Featured
ಭಿಕ್ಷಾಟನೆ ಮಾಡುತ್ತಿದ್ದ ಮಹಿಳೆ ಈಗ ಸಿಂಗರ್, ಆಗ ಇಲ್ಲದ ಸಂಬಂಧಿಕರು ಈಗ ಬಂದರು

ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದ ರಾಣಾಘಾಟ್ ರೈಲ್ವೇ ನಿಲ್ದಾಣದಲ್ಲಿ ಭಿಕ್ಷಾಟನೆ ಮಾಡುತ್ತಾ ಲತಾ ಮಂಗೇಶ್ಕರ್ ಅವರ ಹಾಡನ್ನ ಹಾಡ್ತಿದ್ದ ರಾಣು ಮೊಂಡಲ್ ಎಂಬ ಮಹಿಳೆ ಜಗತ್ತು ತನ್ನನ್ನ ಗುರುತಿಸುತ್ತೆ ಎಂದು ಕೊಂಡಿರಲಿಲ್ಲ, ಅಶ್ಚರ್ಯ ಎನ್ನುವ ರೀತಿ ಈಗ ಆಕೆ ದೇಶಾದ್ಯಂತ ಪ್ರಸಿದ್ಧಿ ಪಡೆದಿದ್ದಾಳೆ.
ರಾಣು ಮೊಂಡಲ್, ಲತಾ ಮಂಗೇಶ್ಕರ್ ಹಾಡಿದ್ದ ಏಕ್ ಪ್ಯಾರ್ ಕಾ ನಗ್ಮಾ ಹೈ ಹಾಡನ್ನ ರೈಲ್ವೇ ಸ್ಟೇಷನ್ ನಲ್ಲಿ ಹಾಡುತ್ತಾ ಅಲೆದಾಡುತ್ತಿರುವಾಗ ಪ್ರಯಾಣಿಕರೊಬ್ಬರು ಮಾತನಾಡಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು, ಆಕೆಯ ಹಾಡಿಗೆ ಮಾರುಹೋದಾತ ಅಧ್ಭುತ ಕಂಠ ಎಂದು ಬರೆದುಕೊಂಡಿದ್ದ. ನೋಡು ನೋಡುತ್ತಲೇ ಆ ವಿಡಿಯೋ ಲಕ್ಷಾಂತರ ಮಂದಿ ಜನರನ್ನ ತಲುಪಿತು. ಈಗ ಆಕೆಯನ್ನ ಟಿವಿ ಚಾನೆಲ್ಗಳು ಹುಡುಕತೊಡಗಿದವು, ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಈಕೆ ರಾತ್ರೋರಾತ್ರಿ ಸ್ಟಾರ್ ಆದಳು.
ಮಧ್ಯ ವಯಸ್ಸಿನ ರಾಣು ಮೊಂಡಲ್ ಸೂಪರ್ ಸಿಂಗರ್ ಕಾರ್ಯಕ್ರಮಕ್ಕೆ ಬಂದಾಗ ಇಡೀ ದೇಶವೇ ಬೆರಗಾಯಿತು. ಬಾಲಿವುಡ್ನ ಖ್ಯಾತ ಸಂಗೀತ ನಿರ್ದೇಶಕ ಹಿಮೇಶ್ ರೆಶಮಿಯಾ ತಮ್ಮ ಮುಂದಿನ ಸಿನಿಮಾಕ್ಕೆ ಈಕೆಯನ್ನ ಸಿಂಗರ್ ಮಾಡುವುದಾಗಿ ಘೋಷಿಸಿದರು. ಅವರ ಹ್ಯಾಪಿ ಹಾರ್ಡಿ ಅಂಡ್ ಹೀರ್ ಸಿನಿಮಾದಲ್ಲಿ ಆಕೆಯ ಬಳಿ ತೇರಿ ಮೇರಿ ಕಹಾನಿ ಎಂಬ ಹಾಡನ್ನ ಹಾಡಿಸಿದ್ದಾರೆ. ಮೂಲತಃ ಮುಂಬೈನವರೇ ಆದ ರಾಣು ಮೊಂಡಲ್ ಪತಿ ಮೃತರಾದ ನಂತರ ಅನಾಥವಾಗಿ ಪಶ್ಚಿಮ ಬಂಗಾಳ ಸೇರಿದ್ರು, ಆಗ ಇಲ್ಲದ ಸಂಬಂಧಿಕರೀಗ ಒಟ್ಟಾಗುತ್ತಿದ್ದಾರೆ.