Featured
ಫ್ಯಾನ್ಸ್ ಗಲಾಟೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಇದೆಲ್ಲಾ ಆ ನಟರಿಗೂ ಗೊತ್ತಿದೆ : ಉಪೇಂದ್ರ

ಬೆಂಗಳೂರು: ನಟ ದರ್ಶನ್ ಹಾಗೂ ಸುದೀಪ್ ನಡುವೆ ಬಹಿರಂಗವಾಗಿಯೇ ನಡೆಯುತ್ತಿರುವ ಜಗಳ ಗುಟ್ಟಾಗಿಯೇನು ಉಳಿದಿಲ್ಲ, ಇಬ್ಬರೂ ನಟರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲೆಲ್ಲಾ ರಾಡಿ ಎಬ್ಬಿಸಿಕೊಂಡು ಕರ್ನಾಟಕ ಚಿತ್ರರಂಗದ ಹೆಸರಿಗೆ ಮಸಿಬಳಿಯುವಂತೆ ಕೆಟ್ಟದಾಗಿ ಕೊಳಕು ಭಾಷೆಯಲ್ಲಿ ಬೈಯ್ದಾಡಿಕೊಳ್ಳುತ್ತಿದ್ದಾರೆ. ಇಂತಹ ಪರಂಪರೆಯನ್ನ ಬೆಳೆಸುತ್ತಿರುವ ನಟರ ಮಧ್ಯೆ ಇನ್ನೊಬ್ಬ ನಟ ಈ ತರಹದ ಜಗಳ ಬೇಕು ಎಂಬಂತೆ ಮಾತನಾಡಿದ್ದಾರೆ.
ನಟ ಉಪೇಂದ್ರ ತಮ್ಮ ಹುಟ್ಟುಹಬ್ಬವನ್ನ ಇಂದು ಅಭಿಮಾನಿಗಳೊಡನೆ ಆಚರಿಸಿಕೊಂಡು ಮಾಧ್ಯಮಗಳೊಂದಿಗೆ ಮಾತನಾಡಿದರು, ಈ ಸಂದರ್ಭದಲ್ಲಿ ದರ್ಶನ್ ಹಾಗೂ ಸುದೀಪ್ ನಡುವಿನ ಜಗಳದ ಬಗ್ಗೆಯೂ ಪ್ರತಿಕ್ರಿಯೆ ನೀಡಿದರು. ಚಿತ್ರರಂಗದಲ್ಲಿ ಸ್ಟಾರ್ವಾರ್ ಬೇಕು, ಅದೇನು ದೊಡ್ಡ ವಿಚಾರವಲ್ಲ, ಈ ವಿಷ್ಯ ಇಬ್ಬರೂ ನಟರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.
Continue Reading
Advertisement
You may like
Click to comment