Featured
ಪತ್ನಿ ವಿಜಯಲಕ್ಷ್ಮಿಗೆ ನಟ ದರ್ಶನ್ ರಕ್ತ ಬರುವಂತೆ ಹೊಡೆದ್ರಾ..? : ಗಾಂಧಿನಗರದ ಗಾಸಿಪ್ ಎಷ್ಟು ನಿಜ..?

ಬೆಂಗಳೂರು : ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್, ಪತ್ನಿ ವಿಜಯಲಕ್ಷ್ಮಿಗೆ ಮತ್ತೆ ಹೊಡೆದರಂತೆ. ವಿಜಯಲಕ್ಷ್ಮಿಗೆ ರಕ್ತ ಬಂತಂತೆ. ದರ್ಶನ್ಗೆ ಅಡ್ಡ ಬಂದ ಪತ್ನಿ ವಿಜಯಲಕ್ಷ್ಮಿ ತಾಯಿಗೂ ಹೊಡೆದರಂತೆ. ದರ್ಶನ್ ವಿರುದ್ಧ ಪತ್ನಿ ವಿಜಯಲಕ್ಷ್ಮಿ ಈಗ ಪೊಲೀಸ್ ಸ್ಟೇಷನ್ಗೆ ದೂರು ನೀಡಲು ಹೋಗಿದ್ದಾರಂತೆ. ಬಳಿಕ ಮಹಿಳಾ ಆಯೋಗಕ್ಕೂ ದೂರು ನೀಡಲು ಮುಂದಾಗಿದ್ರಂತೆ. ಆದ್ರೆ, ರಾಜಕೀಯ ವ್ಯಕ್ತಿಯೊಬ್ಬರು ಮಧ್ಯ ಪ್ರವೇಶ ಮಾಡಿ, ಇಬ್ಬರನ್ನೂ ಸಮಾಧಾನ ಮಾಡಿದ್ದಾರಂತೆ. ಕೊನೆಗೂ ದರ್ಶನ್-ವಿಜಯಲಕ್ಷ್ಮಿ ಡೈವೋರ್ಸ್ಗೆ ಒಪ್ಪಿದ್ದಾರಂತೆ. ಶೀಘ್ರವೇ ಡೈವೋರ್ಸ್ ಕೂಡ ಆಗುತ್ತಂತೆ.
ಹೀಗೊಂದು ಗಾಸಿಪ್, ಕಳೆದ ಎರಡು ಮೂರು ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ಜೋರಾಗಿಯೇ ಓಡಾಡ್ತಿದೆ. ಕೆಲವರಿಗೆ ಗೊತ್ತಿದ್ರೂ, ಹೇಳಲು ಧೈರ್ಯವಿಲ್ಲ. ಇನ್ನು ಕೆಲವರು ಇದನ್ನೇ ಅವಕಾಶ ಅನ್ಕೊಂಡು ಅದಕ್ಕೆ ಉಪ್ಪು-ಖಾರ-ಮಸಾಲೆ ಹಾಕಿ ಬೇಜಾನ್ ಪ್ರಚಾರ ಮಾಡ್ಕೊಳ್ತಿದ್ದಾರೆ. ಆದ್ರೆ, ನಿಜವಾಗಿ ಆಗಿದ್ದೇನು ಅನ್ನೋದು ಮಾತ್ರ ಯಾರೂ ಹೇಳ್ತಿಲ್ಲ. ಹಾಗಿದ್ರೆ, ರೈಸಿಂಗ್ ಕನ್ನಡ ವೆಬ್ಸೈಟ್ಗೆ ಸಿಕ್ಕ ಮಾಹಿತಿ ಏನು..? ಬನ್ನಿ ನೋಡೋಣ.
