Featured
ದೀಪಾವಳಿಯಿಂದ ದೆಹಲಿಯಲ್ಲಿ ಸಮಬೆಸ ಸಂಚಾರ ಪುನಃ ಆರಂಭ : ಕೇಜ್ರಿವಾಲ್

ನವದೆಹಲಿ: ಚಳಿಗಾಲ ಆರಂಭದಲ್ಲಿ ವಾಯುಮಾಲಿನ್ಯ, ಪರಿಸರ ಮಾಲಿನ್ಯ ತಪ್ಪಿಸಲು ದೆಹಲಿಯ ಆಮ್ಆದ್ಮಿ ಸರ್ಕಾರ ವಾಹನ ಸವಾರರಿಗೆ ಬ್ರೇಕ್ ಹಾಕಲು ಮುಂದಾಗಿದ್ದು ಈ ಹಿಂದೆ ಜಾರಿ ತಂದಿದ್ದ ಸಮಬೆಸ ನಿಯಮ ಪುನಃ ಪಾಲನೆಯಾಗಲಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಸರ್ಕಾರ ಶುಕ್ರವಾರ ಈ ಬಗ್ಗೆ ಮಾಹಿತಿ ನೀಡಿದ್ದು, ವಾಯುಮಾಲಿನ್ಯ ನಿಯಂತ್ರಣವೇ ಸರ್ಕಾರದ ಮೊದಲ ಆದ್ಯತೆ, ಚಳಿಗಾಲ ಆರಂಭವಾಗುತ್ತಿದ್ದಂತೆ ದೆಹಲಿ ಸುತ್ತಲಿನ ರಾಜ್ಯಗಳಲ್ಲಿ ರೈತರು ಹುಲ್ಲಿಗೆ ಬೆಂಕಿ ಹಾಕುತ್ತಾರೆ, ಅದು ದೆಹಲಿಯ ಮೇಲೆ ಪರಿಣಾಮ ಬೀರುತ್ತದೆ, ಅಷ್ಟೇ ಅಲ್ಲದೇ ನಗರದಲ್ಲೇ ೧೨ ಪ್ರದೇಶಗಳನ್ನ ಆಘಾತಕಾರಿ ಎಂದು ಗುರುತಿಸಿದ್ದೇವೆ, ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಉತ್ತೇಜನ ನೀಡುವ ಸಲುವಾಗಿಯೂ ಹಲವು ಕಾರ್ಯಕ್ರಮಗಳನ್ನ ಹಾಕಿಕೊಂಡಿದ್ದೇವೆ ಎಂದರು.
ಹಿಂದೆ ಇದ್ದಂತೆ ಸಮ ಸಂಖ್ಯೆ ಹಾಗೂ ಬೆಸ ಸಂಖ್ಯೆ ವಾಹನಗಳು ರಸ್ತೆಗಿಳಿಯಲಿದೆ, ಇದರಿಂದ ಭಾಗಶಃ ವಾಯುಮಾಲಿನ್ಯ ಕಡಿಮೆಮಾಡಿದಂತಾಗುತ್ತದೆ, ಈ ಯೋಜನೆ ಅಕ್ಟೋಬರ್ನಿಂದ ಜಾರಿಯಾಗಲಿದೆ ಎಂದರು.
Advertisement
Continue Reading
Advertisement
You may like
Click to comment