Featured
ಬ್ಯಾಂಕ್ ವಿಲೀನಕ್ಕೆ ಹೆದರಬೇಡಿ, ಯಾರ ಕೆಲಸವೂ ಹೋಗಲ್ಲ: ಸಚಿವೆ ಅಭಯ

ಚೆನ್ನೈ: ಹತ್ತು ಸಾರ್ವಜನಿಕ ವಲಯದ ಬ್ಯಾಂಕ್ ಗಳ ವಿಲೀನಕ್ಕೆ ಸಂಬಂಧಿಸಿದಂತೆ ಉದ್ಯೋಗಗಳೂ ಖಡಿತವಾಗಲಿವೆ ಎಂಬ ಆತಂಕ ದಟ್ಟವಾಗಿ ಹಬ್ಬುತ್ತಿದ್ದು ಪ್ರತೀ ನಗರಗಳಲ್ಲೂ ಪ್ರತಿಭಟನೆಯ ಕಾವು ಹೆಚ್ಚುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಈ ತರಹ ತಪ್ಪು ಮಾಹಿತಿ ರವಾನೆಯಾಗುತ್ತಿದೆ, ಯಾರೊಬ್ಬರ ಕೆಲಸವೂ ಹೋಗುವುದಿಲ್ಲ ಅಂತ ನಾನು ಭರವಸೆ ನೀಡುತ್ತೇನೆ ಎಂದು ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್ ಶುಕ್ರವಾರ ಹತ್ತು ಬ್ಯಾಂಕ್ ಗಳನ್ನ ಸೇರಿಸಿ ನಾಲ್ಕು ಬ್ಯಾಂಕ್ ಗಳನ್ನಾಗಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದರು, ಓರಿಯೆಂಟಲ್ ಬ್ಯಾಂಕ್ ಹಾಗೂ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ: ಕೆನರಾ ಹಾಗೂ ಸಿಂಡಿಕೇಟ್ ಬ್ಯಾಂಕ್; ಅಲಹಾಬಾದ್ ಬ್ಯಾಂಕ್ ಹಾಗೂ ಇಂಡಿಯನ್ ಬ್ಯಾಂಕ್ʼ; ಯೂನಿಯನ್ ಬ್ಯಾಂಕ್ ಜೊತೆ ಆಂಧ್ರಾ ಬ್ಯಾಂಕ್ ಹಾಗೂ ಕಾರ್ಪೋರೇಷನ್ ಬ್ಯಾಂಕ್ ಗಳು ಸೇರಿಕೊಳ್ಳಲಿವೆ. ಸಂಖ್ಯೆಯನ್ನ ಸಂಕುಚಿತಗೊಳಿಸಿ, ನೀತಿ ನಿಯಮಗಳನ್ನ ಪರಿಣಾಮಕಾರಿಯಾಗಿ ಜಾರಿ ಮಾಡಲು ಈ ವಿಲೀನ ಅವಶ್ಯ ಎಂದು ಸಚಿವರು ಹೇಳಿದ್ದರು.
You may like
ಪ್ರಧಾನಿ ಮೋದಿಯಿಂದ ನೂತನ ತೆರಿಗೆ ಸುಧಾರಣಾ ಕ್ರಮ ಪ್ರಕಟ:ನೇರ ತೆರಿಗೆ ಪಾವತಿಯಲ್ಲಿ ಸುಧಾರಣೆಗೆ ಒತ್ತು
ತಲೆಹರಟೆ ಟ್ವೀಟ್ಗೆ ಕನ್ನಡ ಸುದ್ದಿ ಮಾಧ್ಯಮಗಳು ಕಕ್ಕಾಬಿಕ್ಕಿ : ಮೈಸೂರ್ಪಾಕ್ ತಮಿಳುನಾಡಿಗೆ ಹೋಯ್ತಲ್ಲಪ್ಪ..!
ಆಟೋಮೊಬೈಲ್ಸ್ ಕ್ಷೇತ್ರ ಹಿಂಜರಿಕೆಗೆ ಕಾರಣ, ಅಪ್ಲಿಕೇಷನ್ ಮೂಲಕ ಓಲಾ-ಉಬರ್ ಪ್ರಯಾಣ : ನಿರ್ಮಲಾ ಹೇಳಿಕೆ ಟ್ರೋಲ್
5 ಲಕ್ಷದವರೆಗೆ ತೆರಿಗೆ ಇಲ್ವಾ..? 5 ರಿಂದ 10 ಲಕ್ಷ ಆದಾಯಕ್ಕೆ ಎಷ್ಟು ತೆರಿಗೆ..? ಮೋದಿ ಸರ್ಕಾರದ ಹೊಸ ಚಿಂತನೆ ಏನು..?
ಕೊನೆಗೂ ಆರ್ಥಿಕತೆ ಸುಧಾರಣೆಗೆ ಮುಂದಾದ ಮೋದಿ ಸರ್ಕಾರ : ಬಡ್ಡಿ ದರ ಕಡಿತ, 70 ಸಾವಿರ ಕೋಟಿ ಪ್ಯಾಕೇಜ್ ಘೋಷಣೆ
ಪ್ರವಾಹ ಸಂತ್ರಸ್ತರ ನೆರವಿಗೆ ರಾಜ್ಯ ಸರ್ಕಾರದಿಂದ 195 ಕೋಟಿ ರೂ. ಬಿಡುಗಡೆ : ಇಷ್ಟೇ ಸಾಕಾ..? ಕೇಂದ್ರ ಏನ್ಮಾಡ್ತಿದೆ..?