Featured
ಪೊಲೀಸರೆಂದರೆ ಮಾನವೀಯತೆ: ಅನಾರೋಗ್ಯದಿಂದ ಬಳಲುತ್ತಿದ್ದ ಮಕ್ಕಳ ಬಯಕೆ ಈಡೇರಿಕೆ

ಬೆಂಗಳೂರು: ನಾವೆಲ್ಲಾ ಪೊಲೀಸರನ್ನ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ಮುಖವಾಡದಲ್ಲಿ ಮಾತ್ರ ನೋಡಿರುತ್ತೇವೆ, ಆದರೆ ಅವರಲ್ಲಿರುವ ಮಾನವೀಯತೆ ಮಾತ್ರ ನಮ್ಮ ದೃಷ್ಟಿಪಟಲದಲ್ಲಿ ಮೂಡುವುದೇ ಇಲ್ಲ. ಹೀಗೊಂದು ಮಾನವೀಯತೆಯನ್ನ ಸಾರುವ ಕೆಲಸವನ್ನ ಬೆಂಗಳೂರು ಸಿಟಿ ಪೊಲೀಸ್ ಮಾಡಿದೆ. ಒಂದು ದಿನದ ಮಟ್ಟಿಗೆ ಐವರು ಮಕ್ಕಳನ್ನ ನಗರ ಪೊಲೀಸ್ ಆಯುಕ್ತರನ್ನಾಗಿ ಮಾಡಲಾಗಿದೆ.

ಗಂಭೀರ ಖಾಯಿಲೆಯಿಂದ ಬಳಲುತ್ತಿರುವ ಐವರು ಅನಾರೋಗ್ಯ ಪೀಡಿತ ಮಕ್ಕಳು ಪೊಲೀಸ್ ಅಧಿಕಾರಿಗಳಾಗಬೇಕು ಎಂದು ಕನಸು ಕಂಡಿದ್ದರು, ಮಕ್ಕಳ ಕನಸು ನೆರವೇರಿಸಲು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ “ಮೇಕ್ ಎ ವಿಷ್ ಫೌಂಡೇಶನ್” ಜತೆ ಕೈ ಜೋಡಿಸಿದರು. ಇಂದು ಬೆಳಿಗ್ಗೆ 11 ಕ್ಕೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಐದು ಜನ ಮಕ್ಕಳಿಗೆ ಪೊಲೀಸ್ ಗೌರವ ವಂದನೆ ನೀಡಿ ಪ್ರತ್ಯೇಖವಾಗಿ ಅಧಿಕೃತ ಸ್ಥಾನದಲ್ಲಿ ಕೂರಿಸಲಾಯಿತು. ಹೀಗೆ ನಗರ ಪೊಲೀಸರು ಮಕ್ಕಳ ಆಸೆಯನ್ನ ಒಂದು ದಿನಕ್ಕಾದರೂ ನೆರವೇರಿಸಿ ತೃಪ್ತಿಪಟ್ಟುಕೊಂಡರು
You may like
ಪಿಕ್ಅಪ್ ಅಂಡ್ ಡ್ರಾಪ್ ನೆಪದಲ್ಲಿ ಪ್ರಯಾಣಿಕರ ರಾಬರಿ : ಬೆಂಗಳೂರಿನಲ್ಲಿ ನಾಲ್ವರ ಬಂಧನ
ಕೊನೆಗೂ ಟ್ರಾಫಿಕ್ ದಂಡ ಇಳಿಕೆ : ವಾಹನ ಸವಾರರಿಗೆ ಕೊಂಚ ರಿಲೀಫ್
ಬಿಗ್ಬಾಸ್ ಖ್ಯಾತಿಯ ನಟಿ ಜಯಶ್ರೀಗೆ ಮಾವನಿಂದಲೇ ಲೈಂಗಿಕ ಕಿರುಕುಳ..!
ಡಿಕೆಶಿ ಬಂಧನಕ್ಕೆ ಒಕ್ಕಲಿಗರ ಪ್ರತಿಭಟನೆ : ಬೆಂಗಳೂರಿನಲ್ಲಿ ಟೈಟ್ ಸೆಕ್ಯೂರಿಟಿ
ವಾಹನ ಸವಾರರೇ ಎಚ್ಚರ ಎಚ್ಚರ..! ಪೊಲೀಸ್ ಕಮೀಷನರ್ ಕೊಟ್ಟ ವಾರ್ನಿಂಗ್ ಏನು..?
ಬೆಂಗಳೂರಲ್ಲಿ ಹೈ-ಅಲರ್ಟ್ : ಉಗ್ರರಿಂದ ಬಾಂಬ್ ದಾಳಿ ಭೀತಿ..!