ಮೈಸೂರು : ಮಾಜಿ ಸಿಎಂ ಸಿದ್ದರಾಮಯ್ಯ ಅದ್ಯಾಕೋ ಏನೋ ಪದೇ ಪದೇ ಮಧ್ಯಂತರ ಚುನಾವಣೆ ಬಗ್ಗೆ ಮಾತಾಡುತ್ತಲೇ ಇದ್ದಾರೆ. ಇವತ್ತು ಕೂಡ ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಡಿಸೆಂಬರ್ ಅಥವಾ ಜನವರಿಯಲ್ಲಿ ಮಧ್ಯಂತರ ಚುನಾವಣೆ ಆಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ. ಇಷ್ಟು ದಿನ ಮಧ್ಯಂತರ ಚುನಾವಣೆ ಅಂತಿದ್ದ ಸಿದ್ದು, ಈ ಬಾರಿ ಡಿಸೆಂಬರ್ ಅಂತ ಹೇಳಿದ್ದು, ತಿಂಗಳು ಕೂಡ ಹೇಳಿದ್ದಾರೆ ಅಂದ್ರೆ, ಇಲ್ಲೇನೋ ಇದೆ ಅನ್ನೋ ಸಂಶಯ ರಾಜಕೀಯ ಪಂಡಿತರು ವ್ಯಕ್ತಪಡಿಸಿದ್ದಾರೆ.
ಸರ್ಕಾರವೇ ಇಲ್ಲ.. ಟೇಕಾಫ್ ಎಲ್ಲಾಗುತ್ತೆ..?
ಇದೇ ವೇಳೆ ಮಾತ್ನಾಡಿದ ಸಿದ್ದು, ಬಿಜೆಪಿ ಸರ್ಕಾರ ರಚನೆಯಾಗಿ 25 ದಿನ ಯಡಿಯೂರಪ್ಪ ಒಬ್ಬರೇ ಸಿಎಂ ಆಗಿದ್ದರು. ಈಗ 17 ಸಚಿವರಿದ್ದಾರೆ. ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಇನ್ನೂ ಟೇಕಾಫ್ ಆಗೋದು ಹೇಗೆ ಅಂತ ವ್ಯಂಗ್ಯವಾಡಿದ್ರು.
ಈ ಮಧ್ಯೆ, ಅನರ್ಹ ಶಾಸಕರ ಸ್ಥಿತಿ ಕೂಡ ಡೋಲಾಯಮಾನವಾಗಿದೆ. ಅವರ ಮುಂದಿನ ನಡೆ ಏನು ಅನ್ನೋದು ಇನ್ನೂ ಗೊತ್ತಾಗಿಲ್ಲ. ಜೊತೆಗೆ ಉಪಚುನಾವಣೆ ಆಗುತ್ತಾ ಇಲ್ವಾ ಅನ್ನೋದರ ಬಗ್ಗೆ ಯಾರೂ ಮಾತಾಡ್ತಿಲ್ಲ. ಚುನಾವಣಾ ಆಯೋಗ ಕೂಡ ಉಪ ಚುನಾವಣೆ ಇಲ್ಲ ಎಂದು ಹೇಳಿದೆ.
ಇತ್ತ ಸಿದ್ದರಾಮಯ್ಯ ಮಾತ್ರ ಮಧ್ಯಂತರ ಚುನಾವಣೆ ಹಾಗೂ ಉಪ ಚುನಾವಣೆಗೆ ಕಾಂಗ್ರೆಸ್ ಕಾರ್ಯಕರ್ತರು ಸಿದ್ಧರಾಗಿ ಎಂದು ಘೋಷಣೆಯನ್ನೇ ಹೊರಡಿಸಿದ್ದಾರೆ. ಒಟ್ಟಿನಲ್ಲಿ ರಾಜ್ಯ ರಾಜಕೀಯದಲ್ಲಿ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಸಿದ್ದು ಹೇಳಿದ್ದು, ಮುಂದಿನ ದಿನಗಳಲ್ಲಿ ಏನಾಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?