ವರಮಹಾಲಕ್ಷ್ಮಿ ಹಬ್ಬದ ದಿನ ಎಲ್ಲವೂ ಚೆನ್ನಾಗಿಯೇ ಇತ್ತು. ಅವತ್ತು ಕುರುಕ್ಷೇತ್ರ ಮೂವಿ ಬಿಡುಗಡೆ ಆಗಿ, ದರ್ಶನ್ ಕೂಡ ಖುಷಿಯಾಗಿದ್ರು. ರಾಜರಾಜೇಶ್ವರಿ ನಗರದಲ್ಲಿರೋ ದರ್ಶನ್ ಮನೆಯಲ್ಲಿ ಹಬ್ಬ ಆಚರಣೆ ಮಾಡಿ, ಪತ್ನಿ ವಿಜಯಲಕ್ಷ್ಮಿಯನ್ನ ಅಪಾರ್ಟ್ಮೆಂಟ್ಗೆ ಬಿಡಲು ಸ್ವತಃ ದರ್ಶನ್ ಹೋಗಿದ್ರು. ಈ ವೇಳೆ, ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ನಡುವೆ ಮಾತಿನ ಚಕಮಕಿ ನಡೀತಂತೆ. ಚಿನ್ನದ ವಿಚಾರವಾಗಿ ಗಲಾಟೆ ನಡೆದು, ವಿಜಯಲಕ್ಷ್ಮಿಯನ್ನ ಕಾರಿನಲ್ಲೇ ದರ್ಶನ್ ಹೊಡೆದ್ರು ಎನ್ನಲಾಗಿದೆ.
ರಕ್ತ ಬರುವಂತೆ ಹೊಡೆದ್ರಾ..?
ಮನೆಗೆ ಬಂದ ತಕ್ಷಣ ರೊಚ್ಚಿಗೆದ್ದ ದರ್ಶನ್, ಪತ್ನಿ ವಿಜಯಲಕ್ಷ್ಮಿಗೆ ಮನಬಂದಂತೆ ಥಳಿಸಿ, ರಕ್ತ ಬಂದಂತೆ ಹೊಡೆದ್ರಂತೆ. ಸಿಗರೇಟ್ನಲ್ಲಿ ಸುಟ್ರಂತೆ. ಈ ವೇಳೆ, ವಿಜಯಲಕ್ಷ್ಮಿ ತಾಯಿ ಅಡ್ಡ ಬಂದ್ರಂತೆ. ಇದ್ಯಾವುದನ್ನೂ ಲೆಕ್ಕಿಸದ ದರ್ಶನ್, ವಿಜಯಲಕ್ಷ್ಮಿ ತಾಯಿಗೂ ಹೊಡೆದ್ರಂತೆ. ಕಂಠಪೂರ್ತಿ ಕುಡಿದಿದ್ದ ದರ್ಶನ್, ವಿಕೃತವಾಗಿ ವರ್ತನೆ ಮಾಡಿದ್ದಾರೆ ಅನ್ನೋದು ಗಾಂಧಿನಗರದಲ್ಲಿ ಗುಲ್ಲು.
ಪೊಲೀಸ್ ಸ್ಟೇಷನ್.. ಮಹಿಳಾ ಆಯೋಗದತ್ತ ವಿಜಯಲಕ್ಷ್ಮಿ..!?
ಇಷ್ಟೆಲ್ಲಾ ರದ್ಧಾಂತ ಆದ್ಮೇಲೆ, ಬೇಸತ್ತ ವಿಜಯಲಕ್ಷ್ಮಿ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾರೆ. ಆದ್ರೆ, ಠಾಣೆಯಲ್ಲಿ ದೂರು ಸ್ವೀಕರಿಸಿಲ್ಲ. ಬಳಿಕ ಮಹಿಳಾ ಆಯೋಗಕ್ಕೂ ದೂರು ನೀಡಲು ಮುಂದಾಗಿದ್ದಾರೆ. ಆದ್ರೆ, ಇನ್ನೂ ದೂರು ಕೊಟ್ಟಿಲ್ಲ. ಈ ಮಧ್ಯೆ, ರಾಜಕಾರಣಿಯೊಬ್ಬರು ಎಂಟ್ರಿಯಾಗಿದ್ದಾರೆ ಎನ್ನಲಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?