Featured
ಬಿಜೆಪಿಯವರಿಗೆ ಮೋದಿಯನ್ನು ಕೇಳುವ ತಾಕತ್ ಇಲ್ಲ..! ಪ್ರವಾಹ ಪೀಡಿತರಿಗೆ ಮೋದಿ ಏನ್ ಕೊಟ್ರು..? ಸಿದ್ದು ಖಡಕ್ ಪ್ರಶ್ನೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು, ಪ್ರವಾಹ ಪೀಡಿತ ಉತ್ತರ ಕರ್ನಾಟಕ ಭಾಗದಲ್ಲಿ ಸಮೀಕ್ಷೆ ಮಾಡದೇ ಹೋಗಿರೋದಕ್ಕೆ ಭಾರೀ ಟೀಕೆ ವ್ಯಕ್ತವಾಗಿದೆ. ಈ ಕುರಿತು ಬೆಂಗಳೂರಿನಲ್ಲಿ ಮಾತ್ನಾಡಿರೋ ಮಾಜಿ ಸಿಎಂ ಸಿದ್ದರಾಮಯ್ಯ, ಸೆಪ್ಟೆಂಬರ್ 7ರಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬರ್ತಾರೆ. ಹಣ ಬಿಡುಗಡೆ ಮಾಡಿಸ್ತೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ರು. ಈಗ ಏನ್ ಹೇಳ್ತಾರೆ..? ಎಂದು ಪ್ರಶ್ನೆ ಮಾಡಿದ್ದಾರೆ.
ರಾಜ್ಯ ಭೀಕರ ಪ್ರವಾಹದಿಂದ ತತ್ತರಿಸಿದೆ. ಪ್ರಧಾನಿ ಮೋದಿ, ಏರಿಯಲ್ ಸರ್ವೇ ಮಾಡಬೇಕಿತ್ತು. ಆಗ ಬರಲಿಲ್ಲ. ಈಗಲಾದ್ರೂ ಬಂದಾಗ ಸರ್ವೆ ಮಾಡಬಹುದಿತ್ತು ಎಂದಿದ್ದಾರೆ. ಪ್ರಧಾನಿ ಮೋದಿಗೆ ಸರ್ಕಾರದ ಪ್ರಿಯಾರಿಟಿ ಗೊತ್ತಾಗುತ್ತಿಲ್ಲ. ಜನರ ಕ್ಷ್ಟ ಕೇಳದ ಮೇಲೆ ಇನ್ನೇಕೆ. ಅವರು ಬಂದ್ರೂ ಯಾರನ್ನ ಭೇಟಿಯಾದ್ರು ಅನ್ನೋದೇ ಗೊತ್ತಾಗಲಿಲ್ಲ. ಮೋದಿ ಅವರನ್ನ ಯಡಿಯೂರಪ್ಪ ರಿಸೀವ್ ಮಾಡಿದ್ದಷ್ಟೇ ಗೊತ್ತು ಎಂದು ವ್ಯಂಗವಾಡಿದ್ರು.
ಸ್ವತಃ ಸಿಎಂ ಯಡಿಯೂರಪ್ಪ ಅವರೇ 50 ಸಾವಿರ ಕೋಟಿ ಅಂದಾಜು ಅನ್ನೋ ಮಾತ್ನಾಡಿದ್ದಾರೆ. ನನ್ನ ಪ್ರಕಾರ 1 ಲಕ್ಷ ಕೋಟಿ ನಷ್ಟವಾಗಿದೆ. ಬಿಜೆಪಿ ನಾಯರಿಗೆ ಒತ್ತಾಯ ಮಾಡುವ ತಾಕತ್ತಿಲ್ಲ. ಸರ್ವ ಪಕ್ಷ ನಿಯೋಗವನ್ನ ಕರೆದೊಯ್ಯಲಿಲ್ಲ. ಸದನ ಕರೆಯಿರಿ ಎಂದರೂ ಮಾಡಲಿಲ್ಲ. ಬಿಜೆಪಿಯವರದ್ದು ದಪ್ಪ ಚರ್ಮ. ಮೋದಿ ಬಡವರ ಪರವಾಗಿಲ್ಲ. ಅವರು ಶ್ರೀಮಂತರ ಪರ ಎಂದು ಬಿಜೆಪಿ ನಾಯಕರ ವಿರುದ್ಧ ಸಿದ್ದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಎರಡೇ ದಿನಗಳಲ್ಲಿ 1600 ಕೋಟಿ ಬಿಡುಗಡೆ ಮಾಡಿದ್ರು ಎಂದು ತಮ್ಮ ಹಿಂದಿನ ಸರ್ಕಾರವನ್ನ ನೆನೆದರು ಸಿದ್ದರಾಮಯ್ಯ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















