Featured
ಪಿ.ವಿ. ಸಿಂಧು ಸಾಧನೆಗೆ ಇಡೀ ದೇಶಾದ್ಯಂತ ಮೆಚ್ಚುಗೆ : ತಾಯಿ ಮನೆಯಲ್ಲಿ ಸಂಭ್ರಮ-ಸಡಗರ

ವಿಶ್ವ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಪಿ.ವಿ. ಸಿಂಧು ಸಾಧನೆಗೆ ಇಡೀ ದೇಶ ಮೆಚ್ಚುವೆ ವ್ಯಕ್ತಪಡಿಸಿದೆ. ಎಲ್ಲಾ ರಾಜಕೀಯ ಗಣ್ಯರು, ಪಕ್ಷಭೇದ ಮರೆತು ಸಿಂಧು ಸಾಧನೆಯನ್ನ ಕೊಂಡಾಡಿದ್ದಾರೆ. ಸಿನಿಮಾ ತಾರೆಯರು, ಕ್ರಿಕೆಟ್ ತಾರೆಯರು, ಕ್ರೀಡಾಪಟುಗಳು ಹೀಗೆ ಇಡೀ ದೇಶಾದ್ಯಂತ ಸಿಂಧು ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಸಿಂಧು ನಮ್ಮ ಹೆಮ್ಮೆ ಸಂಭ್ರಮ ಹಂಚಿಕೊಂಡಿದ್ದಾರೆ.
ಸಿಂಧು ಮನೆಯಲ್ಲಿ ಸಂಭ್ರಮ
ಪಿ.ವಿ. ಸಿಂಧು ವಿಶ್ವ ಬ್ಯಾಡ್ಮಿಂಟನ್ ಪ್ರಶಸ್ತಿ ಗೆಲ್ಲುತ್ತಿದ್ದಂತೆ, ಹೈದ್ರಾಬಾದ್ನ ತಮ್ಮ ನಿವಾಸದಲ್ಲಿ ಸಂಭ್ರಮ ಮನೆ ಮಾಡಿತ್ತು. ಸಿಂಧು ತಾಯಿ, ಪಿ ವಿಜಯ ಅವರು ಸಿಹಿ ಹಂಚಿ ಸಂತೋಷ ಹಂಚಿಕೊಂಡರು. ಮಗಳ ಸಾಧನೆ ಬಗ್ಗೆ ಮಾತ್ನಾಡಿದ ಪಿ.ವಿಜಯ ಅವರು, ತುಂಬಾ ಸಂತೋಷ ಆಗ್ತಿದೆ. ಚಿನ್ನದ ಪದಕಕ್ಕಾಗಿ ನಾವು ಕಾಯುತ್ತಿದ್ದೆವು. ಆ ಕ್ಷಣ ಈಗ ಬಂದಿದೆ ಎಂದು ಖುಷಿ ಹಂಚಿಕೊಂಡರು.
ಗಣ್ಯರಿಂದ ಶುಭಾಶಯ, ಅಭಿನಂದನೆಗಳ ಸುರಿಮಳೆ
ಸಿಂಧು ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕಾಂಗ್ರೆಸ್ ನೇತಾರರು, ಬಿಜೆಪಿ ನೇತಾರರು, ಬಾಲಿವುಡ್ ತಾರೆಯರು, ತೆಲುಗು ಸಿನಿಮಾ ತಾರೆಯರು, ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್, ಆಂಧ್ರ ಸಿಎಂ ಜಗನ್ ಸೇರಿದಂತೆ ಗಣ್ಯಾತಿಗಣ್ಯರು ಶುಭ ಹಾರೈಸಿದ್ದಾರೆ. ದೇಶದ ಹೆಮ್ಮಯ ಪುತ್ರ ಸಿಂಧುಗೆ ಅಭಿನಂದನೆ ಎಂದು ಕೊಂಡಾಡಿದ್ದಾರೆ. ಸಿಂಧು ಸಾಧನೆ ಹೀಗೆ ಮುಂದುವರೆಯಲಿ. ಹಲವರಿಗೆ ಅವರ ಸಾಧನೆ ಸ್ಪೂರ್ತಿ ಆಗಲಿ ಎಂದು ಅಭಿನಂದನೆ ಸಲ್ಲಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?