ಬೆಂಗಳೂರು : ಬಹುತಾರಾಗಣದ, ಬಹು ನಿರೀಕ್ಷಿತ ಸಿನಿಮಾ ಕುರುಕ್ಷೇತ್ರ ಇನ್ನೇನು ಬಿಡುಗಡೆ ಆಗ್ತಿದೆ. ಎಲ್ಲೆಡೆ ಪ್ರಮೋಷನ್ ನಡೀತಿದ್ದು, ಅಭಿಮನ್ಯ ಪಾತ್ರ ಮಾಡಿರೋ ನಿಖಿಲ್ ಕುಮಾರಸ್ವಾಮಿ ಡಬ್ಬಿಂಗ್ ಮುಗಿಸಿದ್ದಾರೆ. ಇತ್ತೀಚೆಗೆ ಹೈದ್ರಾಬಾದ್ನಲ್ಲಿ ನಡೆದ ಕುರುಕ್ಷೇತ್ರ ಸಿನಿಮಾದ ಕಾರ್ಯಕ್ರಮದಲ್ಲಿ ಮಾತ್ನಾಡಿರೋ ನಿಖಿಲ್ ಕುಮಾರಸ್ವಾಮಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದೆ ನಾನಿನ್ನೂ ಜ್ಯೂನಿಯರ್. ಅವರು ಕನ್ನಡ ಚಿತ್ರರಂಗಕ್ಕೆ ತುಂಬಾ ದೊಡ್ಡ ಕೊಡುಗೆ ಕೊಟ್ಟಿದ್ದಾರೆ ಎಂದಿದ್ದಾರೆ.
ನಾನು-ದರ್ಶನ್ ತುಂಬಾ ಆತ್ಮೀಯರು ಅಲ್ಲದೇ ಇರಬಹುದು. ಅವರ ಜೊತೆ ಮಾತು-ಕಥೆ. ಸುತ್ತಾಟ ಕಡಿಮೆ. ಆದ್ರೆ, ಅವರಿಗೆ ನನ್ನ ಹೋಲಿಗೆ ಸರಿಯಲ್ಲ. ನಾನಿನ್ನೂ ಚಿಕ್ಕವನು ಎಂದಿದ್ದಾರೆ.
ಇದೇ ವೇಳೆ ಮಾತ್ನಾಡಿರೋ ನಿಖಿಲ್, ಅಂಬರೀಷ್ ಪುತ್ರ ಅಭಿಷೇಕ್ ನಾನು ಉತ್ತಮ ಸ್ನೇಹಿತರು. ನಾನು ಮಾನವೀಯ ಮೌಲ್ಯಗಳಿಗೆ ತುಂಬಾ ಬೆಲೆ ಕೊಡುತ್ತೇನೆ. ವೈಯಕ್ತಿಕವಾಗಿ ಚಿತ್ರರಂಗದಲ್ಲಿ ನನಗೆ ಸಾಕಷ್ಟು ಸ್ನೇಹಿತರಿದ್ದಾರೆ. ಎಲ್ಲರಿಗೂ ಗೌರವ ಕೊಡುತ್ತೇನೆ. ನನಗೆ ಅಹಂ ಇಲ್ಲ, ಅಹಂಕಾರ ಇಲ್ಲ ಎಂದು ಸ್ಪಷ್ಟನೆ ನೀಡಿದ್ರು.
ಇನ್ನು, ಜೆಡಿಎಸ್ ಪಕ್ಷ ಸಂಘಟನೆಯಲ್ಲಿ ಬ್ಯುಸಿಯಾಗಿದ್ದ ಕಾರಣ, ಹೈದರಾಬಾದ್ನಲ್ಲಿ ನಡೆದ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಬರಲು ಆಗಲಿಲ್ಲ ಎಂದು ಕ್ಷಮೆ ಕೋರಿದರು. ಅಭಿಷೇಕ್ ಹಾಗು ನಾನು ತುಂಬಾ ಚೆನ್ನಾಗಿದ್ದೇವೆ. ಚುನಾವಣೆ ಆದ್ಮೇಲೆ ನಾವಿಬ್ಬರೂ ಭೇಟಿಯಾಗಿಲ್ಲ. ಆದರೂ ನಮ್ಮ ಸ್ನೇಹಕ್ಕೆ ಯಾವುದೇ ತೊಂದರೆ ಇಲ್ಲ ಅಂತ ನಿಖಿಲ್ ಸ್ಪಷ್ಟನೆ ನೀಡಿದ್ರು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?