್ತು ಶಿರಾಡಿ ಎರಡೂ ಘಾಟ್ ರಸ್ತೆ ಬಂದ್ : ಪ್ರಯಾಣಿಕರ ಪರದಾಟ

ಚಿಕ್ಕಮಗಳೂರು/ಮಂಗಳೂರು : ರಾಜ್ಯ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭರ್ಜರಿ ಮಳೆಯಾಗ್ತಿದೆ. ಕಳೆದ ಒಂದು ವಾರದಿಂದ ಬಿಟ್ಟುಬಿಡದೇ ವರುಣನ ಆರ್ಭಟ ಜೋರಾಗಿಯೇ ಇದೆ. ಇದರಿಂದಾಗಿ ಗುಡ್ಡಗಳು ಕುರಿಯುತ್ತಿದ್ದು, ಹಲವೆಡೆ ರಸ್ತೆಗಳು ಬಂದ್ ಆಗಿವೆ. ಅದರಲ್ಲೂ ಚಾರ್ಮಾಡಿ ಹಾಗೂ ಶಿರಾಡಿ ಘಾಟ್ ರಸ್ತೆಗಳು ಕಳೆದ ಎರಡು ದಿನಗಳಿಂದ ಬಂದ್ ಆಗಿದ್ದು, ಮತ್ತಷ್ಟು ದಿನ ಚಾರ್ಮಾಡಿ ಮತ್ತು ಶಿರಾಡಿ ಘಾಟ್ ರಸ್ತೆಗಳು ಬಂದ್ ಆಗಲಿವೆ
ಚಾರ್ಮಾಡಿ ಘಾಟ್ ಮಾರ್ಗ ಬಂದ್ ಆಗಿರೋದ್ರಿಂದ ಚಿಕ್ಕಮಗಳೂರು-ದಕ್ಷಿಣ ಕನ್ನಡ -ಧರ್ಮಸ್ಥಳ ಸಂಪರ್ಕ ಕಡಿತಗೊಂಡಿದೆ. ರಸ್ತೆಗೆ ಗುಡ್ಡಗಳು ಕುಸಿಯುತ್ತಿರೋದ್ರಿಂದ ಮಾರ್ಗ ಬಂದ್ ಮಾಡಲಾಗಿದೆ. ರಸ್ತೆಯಲ್ಲಿ ಬಿದ್ದಿರೋ ಮಣ್ಣು ತೆಗೆಯೋ ಕೆಲಸ ನಿರಂತರವಾಗಿ ಸಾಗಿದೆ. ಎರಡು ದಿನಗಳಲ್ಲಿ ಜೆಸಿಬಿ ಯಂತ್ರಗಳಲ್ಲಿ ಮಣ್ಣು ತೆಗೆಯುತ್ತಿದ್ದರು, ಮತ್ತೆ ಮತ್ತೆ ಬೀಳುತ್ತಿದೆ. ಜೊತೆಗೆ ಅಲ್ಲಲ್ಲಿ ಮರಗಳು ಕೂಡ ಉರುಳಿ ಬೀಳುತ್ತಿದ್ದು, ಸಂಚಾರ ಸಾಧ್ಯವಾಗ್ತಿಲ್ಲ.
ಇತ್ತ ಶಿರಾಡಿ ಘಾಟ್ನಲ್ಲೂ ಇದೆ ಸಮಸ್ಯೆ ಎದುರಾಗಿ. ಪದೇ ಪದೇ ಮಣ್ಣು ಕುಸಿಯುತ್ತಿದ್ದು, ರಸ್ತೆ ಮೇಲೆ ಕಲ್ಲುಗಳು ಬೀಳುತ್ತಿವೆ. ಇದರಿಂದ ವಾಹನಗಳು ಏನಾದ್ರೂ ಸಂಚಾರ ಮಾಡಿದ್ರೆ, ವಾಹನಗಳ ಮೇಲೂ ಕಲ್ಲು-ಗುಡ್ಡ ಬೀಳುವ ಸಾಧ್ಯತೆ ಇದೆ. ಹೀಗಾಗಿ, ಶಿರಾಡಿ ಘಾಟ್ ಮಾರ್ಗವನ್ನೂ ಬಂದ್ ಮಾಡಲಾಗಿದೆ. ಇದರಿಂದಾಗಿ ಹಾಸನ-ಮಂಗಳೂರು-ಧರ್ಮಸ್ಥಳ ಮಾರ್ಗ ಬಂದ್ ಆಗಿದೆ.
ಮಳೆ ಹೀಗಿಯೇ ಮುಂದುವರಿದ್ರೆ, ಮತ್ತಷ್ಟು ದಿನ ಶಿರಾಡಿ ಮತ್ತು ಚಾರ್ಮಾಡಿ ಎರಡೂ ಮಾರ್ಗಗಳು ಬಂದ್ ಮಾಡದೇ ವಿಧಿಯೇ ಇಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
For more updates News Please Visit : www.risingkannada.com
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?