Featured
ಬದುಕು ಮುಗಿಸಿದ ಸಿದ್ಧಾರ್ಥ್ : 36 ಗಂಟೆಗಳ ಬಳಿಕ ಮೃತದೇಹ ಪತ್ತೆ
ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್
ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್
ನೇತ್ರಾವತಿ : ಕಾಫಿ ಡೇ ಒಡೆಯ, ಕಾಫಿ ಕಿಂಗ್, ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥ್ ಹೆಗ್ಡೆ ಬದುಕು ಮುಗಿಸಿದ್ದಾರೆ. 36 ಗಂಟೆಗಳ ಬಳಿಕ ಬುಧವಾರ ಮುಂಜಾನೆ ಸುಮಾರು 5 ಗಂಟೆಗೆ ಸಿದ್ಧಾರ್ಥ್ ಮೃತದೇಹ ಪತ್ತೆಯಾಗಿದೆ. ನೇತ್ರಾವತಿ ನದಿಯ ಹಿನ್ನೀರು ಪ್ರದೇಶದಲ್ಲಿ ಸಿದ್ಧಾರ್ಥ್ ಮೃತದೇಹ ಪತ್ತೆಯಾಗಿದೆ.
ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಮೃತದೇಹ ಸಿಕ್ಕಿರುವ ಬಗ್ಗೆ ಮಾಜಿ ಸಚಿವ, ಶಾಸಕ ಯು.ಟಿ. ಖಾದರ್, ಎಸ್.ಎಂ.ಕೃಷ್ಣಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಇದರಿಂದಾಗಿ ಎಸ್ಎಂಕೆ ಕುಟುಂಬಸ್ಥರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ರಾಜಕಾರಣಗಳು, ಉದ್ಯಮಿಗಳು ಕೃಷ್ಣ ಮನೆಗೆ ಆಗಮಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಬುಧವಾರ ಮುಂಜಾನೆ ಮೀನುಗಾರರು ಮೀನುಗಾರಿಕೆಗೆ ತೆರಳುವ ಸಂದರ್ಭದಲ್ಲಿ ಮೃತದೇಹ ಪತ್ತೆಯಾಗಿದೆ. ನೇತ್ರಾವತಿಯ ಹಿನ್ನೀರು ಪ್ರದೇಶವಾದ ಹೊಯ್ಗೆ ಬಜಾರ್ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳ ಮಹಜರು ಮುಗಿಸಿ, ಮೃತದೇಹವನ್ನ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕೊಂಡ್ಯೊಯಲಾಗಿದೆ. ಎಸ್ಎಂಕೆ ಕುಟುಂಬ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದು, ಅಲ್ಲಿಂದ ಚಿಕ್ಕಮಗಳೂರಿನ ಹುಟ್ಟೂರಿಗೆ ಮೃತದೇಹ ಮಾಡಲಿದ್ದಾರೆ.
ಸಿದ್ಧಾರ್ಥ್ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ
ಸಿದ್ಧಾರ್ಥ್ ಅಂತ್ಯಕ್ರಿಯೆ ಹುಟ್ಟೂರು ಚಿಕ್ಕಮಗಳೂರಿನ ಚೇತನಹಳ್ಳಿಯಲ್ಲಿ ನಡೆಯೋ ಸಾಧ್ಯತೆ ಇದೆ. ಅಥವಾ ಸಿದ್ಧಾರ್ಥ್ ಅವರ ಕಾಫಿ ಎಸ್ಟೇಟ್ನಲ್ಲಿ ನಡೆಸಲು ಚಿಂತನೆ ನಡೆದಿದ್ದು, ಇನ್ನೂ ಅಧಿಕೃತವಾಗಿ ಎಸ್ಎಂಕೆ ಕುಟುಂಬಸ್ಥರು ನಿರ್ಧರಿಸಿಲ್ಲ.
ಒಟ್ಟನಲ್ಲಿ ಯಾರೂ ಊಹೆ ಮಾಡದಂತೆ ಸಿದ್ಧಾರ್ಥ್ ಬದುಕು ಅಂತ್ಯಗೊಂಡಿದೆ.