ತುಮಕೂರು: ಡಿಸಿಎಂ ಅಶ್ವತ್ಥ ನಾರಾಯಣ್ ಎದುರು ಡಿಕೆ ಶಿವಕುಮಾರ್ ಅಭಿಮಾನಿಗಳು ಡಿಕೆಶಿ ಪರ ಘೋಷಣೆ ಕೂಗಿ ಮುಜುಗರ ಉಂಟುಮಾಡಿದ ಘಟನೆ ತುಮಕೂರಿನ ನೊಣವಿನಕೆರೆಯಲ್ಲಿ ನಡೆದಿದೆ. ಆದಿಚುಂಚನಗಿರಿ ಸಮುದಾಯ ಭವನ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಶ್ವತ್ಥ ನಾರಾಯಣ್ ಎದುರು ಒಕ್ಕಲಿಗ
ಸಮುದಾಯದ ಮುಖಂಡರೇ ಡಿಕೆಶಿ ಪರವಾಗಿ ಘೋಷಣೆ ಕೂಗಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಉಪಸ್ಥಿತರಿದ್ದರು.
ಈ ಮುಜುಗರಕ್ಕೆ ಪ್ರತಿಕ್ರಿಯೆಯನ್ನೂ ನೀಡಿದ ಡಿಸಿಎಂ , ಅವರವರ ಭಾವನೆಯನ್ನ ವ್ಯಕ್ತಪಡಿಸುತ್ತಾರೆ ಎಂದರು. ಇನ್ನು ಮೋದಿ ಮತ್ತು ಇಮ್ರಾನ್ ಖಾನ್ ಒಡಹುಟ್ಟಿದವರು ಎಂಬ ರಮಾನಾಥ್ ರೈ ಹೇಳಿಕೆ ವಿಚಾರವಾಗಿ ಕೆರಳಿದ ಡಿಸಿಎಂ, ಅಖಂಡ ಭಾರತ ಕಲ್ಪಿಸಿಕೊಂಡಾಗ ಪಾಕಿಸ್ತಾನ ಕೂಡಾ ಭಾರತದ್ದೆ ಆಗಿತ್ತು, ಹಾಗಾಗಿ ಅವರೆಲ್ಲಾ ನಮ್ಮ ಜೊತೆಯಲ್ಲಿ ಇದ್ದವರು, ನಮ್ಮ ಕನಸಿನಂತೆ ಅಖಂಡ ಭಾರತವನ್ನ ಬೆಳೆಸಬೇಕು ಎಂದರು.
ಸಚಿವ ಆರ್. ಆಶೋಕ್ ನಡುವೆ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಾವಿಬ್ಬರೂ ಕೈಹಿಡ್ಕೊಂಡು ಜೊತೆಯಲ್ಲಿ ಓಡಾಡಿದ್ದು ಮಾಧ್ಯಮದವರು ತೋರಿಸಿದ್ದಾರೆ, ಮುಂದಿನ ದಿನದಲ್ಲಿ ಜೊತೆ ಜೊತೆಯಲ್ಲಿ ನಾವಿರೋದನ್ನ ನೋಡಬಹುದು, ನಾನು ಅವರು ಅಣ್ಣತಮ್ಮಂದಿರು, ನಮ್ಮಿಬ್ಬರ ನಡುವೆ ಯಾವುದೇ ಮನಸ್ಥಾಪ ಇಲ್ಲ, ಅಶೋಕ್ ನನ್ನ ಹಿರಿಯಣ್ಣ ಎಂದರು.
ಬ್ರಾಂಡ್ ಬೆಂಗಳೂರು ಬೆಟರ್ ಬೆಂಗಳೂರು : ಡಿಕೆಶಿ
ಡಿಸಿಎಂ ಅಶ್ವತ್ಥ ನಾರಾಯಣ ಜೊತೆ ಶನೇಶ್ವರ ದೇವಾಲಕ್ಕೆ ಭೇಟಿ ನೀಡಿದ ಯಶ್
ಸಿಇಟಿ ಫಲಿತಾಂಶ ಪ್ರಕಟ: ಎಂಜಿನಿಯರಿಂಗ್ನಲ್ಲಿ ರಕ್ಷಿತಾ ಟಾಪರ್
ಬೆಂಗಳೂರು ಗಲಭೆ ಪ್ರಕರಣ :ಎಸ್ಡಿಪಿಐ ಬ್ಯಾನ್ಗೆ ಒತ್ತಾಯ ಮಾಡುತ್ತೇನೆ : ಡಿಸಿಎಂ ಅಶ್ವತ್ಥ್ ಅಶ್ವತ್ಥ ನಾರಾಯಣ
ಕೊರೊನಾ ಪರೀಕ್ಷೆಗೆ ಅಂತಿಮ ಬಿಎಸ್ಸಿ ವಿದ್ಯಾರ್ಥಿಗಳನ್ನ ಬಳಸಿಕೊಳ್ಳಿ: 24 ಗಂಟೆಯಲ್ಲಿ ವರದಿ ಕೊಡಲು ಡಿಸಿಎಂ ಅಶ್ವತ್ಥ ನಾರಾಯಣ ಸೂಚನೆ
ಕೊರೊನಾ ಸೋಂಕಿತರಿಂದ ದುಪ್ಪಟ್ಟು ಹಣ ಪಡೆದರೇ ಕಾನೂನು ಕ್ರಮ : ಡಿಸಿಎಂ ಅಶ್ವತ್ಥ ನಾರಾಯಣ್ ಎಚ್ಚರ