Featured
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಡೈವೋರ್ಸ್ ಕೊಡ್ತಾರಾ..? : ಸುಮಲತಾ ಮಧ್ಯಸ್ಥಿಕೆ..?

ಬೆಂಗಳೂರು : ನಟ ದರ್ಶನ್ ಕೌಟುಂಬಿಕ ವಿಚಾರದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಗೊತ್ತಿರುವ ವಿಚಾರ. ಆದ್ರೆ, ಇದೀಗ ಮತ್ತೆ ಈ ವಿಚಾರ ಅತಿರೇಕಕ್ಕೆ ಹೋಗಿದೆಯಂತೆ. ವರಮಹಾಲಕ್ಷ್ಮಿ ಹಬ್ಬದ ದಿನ ಪತ್ನಿಯನ್ನ ಹಿಗ್ಗಾಮುಗ್ಗ ಹೊಡೆದಿದ್ದಾರಂತೆ ದರ್ಶನ್. ಇದರಿಂದ ಬೇಸತ್ತಿರೋ ಪತ್ನಿ ವಿಜಯಲಕ್ಷ್ಮಿ, ಮಹಿಳಾ ಆಯೋಗ, ಪೊಲೀಸ್ ಸ್ಟೇಷನ್ ಅಂತ ತಿರುಗಾಡ್ತಿದ್ದಾರಂತೆ.
ನಟಿ, ಸಂಸದೆ ಸುಮಲತಾ ಮಧ್ಯಸ್ಥಿಕೆ..?
ಹೀಗೊಂದು ಮಾತು ಸದ್ಯ ಗಾಂಧಿನಗರದಲ್ಲಿ ಚರ್ಚೆ ಆಗ್ತಿದೆ. ದರ್ಶನ್ ಖ್ಯಾತ ನಟ. ಈಗ ದರ್ಶನ್ ವಿರುದ್ಧ ಪತ್ನಿಯೇ ದೂರು ನೀಡಿದ್ರೆ ನೆಗೆಟಿವ್ ಆಗುತ್ತೆ. ಹೀಗಾಗಿ, ಇಬ್ಬರ ನಡುವೆ ನಟಿ, ಸಂಸದೆ ಸುಮಲತಾ ಮಧ್ಯಸ್ಥಿಕೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಇಬ್ಬರ ಜೊತೆಯೂ ಮಾತ್ನಾಡಿರೋ ಸುಮಲತಾ, ಇಬ್ಬರನ್ನೂ ಮತ್ತೆ ಒಂದು ಮಾಡಲು ಯತ್ನಿಸಿದ್ದಾರೆ. ಆದ್ರೆ, ಸುಮಲತಾ ಯತ್ನಕ್ಕೆ ಒಪ್ಪಿಲ್ಲ ಎನ್ನಲಾಗಿದೆ. ಹೀಗಾಗಿ, ವಿಧಿಯಿಲ್ಲದೆ ಕೌಟುಂಬಿಕ ನ್ಯಾಯಾಲಯದಲ್ಲಿ ಇತ್ಯರ್ಥ ಮಾಡಲು ಮುಂದಾಗಿದ್ದಾರಂತೆ.
ವಿಜಯಲಕ್ಷ್ಮಿ ದರ್ಶನ್ ಈಗ ವಿಜಯಲಕ್ಷ್ಮಿ..!
ಎರಡು ದಿನಗಳ ಹಿಂದೆ ಈ ಸುದ್ದಿ ಹೊರಬಂದಾಗ, ಮೊದಲು ವಿಜಯಲಕ್ಷ್ಮಿ ಎಲ್ಲವೂ ಸುಳ್ಳು, ವದಂತಿ ಅಂತ ಹೇಳಿದ್ರು. ಅಲ್ಲದೆ, ಟ್ವಿಟ್ಟರ್ನಲ್ಲಿ ಇದೆಲ್ಲಾ ರೂಮರ್ಸ್ ಅಂತ ಒಂದ್ ಲೈನ್ ಬರೆದು ಹಾಕಿದ್ರು ಕೂಡ. ಇದೆಲ್ಲಾ ಆದ್ಮೇಲೆ, ಮತ್ತೆ ಒಂದು ದಿನ ಬಿಟ್ಟು, ಪತಿ ದರ್ಶನ್ ಸೇರಿದಂತೆ ಎಲ್ಲರನ್ನೂ ಅನ್ಫಾಲೋ ಮಾಡಿದ್ರು. ಹೆಸರನ್ನೂ ಕೂಡ ವಿಜಯಲಕ್ಷ್ಮಿ ದರ್ಶನ್ ಅನ್ನೋದನ್ನ ವಿಜಯಲಕ್ಷ್ಮಿ ಅಂತ ಬದಲಿಸಿಕೊಂಡ್ರು. ಇದನ್ನೆಲ್ಲಾ ನೋಡ್ತಿದ್ರೆ ಡೈವೋರ್ಸ್ ಸುದ್ದಿಗೆ ಮತ್ತಷ್ಟು ಪುಷ್ಠಿ ಕೊಟ್ಟಂತೆ ಕಾಣ್ತಿದೆ. All the rumours doing rounds are baseless…— Vijayalakshmi (@vijayaananth2) August 11, 2019
ಆದ್ರೆ, ಈವರೆಗೆ ಯಾವುದು ಕೂಡ ಕನ್ಫರ್ಮ್ ಆಗಿಲ್ಲ. ದರ್ಶನ್ ಆಗಲಿ, ವಿಜಯಲಕ್ಷ್ಮಿ ಆಗಲಿ ಈ ಬಗ್ಗೆ ಈವರೆಗೆ ತುಟಿ ಬಿಚ್ಚಿಲ್ಲ. ನಮಗೆ ಸಿಕ್ಕ ಮಾಹಿತಿ ಪ್ರಕಾರ, ಶೀಘ್ರವೇ ಎಲ್ಲವೂ ಅಧಿಕೃತ ಆಗುತ್ತೆ ಎನ್ನಲಾಗ್ತಿದೆ. ಒಬ್ಬ ನಾಯಕ ರೋಲ್ ಮಾಡಲ್ ಆಗಿರಬೇಕು ಅನ್ನೋದು ಎಲ್ಲ ಅಭಿಮಾನಿಗಳ ಆಸೆ. ಆದ್ರೆ, ದರ್ಶನ್ ಪದೇ ಪದೇ ನೆಗೆಟಿವ್ ವಿಚಾರಗಳಿಗೆ ಸುದ್ದಿ ಆಗ್ತಿರೋದು ಅಭಿಮಾನಿಗಳಲ್ಲೂ ಬೇಸರ ಮೂಡಿಸಿದೆ ಎನ್ನಲಾಗಿದೆ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















