ನವದೆಹಲಿ : ನಾಳೆ ಶುಕ್ರವಾರ ಡಿಕೆ ಶಿವಕುಮಾರ್ ಅವರಿಗೆ ಒಂದ್ ರೀತಿ ಜಡ್ಜ್ಮೆಂಟ್ ಡೇ. ಯಾಕಂದ್ರೆ, ಇಡಿ ಕಸ್ಟಡಿ ಮುಗಿಯಲಿದ್ದು, ನಾಳೆ ಡಿಕೆಶಿ ಅವರನ್ನ ಕೋರ್ಟ್ಗೆ ಹಾಜರು ಮಾಡಲಿದ್ದಾರೆ. ಇದರಿಂದಾಗಿ ಡಿಕೆಶಿಗೆ ಜಾಮೀನು ಸಿಗುತ್ತಾ..? ಅಥವಾ ಮತ್ತಷ್ಟು ದಿನ ಇಡಿ ಕಸ್ಟಡಿಯಲ್ಲೇ ಇರಬೇಕಾ..? ಅಥವಾ ತಿಹಾರ್ ಜೈಲಿಗೆ ಕಳಿಸ್ತಾರಾ ಅನ್ನೋ ಟೆನ್ಷನ್ ಡಿಕೆಶಿಗೆ ಇದೆ.
ಈ ಟೆನ್ಷನ್ನಲ್ಲೇ ಡಿಕೆಶಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಇದರಿಂದಾಗಿ ಇವತ್ತು ಸಂಜೆ ಡಿಕೆ ಶಿವಕುಮಾರ್ ಅವರನ್ನ ದೆಹಲಿಯ ಆರ್ಎಂಎಲ್ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಬಿಪಿಯಲ್ಲಿ ಏರುಪೇರಾದ ಕಾರಣ, ಡಿಕೆಶಿಗೆ ಚಿಕಿತ್ಸೆ ನೀಡಲಾಯ್ತು.
ನಾಳೆ ಕೋರ್ಟ್ನಲ್ಲಿ ಡಿಕೆ ಪ್ರಕರಣ ಬರೋದ್ರಿಂದಲೇ ಈ ರೀತಿ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನಲಾಗಿದೆ. ಒಂದ್ವೇಳೆ ಜಾಮೀನು ಸಿಕ್ಕರೆ ಓಕೆ.. ಇಡಿ ಕಸ್ಟಡಿಗೆ ಸಿಕ್ಕರೂ ಓಕೆ. ಯಾಕಂದ್ರೆ, ಜೈಲಿಗೆ ಹೋಗದೆ ಮತ್ತಷ್ಟು ದಿನ ಇಡಿ ಕಸ್ಟಡಿಯಲ್ಲೇ ಇರಬಹುದು.. ಆದ್ರೆ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ರೆ, ತಿಹಾರ್ ಜೈಲು ಸೇರಬೇಕಾಗುತ್ತೆ. ಹೀಗಾಗಿ, ಡಿಕೆ ಶಿವಕುಮಾರ್ ಟೆನ್ಷನ್ಗೆ ಒಳಗಾಗಿದ್ದಾರೆ ಎನ್ನಲಾಗಿದೆ.
ಮಗುವಿನ ವಿಚಾರಕ್ಕೆ ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್!
RCB ತಂಡದಲ್ಲಿ ಅಬ್ಬರಿಸುತ್ತಿದ್ದಾನೆ ಸೆಹ್ವಾಗ್ ಸೋದರಳಿಯ!
ಬಿಳಿ ಅಥವಾ ಗುಲಾಬಿ ಇವೆರಡರಲ್ಲಿ ಯಾವ ಬಣ್ಣದ ಸೀಬೆಹಣ್ಣು ಆರೋಗ್ಯಕ್ಕೆ ಬೆಸ್ಟ್!
ಕೇಜ್ರಿವಾಲ್ ಪರ ಪ್ರತಿಭಟನೆಗೆ ಮುಂದಾದ ವಕೀಲರು : ಎಚ್ಚರಿಕೆ ನೀಡಿದ ಹೈಕೋರ್ಟ್
ದೆಹಲಿಯಲ್ಲಿ ಭೀಕರ ದುರಂತ.. 2 ಅಂತಸ್ತಿನ ಕಟ್ಟಡ ಧರಾಶಾಹಿ..ಇಬ್ಬರ ದುರ್ಮರಣ
ದೆಹಲಿ ಮದ್ಯ ಹಗರಣ ಕೇಸ್; ಕೆಸಿಆರ್ ಪುತ್ರಿ ಕೆ.ಕವಿತಾ ಬಂಧನ