ಬೆಂಗಳೂರು : ಬಹುನಿರೀಕ್ಷಿತ, ಬಹುಕೋಟಿ ವೆಚ್ಚದ, ಬಹುತಾರಾಗಣದ ಚಿತ್ರ ಕುರುಕ್ಷೇತ್ರ ಬಿಡುಗಡೆಯಾಗಿದೆ. ರಾಜ್ಯದಲ್ಲಿ 400 ಥಿಯೇಟರ್ಗೂ ಹೆಚ್ಚು ಹಾಗೂ ವಿಶ್ವಾದ್ಯಂತ ಸುಮಾರು 1500ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಕುರುಕ್ಷೇತ್ರ ಪ್ರದರ್ಶನ ಕಾಣ್ತಿದ್ದು, ಅದ್ಭುತ ಓಪನಿಂಗ್ ಪಡೆದುಕೊಂಡಿದೆ. ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಲ್ಲಿ ಮಧ್ಯರಾತ್ರಿಯಿಂದಲೇ ಶೋಗಳು ಆರಂಭವಾಗಿದ್ದವು.
ಬಹುತೇಕ ಎಲ್ಲಾ ಚಿತ್ರಮಂದಿರಗಳು ದರ್ಶನ್ ಫ್ಯಾನ್ಗಳಿಂದ ತುಂಬಿ ತುಳುಕುತ್ತಿವೆ. ಎಲ್ಲಾ ಥಿಯೇಟರ್ಗಳು ಬೆಳಗ್ಗೆ 6 ಗಂಟೆಯಿಂದ ಶೋಗಳನ್ನ ಶುರು ಮಾಡಿದ್ರು. ಮಳೆಯನ್ನೂ ಲೆಕ್ಕಿಸದೇ, ಪ್ರೇಕ್ಷಕರು, ಅಭಿಮಾನಿಗಳು ಕುರುಕ್ಷೇತ್ರವನ್ನ ನೋಡಿ ಎಂಜಾಯ್ ಮಾಡಿದ್ರು.
ಪ್ರತಿಯೊಬ್ಬರು ನೋಡಲೇಬೇಕು : ದುರ್ಯೋಧನ-ಕರ್ಣನೇ ಹೈಲೆಟ್
ಕುರುಕ್ಷೇತ್ರ ನೋಡಿದ ಪ್ರತಿಯೊಬ್ಬರು ಹೇಳ್ತಿರೋ ಮಾತು ಇದು. ಸಿನಿಮಾ ಅದ್ಭುತವಾಗಿದೆ. 3ಡಿ ಚೆನ್ನಾಗಿ ಮಾಡಿದ್ದಾರೆ. ಅದ್ಭುತ ದೃಶ್ಯಕಾವ್ಯ. ದುರ್ಯೋಧನನಾಗಿ ದರ್ಶನ್ ನಟನೆ ಸೂಪರ್ ಆಗಿದೆ. ದರ್ಶನ್ ಜೊತೆ ಕರ್ಣನಾಗಿ ಸಾಥ್ ಕೊಟ್ಟಿರೋ ಅರ್ಜುನ್ ಸರ್ಜಾ ಸಿನಿಮಾದ ಹೈಲೆಟ್ ಅನ್ನೋ ಮಾತು ಕೇಳಿ ಬರ್ತಿದೆ.
ಅಂಬರೀಶ್ ಕೂಡ ಚಿತ್ರಕ್ಕೆ ಜೀವ ತುಂಬಿದ್ದು, ಸಿನಿಮಾ ಕೊನೆಯಲ್ಲಿ ಬರೋ ಫೈಟಿಂಗ್ ದೃಶ್ಯ ಅದ್ಭುತವಾಗಿದೆ ಅನ್ನೋದು ಪ್ರೇಕ್ಷಕರ ಮಾತು. ನಿಖಿಲ್ ಕೂಡ ಚೆನ್ನಾಗಿ ನಟಿಸಿದ್ದಾರೆ ಎಂದು ಸಿನಿಮಾ ನೋಡಿದ ಪ್ರೇಕ್ಷಕರು ಹೇಳ್ತಿದ್ದಾರೆ.
ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆ ಪಡುವ ಸಿನಿಮಾ ಇದು. ತಂತ್ರಜ್ಞಾನ, ತಾರಾಗಣ, ಅದ್ಧೂರಿತನ, ಮೇಕಿಂಗ್ ಹೀಗೆ ಪ್ರತಿಯೊಂದು ಹಂತದಲ್ಲೂ ಸಿನಿಮಾ ಗೆದ್ದಿದೆ. ಬಾಹುಬಲಿಗೆ ಸರಿಸಮಾನಾಗಿ ನಿಲ್ಲುವ ಸಿನಿಮಾ ನಮ್ಮ ಕುರುಕ್ಷೇತ್ರ.
for more News Updates Please visit : www.risingkannada.com
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?