Featured
ನಾನು ಚುನಾವಣೆಗೆ ಸ್ಪರ್ಧಿಸೋದಿಲ್ಲ, ಮಗ ಬೇಕಾದರೆ…! ಎಚ್.ವಿಶ್ವನಾಥ್

ಬೆಂಗಳೂರು: ಬಿಜೆಪಿಯಲ್ಲಿ ಐವರು ಡಿಸಿಎಂ ಆಗಿದ್ದಾರೆ ನಿಮ್ಮ ಅಭಿಪ್ರಾಯವೇನು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅನರ್ಹ ಶಾಸಕ ಎಚ್ ವಿಶ್ವನಾಥ್, ಈ ಕುರಿತು ನನಗೇನು ಆಕ್ಷೇಪ ಇಲ್ಲ, ಏಕೆಂದರೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಯಾವ ಸ್ಥಾನದ ಮೇಲೂ ಅಪೇಕ್ಷೆ ಇಟ್ಟುಕೊಂಡಿಲ್ಲ ಎಂದರು.
ಆಡಳಿತಕ್ಕನುಕೂಲವಾಗಲಿ ಎಂದು ಮೂವರನ್ನ ಡಿಸಿಎಂ ಮಾಡಿರಬಹುದು, ಹತ್ತು ಜನ ಡಿಸಿಎಂ ಮಾಡಿದರೂ ನನಗೇನು ಅಭ್ಯಂತರವಿಲ್ಲ ಎಂದರು. ಇನ್ನು ತಾವು ಉಪಚುನಾವಣೆಗೆ ಸ್ಪರ್ಧೇ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಇಲ್ಲ ನಾನು ಸ್ಪರ್ಧೆ ಮಾಡೋದಿಲ್ಲ, ಯಾವುದೇ ಚುನಾವಣೆಯೂ ಬೇಡ, ನನ್ನ ಮಗ ಬೇಕಾದರೆ ಅಲ್ಲಿನ ಮತದಾರರು ಹಾಗೂ ಮುಖಂಡರ ಜೊತೆ ಚರ್ಚೆ ಮಾಡಿ ಸ್ಪರ್ಧಿಸಬಹುದು ಎಂದರು.
Continue Reading
Advertisement
You may like
Click to comment